ಕ್ರಿಸ್ಮಸ್ ಟ್ರೀ ಮನೆಯೊಳಗಿಡುವುದು ಅಪಾಯ

ಕ್ರಿಸ್ಮಸ್ ಗಿಡದಿಂದ ಅಂಥಾ ಅಪಾಯ ಏನಿದೆ ಅಂತೀರಾ? ಕ್ರಿಸ್ಮಸ್ ಗಿಡದಿಂದ ನಿಮ್ಮ ಆರೋಗ್ಯ ಹದಗೆಡಬಹುದು ಎನ್ನುತ್ತಾರೆ ಸಂಶೋಧಕರು.
ಡಿಸೆಂಬರ್ ತಿಂಗಳಿನಲ್ಲಿ ಉಸಿರಾಟ ಸಮಸ್ಯೆಯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಡೆಸಿದ ಸಂಶೋಧನೆಯಿಂದ ಈ ಅಂಶ ಬೆಳಕಿಗೆಬಂದಿದೆ. ಡಿಸೆಂಬರ್ ತಿಂಗಳಿಗೂ, ಉಸಿರಾಟಕ್ಕೂ ಎಲ್ಲಿದೆ ಲಿಂಕ್ ಅಂತೀರಾ? ಆ ಲಿಂಕ್ ಕ್ರಿಸ್ಮಸ್ ಗಿಡದಲ್ಲಿದೆ.
ಹೌದು. ಕ್ರಿಸ್ಮಸ್ ಗಿಡದಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಖಚಿತವಾಗಿದೆ. ಇದನ್ನು ಕ್ರಿಸ್ಮಸ್ ಟ್ರೀ ಸಿಂಡ್ರೋಮ್ ಎನ್ನುತ್ತಾರೆ. ಅಪ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ ನಡೆಸಿದ ಹೊಸ ಅಧ್ಯಯನ ಕ್ರಿಸ್ಮಸ್ ಗಿಡದಿಂದ ಉಸಿರಾಟದ ತೊಂದರೆ, ಅಲರ್ಜಿ, ಕೆಮ್ಮು, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ತಲೆದೋರುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.
ಕ್ರಿಸ್ಮಸ್ ಗಿಡವಾದ ಪೈನ್ ಟ್ರೀ ನ ಮೇಲಿನ ಸಣ್ಣ ಸಣ್ಣ ಧೂಳಿನ ಕಣಗಳು ಗಾಳಿಯಲ್ಲಿ ಸೇರಿಕೊಂಡು ಅದನ್ನು ಸೇವಿಸಿದ ಮನುಷ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಸ್ತಮಾ ಇದ್ದವರಿಗಂತು ಇದು ಹೆಚ್ಚು ಅಪಾಯಕಾರಿ ಎಂದು ತಿಳಿಸಿದ್ದಾರೆ.
28 ಕ್ರಿಸ್ಮಸ್ ಗಿಡದ ಚರ್ಮ ಮತ್ತು ಎಲೆಗಳನ್ನು ಪರಿಶೀಲಿಸಿದಾಗ 53 ರೀತಿಯ ಧೂಳಿನ ಕಣಗಳು ಕಂಡುಬಂದವು. ಇದರಿಂದ ಮೂಗಿನಲ್ಲಿ ತುರಿಕೆ, ಕಣ್ಣಿನಲ್ಲಿ ನೀರು ಸುರಿಯುವುದು, ಉಸಿರಾಟದಲ್ಲಿ ತೊಂದರೆ, ಎದೆ ನೋವು, ಸುಸ್ತಾಗುವಿಕೆ, ಕೆಮ್ಮು ಮತ್ತು ನಿದ್ದೆಯಲ್ಲಿ ಅಸಮತೋಲನ ಶೇಕಡಾ 70 ರಷ್ಟು ಕಂಡು ಬರುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ದೀರ್ಘಕಾಲಿಕ ಶ್ವಾಸಕೋಶದ ತೊಂದರೆಯನ್ನೂ ಉಂಟುಮಾಡುತ್ತದಂತೆ.
ಕ್ರಿಸ್ಮಸ್ ಸಮಯದಲ್ಲಿ ಅದನ್ನು ಬೆಚ್ಚಗಿನ ಸ್ಥಳದಲ್ಲಿ ಇಡುವುದರಿಂದ ಅನಾರೋಗ್ಯದ ಸಾಧ್ಯತೆ ಇನ್ನೂ ಹೆಚ್ಚು ಎಂದಿದ್ದಾರೆ.
ಗಾಳಿಯ ಮೂಲಕ ಈ ಧೂಳಿನ ಕಣಗಳು 35 ಕ್ಯುಬಿಕ್ ಫೀಟ್ ಗೆ 800 ಇದ್ದದ್ದು 5000ಕ್ಕೆ ಏರಿಕೆಯಾಗುತ್ತದೆ.
ಸಂಶೋಧನೆ ಕೈಗೊಂಡಿದ್ದ ಡಾ. ಲಾರೆನ್ಸ್ ಕರ್ಲಾಂಡ್ ಸ್ಕೈ ಕ್ರಿಸ್ಮಸ್ ಗಿಡಕ್ಕೂ ಮತ್ತು ಉಸಿರಾಟದ ತೊಂದರೆಯುಳ್ಳ ರೋಗಿಗಳಿಗೂ ನೇರ ಸಂಬಂಧ ಕಂಡುಬಂದಿದ್ದಾಗಿ ತಿಳಿಸಿದ್ದಾರೆ. ಆದ್ದರಿಂದ ಕ್ರಿಸ್ಮಸ್ ಗಿಡವನ್ನು ಮನೆಗೆ ತರುವ ಮುನ್ನ ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿದರೆ ಅಥವಾ ಕೃತಕ ಗಿಡವನ್ನು ಇಟ್ಟರೆ ಈ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದೂ ಸಲಹೆ ನೀಡಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications