Get Updates
Get notified of breaking news, exclusive insights, and must-see stories!

ಅಯೋಧ್ಯೆಯನ್ನು ವಿಶ್ವದ ಪವಿತ್ರ ಧಾರ್ಮಿಕ ಪ್ರವಾಸಿ ತಾಣವಾಗಿಸಲು ಚರ್ಚೆ: ವಿವರ ಇಲ್ಲಿದೆ

ಹಿಂದೂಗಳ ಪವಿತ್ರ ಸ್ಥಳವಾದ ಶ್ರೀರಾಮನ ಜನ್ಮಸ್ಥಳವು ಅಯೋಧ್ಯೆಯಲ್ಲಿ ಕಾಶಿ ಮಾದರಿಯಲ್ಲಿ ಶ್ರೀರಾಮ ಕಾರಿಡಾರ್ ನಿರ್ಮಿಸುವ ಯೋಜನೆ ಕುರಿತು ಸಂತರು, ಯೋಗಿ ಸರ್ಕಾರಕ್ಕೆ ಶ್ರೀರಾಮ ನಗರಿಯಲ್ಲಿ ಅದ್ಭುತ ಯೋಜನೆಯಿಂದ ಅಯೋಧ್ಯೆಯನ್ನು ಅಲಂಕರಿಸಲಾಗುವುದು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಶ್ರೀರಾಮ ಜನ್ಮಭೂಮಿಯು ವಿಶ್ವವನ್ನು ಗಮನ ಸೆಳೆಯುವ ರೀತಿಯಲ್ಲಿ ನಿರ್ಮಾಣದ ಕಾರ್ಯಗಳು ಭರದಿಂದ ಸಾಗುತ್ತಿವೆ. ಶ್ರೀರಾಮ ಜನ್ಮಭೂಮಿಯು ಆಯೋಧ್ಯವನ್ನು ವಿಶ್ವದ ಪವಿತ್ರ ಧಾರ್ಮಿಕ ಪ್ರವಾಸಿ ತಾಣವಾಗಿಯೂ ಆಕರ್ಷಿಸಿಸಬೇಕು ಎಂಬವುದು ಯುಪಿ ಸಿಎಂ ಯೋಗಿ ಅವರನ್ನು ವಿಶೇಷ ಸಭೆಯಲ್ಲಿ ಬುಧವಾರ ಭೇಟಿ ಮಾಡಿರುವ ರಾಮಲಲ್ಲಾದ ಪ್ರಧಾನ ಅರ್ಚಕ, ಆಚಾರ್ಯ ಸತ್ಯೇಂದ್ರ ದಾಸ್ ಹಾಗೂ ಆಯೋಧ್ಯಯ ಸಾಧು-ಸಂತರು ಸಭೆಯಲ್ಲಿ ಹೇಳಿದ್ದಾರೆ.

ಹೌದು ಶ್ರೀರಾಮ ಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆಯನ್ನು ಪುನರಾಭಿವೃದ್ಧಿ ಮಾಡಲು ರಾಜ್ಯ ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ರಾಮನಗರ, ಅಯೋಧ್ಯೆ ವಿಶ್ವದ ವಿಶಿಷ್ಟ ನಗರವಾಗಿ ಕಾಣಿಸಿಕೊಳ್ಳಬೇಕು. ಇದರಡಿಯಲ್ಲಿ ಕಾಶಿ ಮಾದರಿಯಲ್ಲಿ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಹಾಗೂ ರಾಮಕೋಟ್‌ನಲ್ಲಿ ಶ್ರೀರಾಮ ಕಾರಿಡಾರ್‌ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.

ಯುಪಿ ಸರಕಾರದ ಈ ಯೋಜನೆ ಕುರಿತು ಸಂತರು ಅದ್ಭುತ ನಗರಕ್ಕೆ ಸರಕಾರದ ಅದ್ಭುತ ಯೋಜನೆಯನ್ನು ಹೇಳುತ್ತಿದ್ದಾರೆ. ಅಲ್ಲದೆ, ವಿಶ್ವದಲ್ಲೇ ರಾಮಮಂದಿರ ವಿಶಿಷ್ಟವಾಗಲಿದೆ, ರಾಮ್‌ಕೋಟ್‌ನಲ್ಲಿ ಕಾರಿಡಾರ್ ನಿರ್ಮಾಣವಾಗಲಿದೆ ಎಂದು ಸಂತರು ಅದ್ಭುತ ನಗರದ ಅದ್ಭುತ ಯೋಜನೆ ಹೇಳಿದ್ದಾರೆ.

 ವೈದಿಕ ನಗರವನ್ನಾಗಿಸುವ ಯೋಜನೆಗೆ ಚಾಲನೆ

ವೈದಿಕ ನಗರವನ್ನಾಗಿಸುವ ಯೋಜನೆಗೆ ಚಾಲನೆ

ರಾಮನಗರಿ ಅಯೋಧ್ಯೆಯನ್ನು ಸ್ಮಾರ್ಟ್ ಮತ್ತು ವೈದಿಕ ನಗರವನ್ನಾಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಮೊದಲ ಮಾದರಿ ರೈಲು ನಿಲ್ದಾಣ, ಅಂತರಾಷ್ಟ್ರೀಯ ಶ್ರೀರಾಮ ವಿಮಾನ ನಿಲ್ದಾಣ, ಅಂತರರಾಜ್ಯ ಬಸ್ ನಿಲ್ದಾಣಗಳನ್ನು ಭಕ್ತರು ಮತ್ತು ಪ್ರವಾಸಿಗರಿಗಾಗಿ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಅಯೋಧ್ಯೆಯನ್ನು ಅಲಂಕರಿಸುವ ಬಜೆಟ್ ಪ್ಲಾನ್ ನಲ್ಲಿ ಕೆಲಸ ಮಾಡಲಾಗುತ್ತಿದೆ. ಇದೀಗ ಅಯೋಧ್ಯೆಯ ಮುಖ್ಯ ರಸ್ತೆಗೂ 700 ಕೋಟಿ ನೀಡಲಾಗಿದ್ದು, ಇದರೊಂದಿಗೆ ಶ್ರೀರಾಮ ಕಾರಿಡಾರ್ ಮಾಡಲು ನಿರ್ಧರಿಸಲಾಗಿದೆ. ಸಚಿವ ಸಂಪುಟದ ಒಪ್ಪಿಗೆ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಯೋಗಿ ಸರ್ಕಾರ ಅಯೋಧ್ಯೆಯನ್ನು ಅದ್ಭುತ ನಗರವನ್ನಾಗಿ ಮಾಡುತ್ತಿದೆ

 ಕಾರಿಡಾರ್ ನಿರ್ಮಾಣವಾದರೆ ಸ್ವಾಗತಾರ್ಹ

ಕಾರಿಡಾರ್ ನಿರ್ಮಾಣವಾದರೆ ಸ್ವಾಗತಾರ್ಹ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿರುವ ದೈವಿಕ ಅಲೌಕಿಕ ರೂಪವನ್ನು ಹೊಂದಿರಲಿ ಎಂಬುದು ಪ್ರಧಾನಿಯವರ ಆಶಯವಾಗಿದೆ ಎಂದು ಅಯೋಧ್ಯೆಯ ಹನುಮಾನ್‌ಗರ್ಹಿಯ ಮಹಂತ್ ರಾಜು ದಾಸ್ ಹೇಳಿದರು, ಇದಕ್ಕಾಗಿ ಪ್ರಧಾನಿ ಅಯೋಧ್ಯೆಯ ಅಭಿವೃದ್ಧಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಕಾಶಿ ಮಾದರಿಯಲ್ಲಿ ಕಾರಿಡಾರ್ ನಿರ್ಮಾಣವಾದರೆ ಸ್ವಾಗತಾರ್ಹ ಎಂದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಿಂದ ಚಿತ್ರಣವೇ ಬದಲಾಗಿದೆ. ಕಾರಿಡಾರ್‍‌ನಂತೆ ಅಯೋಧ್ಯೆಯಲ್ಲಿ ಕಾರಿಡಾರ್ ನಿರ್ಮಾಣವೂ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಿದರು.

 ಅಯೋಧ್ಯೆಯನ್ನು ನೋಡಿ ಆಕರ್ಷಿಸಬೇಕು

ಅಯೋಧ್ಯೆಯನ್ನು ನೋಡಿ ಆಕರ್ಷಿಸಬೇಕು

ರಾಮಲಾಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, "ಮಂದಿರ ನಿರ್ಮಾಣ ಹಂತದಲ್ಲಿದ್ದು, ಕಾಶಿ ಮಾದರಿಯಲ್ಲಿ ಏಕಕಾಲಕ್ಕೆ ಮಂದಿರ ನಿರ್ಮಾಣ ಹಾಗೂ ಕಾರಿಡಾರ್‌ ನಿರ್ಮಾಣ ಕಾರ್ಯಗಳು ನಡೆಯಲಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅಯೋಧ್ಯೆಯನ್ನು ತ್ರೇತಾ ಕಿ ಅಯೋಧ್ಯೆ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ ಎಂದ ಅವರು, ಅಯೋಧ್ಯೆಗೆ ಬರುವ ಪ್ರವಾಸಿಗರು ಅಯೋಧ್ಯೆಯನ್ನು ನೋಡಿ ಆಕರ್ಷಿಸಬೇಕು," ಎಂದರು.

 12.94 ಕಿ.ಮೀ ಉದ್ದದ ರಸ್ತೆ ಅಗಲೀಕರಣ

12.94 ಕಿ.ಮೀ ಉದ್ದದ ರಸ್ತೆ ಅಗಲೀಕರಣ

ಅಯೋಧ್ಯೆಯಲ್ಲಿ ಕಾಶಿ ವಿಶ್ವನಾಥ ಧಾಮದ ಮಾದರಿಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಅಭಿವೃದ್ಧಿಪಡಿಸಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ನಗರಾಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಸ್ತಾವನೆಗಳಿಗೂ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಅಯೋಧ್ಯೆಯ ಸಹದತ್‌ಗಂಜ್‌ನಿಂದ ನಯಾಘಾಟ್‌ವರೆಗಿನ 12.94 ಕಿ.ಮೀ ಉದ್ದದ ರಸ್ತೆಯನ್ನು ಅಗಲೀಕರಣ ಮತ್ತು ಬಲಪಡಿಸಲಾಗುವುದು. ಈ ರಸ್ತೆ ಕಾಮಗಾರಿಗಾಗಿ 797.69 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+