Get Updates
Get notified of breaking news, exclusive insights, and must-see stories!

ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿ, ಬಸ್ಕಿ ಹೊಡೆದು, ಬಿಜೆಪಿ ಅಭ್ಯರ್ಥಿ ಪ್ರಚಾರ

ಲಕ್ನೋ, ಫೆಬ್ರವರಿ 23: ಯುಪಿಯ ರಾಬರ್ಟ್ಸ್‌ಗಂಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೂಪೇಶ್ ಚೌಬೆ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಸಾರ್ವಜನಿಕರಿಂದ ಕ್ಷಮೆ ಕೇಳಿದರು. ಕುರ್ಚಿಯ ಮೇಲೆ ನಿಂತು ಜನರ ಮುಂದೆ ಕಿವಿ ಹಿಡಿದು ಕ್ಷಮೆ ಕೇಳಿದ್ದಾರೆ. ಸೋನ್‌ಭದ್ರದಲ್ಲಿ ಏಳನೇ ಹಂತದ ವಿಧಾನಸಭಾ ಚುನಾವಣೆಗೆ ಮಾರ್ಚ್ 7 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಎಲ್ಲ ನಾಯಕರು ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸಿ ಸಾರ್ವಜನಿಕರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಆದರೆ ಇಲ್ಲಿನ ರಾಬರ್ಟ್ಸ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಶಾಸಕ ಮತ್ತು ಅಭ್ಯರ್ಥಿ ಭೂಪೇಶ್ ಚೌಬೆ ಅವರ ವಿಭಿನ್ನ ಶೈಲಿಯಲ್ಲಿ ಪ್ರಚಾರ ಮಾಡುವುದು ಕಂಡುಬಂದಿದೆ. ಚುನಾವಣಾ ಪ್ರಚಾರದ ವೇಳೆ ಭೂಪೇಶ್ ಚೌಬೆ ಕುರ್ಚಿ ಮೇಲೆ ನಿಂತು ಅವರ ಕಿವಿ ಹಿಡಿದರು. ಇದರ ನಂತರ, ಅವರು ಕುರ್ಚಿಯ ಮೇಲೆ ಕುಳಿತು ಐದು ವರ್ಷಗಳಲ್ಲಿ ಮಾಡಿದ ತಪ್ಪುಗಳಿಗೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದರು.

ಕಿವಿ ಹಿಡಿದು ಕ್ಷಮೆ ಯಾಚಿಸಿದ ಬಿಜೆಪಿ ಅಭ್ಯರ್ಥಿ

ಕಿವಿ ಹಿಡಿದು ಕ್ಷಮೆ ಯಾಚಿಸಿದ ಬಿಜೆಪಿ ಅಭ್ಯರ್ಥಿ

ಬಿಜೆಪಿ ಅಭ್ಯರ್ಥಿ ಭೂಪೇಶ್ ಚೌಬೆ ಕುರ್ಚಿಯ ಮೇಲೆ ನಿಂತು ತಮ್ಮ ಎರಡೂ ಕಿವಿಗಳನ್ನು ಹಿಡಿದುಕೊಂಡು ತಾವು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದರು. 2017ರ ಚುನಾವಣೆಯಲ್ಲಿ ದೇವರಂತಹ ಕಾರ್ಯಕರ್ತರು ನೀವೆಲ್ಲಾ ಹೇಗೆ ಆಶೀರ್ವಾದ ನೀಡಿದ್ದೀರೋ ಅದೇ ರೀತಿ ಈ ಬಾರಿಯೂ ನಿಮ್ಮ ಆಶೀರ್ವಾದ ನೀಡಬೇಕು ಎಂದು ಭೂಪೇಶ್ ಚೌಬೆ ಹೇಳಿದರು. ಇದರಿಂದ ರಾಬರ್ಟ್ಸ್ ಗಂಜ್ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಕಮಲ ಅರಳಬಹುದು. ಇದರೊಂದಿಗೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಶಾಸಕರು ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ ವೇದಿಕೆಯಲ್ಲೇ ಸಭೆ ನಡೆಸಿದರು.

ಭಾನು ಪ್ರತಾಪ್ ಮತಯಾಚನೆ

ಭಾನು ಪ್ರತಾಪ್ ಮತಯಾಚನೆ

ಈ ಸಂದರ್ಭದಲ್ಲಿ ಭೂಪೇಶ್ ಚೌಬೆ ಅವರೊಂದಿಗೆ ಜಾರ್ಖಂಡ್ ಮಾಜಿ ಆರೋಗ್ಯ ಸಚಿವ ಮತ್ತು ಶಾಸಕ ಭಾನು ಪ್ರತಾಪ್ ಶಾಹಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮತ ಯಾಚನೆ ಮಾಡಿದ ಭಾನು ಪ್ರತಾಪ್, ತಮ್ಮ ಹೋರಾಟ ಓವೈಸಿ ಮತ್ತು ಕಾಂಗ್ರೆಸ್‌ನಂತಹ ಜನರೊಂದಿಗೆ ಹೊರತು ಎಸ್‌ಪಿ ಮತ್ತು ಬಿಎಸ್‌ಪಿ ಜೊತೆ ಅಲ್ಲ ಎಂದು ಹೇಳಿದರು. ಮೂರು ಹಂತದ ವಿಧಾನಸಭಾ ಚುನಾವಣೆಗಳಲ್ಲಿ ಎಸ್‌ಪಿ-ಬಿಎಸ್‌ಪಿ ಅರ್ಧಕ್ಕೆ ಕುಸಿದಿದ್ದು, ಏಳನೇ ಹಂತದಲ್ಲಿ ಇಲ್ಲಿಂದ ಸಂಪೂರ್ಣ ಮುಕ್ತವಾಗಲಿದೆ ಎಂದರು.

ಭೂಪೇಶ್ ಚೌಬೆಯನ್ನು ಹೊಗಳಿದ ಭಾನು ಪ್ರತಾಪ್

ಭೂಪೇಶ್ ಚೌಬೆಯನ್ನು ಹೊಗಳಿದ ಭಾನು ಪ್ರತಾಪ್

ಭಾನು ಪ್ರತಾಪ್ ಅವರು ಬಿಜೆಪಿ ಅಭ್ಯರ್ಥಿ ಭೂಪೇಶ್ ಚೌಬೆ ಅತ್ಯುತ್ತಮ ಎಂದು ಹೊಗಳಿದ್ದಾರೆ. ಇಲ್ಲಿನ ಬಾಗೇಸೋಟಿ ಗ್ರಾಮವು ಸ್ವಾತಂತ್ರ್ಯ ನಂತರ ರಸ್ತೆ ಮತ್ತು ಸೇತುವೆಗಾಗಿ ಹಾತೊರೆಯುತ್ತಿತ್ತು. ಇದನ್ನು ಸದರ್ ಶಾಸಕ ಭೂಪೇಶ್ ಚೌಬೆ ಪರಿಹರಿಸಿದ್ದಾರೆ. ಮಿರ್ಜಾಪುರ ವಿಭಾಗದಲ್ಲಿ ಶಾಸಕರೊಬ್ಬರು ಗರಿಷ್ಠ ಕೆಲಸ ಮಾಡಿದ್ದಾರೆ ಅಂದರೆ ಅದು ಭೂಪೇಶ್ ಚೌಬೆ. ಬಿಜೆಪಿ ಆಡಳಿತದಲ್ಲಿ ಗೂಂಡಾಗಳು ಮಾಫಿಯಾ ಮಾಡಿದವರು ಜೈಲಿನಲ್ಲಿದ್ದಾರೆ. ಮೋದಿ, ಯೋಗಿ ನಾಯಕತ್ವದಲ್ಲಿ ದೇಶ ಮತ್ತು ರಾಜ್ಯದ ಅಭಿವೃದ್ಧಿಯನ್ನು ಕಂಡು ಪ್ರತಿಪಕ್ಷಗಳಿಗೆ ನಿದ್ದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಕೇವಲ ಪ್ರಚಾರ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎಂದರು.

ಇನ್ನೂ ಮೂರು ಹಂತದ ಚುನಾವಣೆ ಬಾಕಿ

ಇನ್ನೂ ಮೂರು ಹಂತದ ಚುನಾವಣೆ ಬಾಕಿ

ಉತ್ತರಪ್ರದೇಶದಲ್ಲಿ ಈಗಾಗಲೇ ಮೂರನೇ ಹಂತದ ಮತದಾನ ಮುಗಿದಿದ್ದು, ಇಂದು (ಫೆಬ್ರವರಿ 23) ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ನಾಲ್ಕನೇ ಹಂತದಲ್ಲಿ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 59 ವಿಧಾನಸಭಾ ಸ್ಥಾನಗಳಿಗೆ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕನೇ ಹಂತದ ಮತದಾನವೂ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಸಂಜೆ 6 ರವರೆಗೆ ನಡೆಯಲಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದ್ದು ಈಗಾಗಲೇ ಮೂರು ಹಂತದ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ನಾಲ್ಕು ಹಂತದ ಮತದಾನ ನಡೆಯಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+