ಡಿಸಿಎಂ ಪಳನಿಸ್ವಾಮಿ, ಎಎಂಎಂಕೆ ದಿನಕರನ್ ಚರಾಸ್ತಿ ಏರಿಕೆ
ಚೆನ್ನೈ, ಮಾರ್ಚ್ 16: ತಮಿಳುನಾಡಿನ ಪ್ರಮುಖ ರಾಜಕಾರಣಿಗಳಾದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಡಿಸಿಎಂ ಓ ಪನ್ನೀರ್ ಸೆಲ್ವಂ, ಉದಯನಿಧಿ ಸ್ಟಾಲಿನ್, ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಸೇರಿದಂತೆ 980ಕ್ಕೂ ಅಧಿಕ ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಮಾಹಿತಿ ಸಿಗುತ್ತಿದೆ.
ಪ್ರಮುಖ ರಾಜಕಾರಣಿಗಳ ಪೈಕಿ ತಮಿಳುನಾಡು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹಾಗೂ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರಿಬ್ಬರ ಚರಾಸ್ತಿ ಮೌಲ್ಯ ಏರಿಕೆ ಕಂಡಿದೆ. 2016ರಲ್ಲಿ 33.20ಲಕ್ಷ ರು ಹೊಂದಿದ್ದ ಓಪಿಎಸ್ ಈಗ 61.19 ಲಕ್ಷ ರು ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಥೇಣಿ ಜಿಲ್ಲೆಯ ಬೋದಿನಾಯಕ್ಕಾನರ್ ಕ್ಷೇತ್ರದಿಂದ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆ ಬಯಸಿದ್ದಾರೆ.
ಮೂರು ನಾಲ್ಕು ಚಕ್ರದ ವಾಹನ, ಉಪ ಮುಖ್ಯಮಂತ್ರಿಯಾಗಿ ಸಿಗುವ ಸಂಬಳವೇ ಆದಾಯ ಮೂಲ, ಪತ್ನಿ ಕೃಷಿಕರಾಗಿದ್ದು, ಆದಾಯಕ್ಕೆ ಅದು ಮೂಲ ಎಂದು ತೋರಿಸಿದ್ದಾರೆ. 65,55,411 ರು ಸಾಲ ಹೊಂದಿದ್ದಾರೆ. ಓಪಿಎಸ್ ಪತ್ನಿ ಚರಾಸ್ತಿ 4.57 ಕೋಟಿ ರು ನಷ್ಟು ಹೊಂದಿದ್ದಾರೆ.

ಟಿಟಿವಿ ದಿನಕರನ್ ಆಸ್ತಿ ಮೌಲ್ಯ: ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖಂಡ ಟಿಟಿವಿ ದಿನಕರನ್ ರಾಧಕೃಷ್ಣನ್ ನಗರ(ಆರ್ ಕೆ ) ಉಪ ಚುನಾವಣೆಯಲ್ಲಿ ಡಿಸೆಂಬರ್ 2017ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಈ ಬಾರಿ ತೂತ್ತುಕುಡಿ(tuticorin) ಜಿಲ್ಲೆಯ ಕೋವಿಲ್ಪಟ್ಟಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ದಿನಕರನ್ ಚರಾಸ್ತಿ 57.44 ಲಕ್ಷ ರು ಇದೆ. ಫೆರಾ ಕಾಯ್ದೆ ಉಲ್ಲಂಘನೆ ದಂಡ ರೂಪದಲ್ಲಿ ಸರ್ಕಾರಕ್ಕೆ 28 ಲಕ್ಷ ಬಾಕಿ ಪಾವತಿ ಬಗ್ಗೆ ಉಲ್ಲೇಖಿಸಿದ್ದಾರೆ. 14.25 ಲಕ್ಷ ಸಾಲ ಹೊಂದಿದ್ದಾರೆ.
ದಿನಕರನ್ ಪತ್ನಿ ಚರಾಸ್ತಿ 7.66 ಕೋಟಿ ರು ಹಾಗೂ ಸ್ಥಿರಾಸ್ತಿ 2.43 ಕೋಟಿ ರು ಹೊಂದಿದ್ದು, 5.82 ಕೋಟಿ ರು ಸಾಲ ಹೊಂದಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications