ವ್ಯಕ್ತಿ ಚಿತ್ರ : ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್
ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಗುರುವಾರ(ಆಗಸ್ಟ್ 9) ನಡೆದದ್ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರು 125 ಮತಗಳನ್ನು ಗಳಿಸಿ, ಜಯ ದಾಖಲಿಸಿದ್ದಾರೆ.
ಯುಪಿಎಯ ಬಿಕೆ ಹರಿಪ್ರಸಾದ್ ಅವರು 105 ಮತಗಳನ್ನು ಮಾತ್ರ ಗಳಿಸಿದರು.ಪಿಜೆ ಕುರಿಯನ್ ಅವರ ನಿವೃತ್ತಿ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ನೂತನ ಉಪ ಸಭಾಪತಿಯಾಗಿ ಹರಿವಂಶ್ ಅವರು ಆಯ್ಕೆಯಾಗಿದ್ದಾರೆ ಎಂದು ರಾಜ್ಯಸಭೆ ಚೇರ್ಮನ್ ವೆಂಕಯ್ಯ ನಾಯ್ಡು ಅವರು ಘೋಷಿಸಿದರು.
ರಾಜ್ಯಸಭೆ ಉಪಸಭಾಪತಿ ಚುನಾವಣೆ: NDA ಅಭ್ಯರ್ಥಿಗೆ ಗೆಲುವು
ರಾಜ್ಯಸಭೆ ಉಪಸಭಾಪತಿ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ (3 ಮತಗಳಿದ್ದವು) ಬಹಿಷ್ಕರಿಸಿದ್ದರೆ, ಕೊನೆಯ ಕ್ಷಣದಲ್ಲಿ ಟಿಆರ್ ಎಸ್ ಪಕ್ಷ ತನ್ನ ಬೆಂಬಲವನ್ನು ಎನ್ ಡಿಎ ಅಭ್ಯರ್ಥಿಗೆ ನೀಡಿತು. ಎನ್ಡಿಎ ಘೋಷಿಸಿರುವ ಅಭ್ಯರ್ಥಿಯ ವಿಷಯದಲ್ಲಿ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ಪುಣೆ ಮೂಲದ ವಂದನಾ ಅವರಿಗೆ ಶಿವಸೇನಾ ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬ ವಾದ ಬಂದಿತ್ತು.
500 ರು ಮಾಸಿಕ ಸಂಬಳದೊಂದಿಗೆ ವೃತ್ತಿ ಬದುಕು ಆರಂಭಿಸಿದ ಹರಿವಂಶ್ ಅವರು ಇಂದು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಹರಿವಂಶ್ ಕುರಿತ ಇನ್ನಷ್ಟು ವಿವರ ಇಲ್ಲಿದೆ...
ಹರಿವಂಶ ನಾರಾಯಣ ಸಿಂಗ್
*
ಹರಿವಂಶ
ನಾರಾಯಣ
ಸಿಂಗ್
ಅವರು
1956ರ
ಜೂನ್
30ರಂದು
ಉತ್ತರ
ಪ್ರದೇಶದಲ್ಲಿ
ಜನಿಸಿದರು.
*
ಬನಾರಸ್
ಹಿಂದು
ವಿಶ್ವವಿದ್ಯಾಲಯ(BHU)
ದಿಂದ
ಪದವಿ
ಪಡೆದಿದ್ದಾರೆ.
*
BHU
ನಿಂದಲೇ
ಪತ್ರಿಕೋದ್ಯಮದಲ್ಲಿ
ಪಿಜಿ
ಡಿಪ್ಲೋಮಾ
ಪಡೆದುಕೊಂಡರು.
*
500ರು
ತಿಂಗಳ
ಸಂಬಳದೊಂದಿಗೆ
ವೃತ್ತಿ
ಬದುಕು
ಆರಂಭಿಸಿದರು.
*
ಕಾಲೇಜು
ದಿನಗಳಲ್ಲಿ
ಜಯಪ್ರಕಾಶ್
ನಾರಾಯಣ್(ಜೆಪಿ
ಚಳವಳಿ)
ಅವರ
ಸಾಮಾಜಿಕ
ಕ್ರಾಂತಿಯಿಂದ
ಪ್ರಭಾವಿತರಾದರು.
1974ರಲ್ಲಿ
ಚಳವಳಿಯಲ್ಲಿ
ಸಕ್ರಿಯರಾಗಿ
ಪಾಲ್ಗೊಂಡರು.
ಟೈಮ್ ಆಫ್ ಇಂಡಿಯಾದಲ್ಲಿ ಟ್ರೈನಿ
*
1977ರಲ್ಲಿ
ಟೈಮ್
ಆಫ್
ಇಂಡಿಯಾದಲ್ಲಿ
ಟ್ರೈನಿ
ಪತ್ರಕರ್ತರಾಗಿದ್ದರು.
*
ಧರ್ಮಯುಗ್
ಮ್ಯಾಗಜೀನ್
ನಲ್ಲಿ
1981ರ
ತನಕ
ಕಾರ್ಯ
ನಿರ್ವಹಿಸಿದರು.
*
1981ರಿಂದ
1984ರ
ತನಕ
ಬ್ಯಾಂಕ್
ಆಫ್
ಇಂಡಿಯಾದಲ್ಲಿದ್ದರು.
ನಂತರ
ಅಮೃತ್
ಬಜಾರ್
ಪತ್ರಿಕಾದ
ರವಿವಾರ್
ಮ್ಯಾಗಜೀನ್
ನ
ಸಂಪಾದಕರಾಗಿದ್ದರು.
*
1989ರಲ್ಲಿ
ರಾಂಚಿಯಲ್ಲಿ
ಉಷಾ
ಮಾರ್ಟಿನ್
ಸಮೂಹದ
ಪ್ರಭಾತ್
ಖಬರ್
ನ
ಜವಾಬ್ದಾರಿ
ವಹಿಸಿಕೊಂಡರು.
ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು
*
ಪ್ರಭಾತ್
ಖಬರ್
ಸುಧಾರಣೆ
ಮಾಡಿದ್ದಲ್ಲದೆ,
ಜಾರ್ಖಂಡ್,
ಬಿಹಾರ
ಹಾಗೂ
ಪಶ್ಚಿಮ
ಬಂಗಾಳಕ್ಕೆ
ವಿಸ್ತರಿಸಿದರು.
*
ಹರಿವಂಶ
ನಾರಾಯಣ
ಸಿಂಗ್
ಅವರು
ಮಾಜಿ
ಪ್ರಧಾನಿ
ಚಂದ್ರಶೇಖರ್
ಅವರಿಗೆ
ಮಾಧ್ಯಮ
ಸಲಹೆಗಾರರಾಗಿ
ಕೆಲಸ
ಮಾಡಿದ್ದರು.
*
ನಿತೀಶ್
ಕುಮಾರ್
ಅವರ
ಜೆಡಿ-ಯುವಿನಿಂದ
ಪ್ರಥಮ
ಬಾರಿಗೆ
ಸಂಸದರಾಗಿ
ನಾಮಾಂಕಿತಗೊಂಡರು.
*
ಅವಿರೋಧವಾಗಿ
ರಾಜ್ಯಸಭೆಗೆ
ಆಯ್ಕೆಯಾದ
ಹಿನ್ನಲೆಯಲ್ಲಿ
ನಾಮಪತ್ರದ
ಶುಲ್ಕ
10,000
ರು
ಗಳನ್ನು
ರೀಫಂಡ್
ಆಗಿ
ಪಡೆದುಕೊಂಡಿದ್ದಾರೆ.
ಗೆಲ್ಲಲು ಎಷ್ಟು ಮತ ಬೇಕಿತ್ತು?
ಚುನಾವಣೆಗೂ ಮುನ್ನ ಇದ್ದ ಲೆಕ್ಕಾಚಾರ ಹೀಗಿತ್ತು: 245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ. ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ. ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ. ಯುಪಿಎ ಪರ 112 ಮತಗಳಿವೆ, ಎನ್ಡಿಎ 90 +42(ಇನ್ನೂ ನಿರ್ಧಾರವಾಗದ ಸದಸ್ಯರು) ಹೊಂದಿದೆ.