ಹಲೋ ಇಲ್ಕೇಳಿ, ವಿಶ್ವ ಹಲೋ ದಿನಕ್ಕೆ 'ಹಲೋ' ಹೇಳಿ!
ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾದ ಪದ 'ಹಲೋ' ಎಂಬುದೇ ಇರಬೇಕು! ಫೋನ್ ಕಿವಿಗಿಡುತ್ತಿದ್ದಂತೆ, ನಾಲಿಗೆಯ ಮೇಲೆ ಅರಿವಿಲ್ಲದೆ ಹುಟ್ಟುವ ಪದ, 'ಹಲೋ...', ಯಾರನ್ನಾದರೂ ಮೊದಲ ಬಾರಿ ಪರಿಚಯಿಸಿಕೊಂಡಾಗ, ಕೈಕುಲುಕುವ ಮೊದಲೇ ಬಾಯಲ್ಲಿ ಉಚ್ಚಾರವಾಗುವ ಪದ 'ಹಲೋ...', ಎಷ್ಟೋ ಸಂಭಾಷಣೆಯ ಆರಂಭದ ಮೌನ ಮುರಿಯುವ ಪದವೂ 'ಹಲೋ...!'
ಪ್ರತಿವರ್ಷವೂ ನವೆಂಬರ್ 21 ಅನ್ನು 'ವಿಶ್ವ ಹಲೋ ದಿನ' ಎಂದು ಆಚರಿಸಿ ಸಂವಹನ ಪ್ರಕ್ರಿಯೆಯಲ್ಲಿ ಮಹತ್ವದ ಸ್ಥಾನ ಪಡೆದ ಹಲೋ ಎಂಬ ಪದಕ್ಕೆ ಗೌರವ ನೀಡುತ್ತೇವೆ!
ಈ ದಿನ ಹತ್ತು ಜನರಿಗೆ ಹಲೋ ಹೇಳುವ ಮೂಲಕ ಒಳಿತನ್ನು ಪಡೆಯಬಹುದು ಅನ್ನೋ ನಂಬಿಕೆ ಪಾಶ್ಚಾತ್ಯರಲ್ಲಿದೆಯಂತೆ! ಅಷ್ಟಕ್ಕೂ ಏನಿದು ವಿಶ್ವ ಹಲೋ ದಿನ? ಏನಿದರ ಮಹತ್ವ?
|
ಹಲೋ ದಿನದ ಹಿನ್ನಲೆ
'ಹಲೋ' ದಿನ ಎಂಬುದು ಕೇಳುವುದಕ್ಕೆ ಸ್ವಲ್ಪ ವಿಚಿತ್ರವೆನ್ನಿಸಿದರೂ, ಅದರ ಉದ್ದೇಶ ಮಾತ್ರ ಮಹತ್ತರವಾದುದು. ಯುದ್ಧವನ್ನೆಲ್ಲ ಬಿಟ್ಟು, ಶತ್ರುಗಳು ಪರಸ್ಪರ ಮುಖಾಮುಖಿಯಾಗಿ 'ಹಲೋ' ಎಂದು, ಶಾಂತಿಗೆ ಮುನ್ನುಡಿ ಬರೆಯಲಿ ಎಂಬ ಉದ್ದೇಶಕ್ಕಾಗಿ ಈ ದಿನ ಆಚರಣೆಗೊಳ್ಳುತ್ತದೆ. ಈಜಿಫ್ಟ್ ಮತ್ತು ಇಸ್ರೇಲ್ ನಡುವೆ ಕದನ ನಡೆಯುತ್ತಿದ್ದ ಸಮಯದಲ್ಲಿ ಹಿಂಸೆಯನ್ನೆಲ್ಲ ತೊರೆದು ಪರಸ್ಪರ ಶಾಂತಿಯುತ ಸಂಧಾನ ನಡೆಯಬೇಕೆಂದು ಮೈಕೆಲ್ ಮ್ಯಾಕ್ ಕೊರ್ಮಾಕ್ ಮತ್ತು ಬ್ರಿಯಾನ್ ಮ್ಯಾಕ್ ಕೊರ್ಮಾಕ್ ಎಂಬ ಸಹೋದರರು ಮೊಟ್ಟ ಮೊದಲ ಬಾರಿಗೆ ವಿಶ್ವ ಹಲೋ ದಿನ ಆಚರಿಸಲು ನಾಂದಿ ಹಾಡಿದರು. ಆ ದಿನ 1973 ನವೆಂಬರ್ 21! 'ಕದನಗಳು ಸಂವಹನದಿಂದ ಪರಿಹಾರಗೊಳ್ಳಬೇಕು, ಬಲದಿಂದಲ್ಲ' ಎಂಬುದು ಹಲೋ ದಿನದ ಕಳಕಳಿ.
|
ವಿಶ್ವ ಶಾಂತಿಗೆ ಮುನ್ನುಡಿ
ನೊಬೆಲ್ ಶಾಂತಿ ಪುರಸ್ಕಾರ ಪಡೆದ 30 ಕ್ಕೂ ಹೆಚ್ಚು ಜನರು ವಿಶ್ವ ಹಲೋ ದಿನವನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ವಿಶ್ವಶಾಂತಿಯೇ ಈ ಹಲೋ ದಿನದ ಮಹತ್ವ ಎಂದಿದ್ದಾರೆ. ಯುದ್ಧ ಎಲ್ಲಕ್ಕೂ ಉತ್ತರವಲ್ಲ, ಶಾಂತಿಯುತ ಮಾತುಕತೆಯಿಂದ ಬಗೆಹರಿಸುವ ಪ್ರಯತ್ನ ನಡೆಯಬೇಕು. ಶಾಮತಿಯುತ ಸಂಧಾನಕ್ಕೆ 'ಹಲೋ' ಎಂಬುದು ಒಂದು ನಾಂದಿಯಷ್ಟೇ. ಶಾಂತಿಯನ್ನು ಸಂಕೇತಿಸುವುದೇ 'ಹಲೋ ದಿನ'ದ ಆದ್ಯ ಗುರಿ.
|
ಯಾರು ಈ ಮ್ಯಾಕ್ ಕೊರ್ಮಾಕ್ ಸಹೋದರರು?
ಹಲೋ ದಿನವನ್ನು ಆರಂಭಿಸಿದ ಮೈಕೆಲ್ ಮ್ಯಾಕ್ ಕೊರ್ಮಾಕ್ ಮತ್ತು ಬ್ರಿಯಾನ್ ಮ್ಯಾಕ್ ಕೊರ್ಮಾಕ್ ಸಹೋದರರು. ಮೈಕಲ್ ಮ್ಯಾಕ್ ಕೊರ್ಮಾಕ್ ಒಬ್ಬ ಬರಹಗಾರ. 'ಗಾಂಧೀಸ್ ಲಾಸ್ಟ್ ಬುಕ್' ಸೇರಿದಂತೆ ಹಲವು ಕಾದಂಬರಿಗಳನ್ನೂ ಆತ ರಚಿಸಿರುವ ಮೈಕೆಲ್ ನಟನಾಗಿಯೂ ಪ್ರಸಿದ್ಧಿ ಪಡೆದವರು.
|
ಬಿಗುಮಾನ ಬಿಡಿ, ಹಲೋ ಅನ್ನಿ...
ವಿಶ್ವ ಹಲೋ ದಿನದಂದು ಎಲ್ಲ ಬಿಗುಮಾನ, ಅಹಂಕಾರವನ್ನೂ ಬಿಟ್ಟು ಮುನಿಸಿಕೊಂಡ ಸ್ನೇಹಿತರಿಗೆ, ಮಾತನಾಡದ ಆಪ್ತರಿಗೆ ಎಲ್ಲರಿಗೂ ಒಮ್ಮೆ ಹಲೋ ಅನ್ನಿ. ಸಂಬಂಧಗಳ ಮಧ್ಯೆ ಗೋಡೆಯನ್ನು ಎಬ್ಬಿಸಿದ ಅಹಂಕಾರವನ್ನು 'ಹಲೋ' ಎಂಬ ಆಪ್ತ ಪದವೊಂದು ಬೀಳಿಸಲಿ. ಆಪ್ತ ಭಾವ ಮೂಡಿಸಿ, ಬಂಧ ಬೆಸೆಯಲಿ. ವಿಶ್ವ ಹಲೋ ದಿನದ ಶುಭಾಶಯಗಳು!
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications