Get Updates
Get notified of breaking news, exclusive insights, and must-see stories!

Melukote Deepavali: 200 ವರ್ಷಗಳಿಂದ ಭಾರತದ ಈ ಹಳ್ಳಿಯಲ್ಲಿ ದೀಪಾವಳಿ ಆಚರಿಸುತ್ತಿಲ್ಲ - ಯಾಕೆ ಗೊತ್ತಾ?

Melukote Deepavali: ದೀಪಾವಳಿಯು ಭಾರತದಲ್ಲಿ ಪ್ರತಿ ವರ್ಷ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ಬದುಕಿನಲ್ಲಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕು ತರುವ ಹಬ್ಬವಿದು. ಈ ದೀಪಾವಳಿ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಮಲೇಷ್ಯಾ, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಇಂತಹ ದೀಪಾವಳಿ ಹಬ್ಬವನ್ನು ಭಾರತದ ಒಂದು ಹಳ್ಳಿಯಲ್ಲಿ ಮಾತ್ರ ಆಚರಿಸುವುದಿಲ್ಲ.

ಸುಮಾರು 200 ವರ್ಷಗಳಿಂದ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿಲ್ಲ. ಬದಲಾಗಿ ಈ ದಿನವನ್ನು ಶೋಕ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದರೆ ಈ ಗ್ರಾಮದಲ್ಲಿ ದೀಪಾವಳಿಯನ್ನು ಏಕೆ ಆಚರಿಸುವುದಿಲ್ಲ ಮತ್ತು ಅದರ ಹಿಂದಿನ ನಿಜವಾದ ಕಾರಣವೇನು ಎಂದು ತಿಳಿಯೋಣ.

diwali-has-not-been-celebrated-in-this-part

ದೀಪಾವಳಿಯಂದು ಮೇಲುಕೋಟೆ ಕತ್ತಲೆಯಲ್ಲಿ ಮುಳುಗುತ್ತೆ

ಕರ್ನಾಟಕ ರಾಜ್ಯದ ಬೆಂಗಳೂರಿನಿಂದ 100 ಕಿಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆ ಒಂದು ಸಣ್ಣ ಹಳ್ಳಿ. ಈ ಕೋಟೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸ್ಥಳವು 12 ವರ್ಷಗಳಿಗೂ ಹೆಚ್ಚು ಕಾಲ ಶ್ರೀ ವೈಷ್ಣವ ಸಂತ ರಾಮಾನುಜಾಚಾರ್ಯರ ನಿವಾಸವಾಗಿತ್ತು. ಇದು ನಾರಾಯಣ ಸ್ವಾಮಿ ದೇವಾಲಯವನ್ನು ಮತ್ತು ಇತರ ಅನೇಕ ಪ್ರಮುಖ ದೇವಾಲಯಗಳನ್ನು ಹೊಂದಿದೆ. ಈ ಸ್ಥಳವು ಪ್ರಾಚೀನ ಕಲಿಕೆಯ ಕೇಂದ್ರವೆಂದು ಹೆಸರುವಾಸಿಯಾಗಿದೆ.

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲ

ಮೇಲುಕೋಟೆಯಲ್ಲಿ 200 ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿಲ್ಲ. ಇದಕ್ಕೆ ಅತ್ಯಂತ ಬಲಿಷ್ಠ ಇಸ್ಲಾಮಿಕ್ ಯೋಧ ಎಂದು ಕರೆಯಲ್ಪಡುವ ಟಿಪ್ಪು ಸುಲ್ತಾನ್ ಕಾರಣ. ಮೇಲುಕೋಡೆಯಲ್ಲಿ ಅಯ್ಯಂಗಾರ್ ಬ್ರಾಹ್ಮಣರು ಎಂದು ಕರೆಯಲ್ಪಡುವ ಸಮುದಾಯವಿದೆ. ಈ ಸಮುದಾಯಗಳು ಇಂದಿಗೂ ದೀಪಾವಳಿಯನ್ನು ಆಚರಿಸುವುದಿಲ್ಲ. ಈ ಸಮುದಾಯಕ್ಕೆ ದೀಪಾವಳಿ ಶೋಕ ದಿನವಾಗಿದೆ. ಟಿಪ್ಪು ಸುಲ್ತಾನ್ ಏನ್ ಮಾಡಿದ್ರು ಅನ್ನೋದನ್ನ ತಿಳಿಯಲು ಮುಂದೆ ಓದಿ.

ಅಯ್ಯಂಗಾರ್ ಬ್ರಾಹ್ಮಣರ ಹತ್ಯೆ

ಈ ಕಥೆಯು ಟಿಪ್ಪು ಸುಲ್ತಾನ್ ದಬ್ಬಾಳಿಕೆಯ ಆಳ್ವಿಕೆಗೆ ಸಂಬಂಧಿಸಿದೆ. 1600ರ ದಶಕದಲ್ಲಿ ಈ ಪ್ರದೇಶದಲ್ಲಿ ಒಡೆಯರ್ ಆಳ್ವಿಕೆ ನಡೆಸುತ್ತಿದ್ದರು. ಮಂಡ್ಯಂ ಅಯ್ಯಂಗಾರ್‌ಗಳು ಚಲುವನಾರಾಯಣ ದೇವಸ್ಥಾನದ ಅಧಿಕಾರ ಸೇರಿದಂತೆ ಪ್ರಮುಖ ಆಡಳಿತ ಮತ್ತು ಇತರ ಸ್ಥಾನಗಳನ್ನು ಪಡೆದರು.

ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಮಂಡ್ಯಂ ಅಯ್ಯಂಗಾರ್‌ಗಳು ದೀಪಾವಳಿ ಹಬ್ಬವನ್ನು ಆಚರಿಸಲು ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿರುವ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಭೆ ಸೇರಿದ್ದರು. ಈ ವಿಷಯ ತಿಳಿದ ಟಿಪ್ಪು ಸುಲ್ತಾನ್‌ ತನ್ನ ಹಿಂದಿನ ಸೇಡು ತೀರಿಸಿಕೊಳ್ಳಲು ಹಬ್ಬದ ದಿನವನ್ನು ಸೂಕ್ತವೆಂದು ಆಯ್ಕೆ ಮಾಡಿಕೊಂಡನು.

ಹಿಂದೂಗಳ ಮೇಲಿನ ದ್ವೇಷದಿಂದ ಅವನು ಇಡೀ ಸಮುದಾಯದ ಹತ್ಯಾಕಾಂಡಕ್ಕೆ ಆದೇಶಿಸಿದನು. ಸುಮಾರು 700 ರಿಂದ 800 ಕ್ಕೂ ಹೆಚ್ಚು ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸೈನ್ಯವು ಕೊಂದು ಹಾಕಿದರು. ಅಲ್ಲಿನ ಜನರನ್ನು ಪಲಾಯನ ಮಾಡಲು ಒತ್ತಾಯಿಸಲಾಯಿತು. ಮೇಲ್ಕೋಟೆ ರಾತ್ರೋರಾತ್ರಿ ಪ್ರೇತ ಪಟ್ಟಣವಾಗಿ ಮಾರ್ಪಟ್ಟಿತ್ತು. ಹಬ್ಬದ ದಿನದಂದೇ ನಡೆದ ಈ ದಾರುಣ ಘಟನೆಯಿಂದ ಇಂದಿಗೂ ಅಲ್ಲಿನ ಜನರು ದೀಪಾವಳಿ ಹಬ್ಬವನ್ನು ಸಂಭ್ರಮಿಸುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+