Rain Bath Benefits: ಮಳೆಯಲ್ಲಿ ಸ್ನಾನ, ಚರ್ಮ ಮತ್ತು ಕೂದಲಿಗೆ ವರದಾನ
ಪ್ರತಿಯೊಬ್ಬರೂ ಮಳೆ ನೀರಿನಲ್ಲಿ ಒದ್ದೆಯಾಗಲು ಬಯಸುತ್ತಾರೆ. ಆದರೆ ಮಳೆಯಲ್ಲಿ ಒದ್ದೆಯಾದ ನಂತರ ಅನಾರೋಗ್ಯಕ್ಕೆ ಒಳಗಾಗುತ್ತೇವೆ ಎಂಬ ಆತಂಕ ಹಲವರಲ್ಲಿ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಅನೇಕರು ಮಳೆಯಲ್ಲಿ ಒದ್ದೆಯಾಗಲು ಮತ್ತು ದೂರದಿಂದಲೇ ಮಳೆಯನ್ನು ಆನಂದಿಸಲು ಬಯಸುತ್ತಾರೆ. ಆದರೆ ಮಳೆಯಲ್ಲಿ ಒದ್ದೆಯಾಗುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಂಡರೆ ಈ ಆತಂಕ ದೂರವಾಗುತ್ತದೆ. ಬೇಸಿಗೆಯ ನಂತರ ಮಳೆಯಲ್ಲಿ ಒದ್ದೆಯಾಗುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಹಾಗಾದರೆ ಮಳೆಯಲ್ಲಿ ನೆನೆಯುವುದರಿಂದಾಗುವ ಲಾಭಗಳೇನು ಎಂದು ತಿಳಿಯೋಣ.
ಕೂದಲಿಗೆ ಪ್ರಯೋಜನಕಾರಿ
ಮಳೆ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಉತ್ತಮವಾಗಿರುತ್ತದೆ. ಕೂದಲು ಮೃದುವಾಗಿ ಮತ್ತು ಅವುಗಳ ಗುಣಮಟ್ಟ ಸುಧಾರಿಸುತ್ತದೆ. ನೀವು ಮಳೆಯಲ್ಲಿ ಒದ್ದೆಯಾಗಲು ಬಯಸದಿದ್ದರೆ, ಮಳೆ ನೀರನ್ನು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿ ನಂತರ ನಿಮ್ಮ ಕೂದಲನ್ನು ಈ ನೀರಿನಿಂದ ತೊಳೆಯಿರಿ. ಆಗ ಇದರ ಪ್ರಯೋಜನವನ್ನು ಪಡೆಯಬಹುದು.

ಚರ್ಮಕ್ಕೆ ಹೊಳಪು
ಮಳೆ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಹೊಸ ಹೊಳಪು ಬರುತ್ತದೆ. ಇದು ಚರ್ಮದ ಮೊಡವೆಗಳನ್ನು ಗುಣಪಡಿಸುತ್ತದೆ. ಮಳೆ ನೀರು ಶುದ್ಧವಾಗಿದ್ದು ಇದರಿಂದ ಚರ್ಮವು ಹೊಳೆಯುತ್ತದೆ. MyUpchar ಗೆ ಸಂಬಂಧಿಸಿದ ಡಾ. ಲಕ್ಷ್ಮೀದತ್ತ ಶುಕ್ಲಾ ಅವರ ಪ್ರಕಾರ, ಆದಷ್ಟು ಬಿಸಿ ಮತ್ತು ತಣ್ಣನೆಯ ನೀರಿನ ಸಮಸ್ಯೆಗಳನ್ನು ತಪ್ಪಿಸಬೇಕು. ನೈಸರ್ಗಿಕವಾಗಿ ಲಭ್ಯವಾಗುವ ಮಳೆ ನೀರಿನಿಂದ ಸ್ನಾನ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಶಾಖದಿಂದಾಗುವ ಸಮಸ್ಯೆಗಳಿಂದ ಮುಕ್ತಿ
ಬೇಸಿಗೆಯಲ್ಲಿ ಬೆವರುವಿಕೆಯಿಂದ ಹೀಟ್ ರಾಶ್ ಸಂಭವಿಸುತ್ತದೆ. ಹೆಚ್ಚಿನ ಮಕ್ಕಳು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಶಾಖದ ಕಾರಣದಿಂದಾಗಿ ದದ್ದುಗಳು ಸಣ್ಣ ಮೊಡವೆಗಳ ರೂಪದಲ್ಲಿ ಹಿಂಭಾಗ ಮತ್ತು ಕತ್ತಿನ ಮೇಲೆ ಕಾಣಿಸಿಕೊಳ್ಳುತ್ತವೆ. ಮಳೆಯಲ್ಲಿ ಸ್ನಾನ ಮಾಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ಮಳೆ ನೀರಿನಲ್ಲಿ ನೆನೆಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ
ದೇಹದಲ್ಲಿ ಅನೇಕ ಹಾರ್ಮೋನುಗಳು ಇವೆ. ಇದು ಯಾವುದಾದರೂ ಕಾರಣಕ್ಕಾಗಿ ಅಸಮತೋಲನಗೊಳ್ಳುತ್ತದೆ. ಈ ಹಾರ್ಮೋನುಗಳ ಅಡಚಣೆಯನ್ನು ಸರಿಪಡಿಸಲು ಮಳೆ ಸಹಾಯ ಮಾಡುತ್ತದೆ. ಮಳೆ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಾರ್ಮೋನ್ ಸಮತೋಲನವಾಗುತ್ತದೆ. ಇದಲ್ಲದೇ ಮಳೆ ನೀರಿನಿಂದ ಸ್ನಾನ ಮಾಡುವುದರಿಂದ ಕಿವಿಯ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಬೇಸಿಗೆಯಲ್ಲಿ ತುರಿಕೆ ಸಮಸ್ಯೆ
ಹೆಚ್ಚಿನ ಜನರು ಹೆಚ್ಚಿನ ಶಾಖವನ್ನು ಸಹಿಸುವುದಿಲ್ಲ. ಶೀತ ಸ್ವಭಾವದವರಿಗೆ ಬೇಸಿಗೆಯಲ್ಲಿ ಅನೇಕ ದೈಹಿಕ ಸಮಸ್ಯೆಗಳು ಉದ್ಭವಿಸುತ್ತವೆ. ಬೇಸಿಗೆಯಲ್ಲಿ ಕೆಲವರ ಕೈಕಾಲುಗಳಿಂದ ಚರ್ಮ ಒಡೆಯಲು ಆರಂಭಿಸಿ ಪಾದದ ಹಿಮ್ಮಡಿಗಳು ಬಿರುಕುಗೊಳ್ಳುತ್ತವೆ. ಇದರೊಂದಿಗೆ, ಪಾದಗಳ ಬಿರುಕುಗಳಿಂದ ಬಹಳಷ್ಟು ರಕ್ತ ಹೊರಬರಲು ಪ್ರಾರಂಭಿಸುತ್ತದೆ. ಅಂಥವರಿಗೆ ಮಳೆ ನೀರು ಅಮೃತವಿದ್ದಂತೆ. ಪಾದಗಳಲ್ಲಿ ರಿಂಗ್ವರ್ಮ್, ತುರಿಕೆ ಮತ್ತು ನೋವು ಮಳೆನೀರನ್ನು ಅನ್ವಯಿಸಿದ ತಕ್ಷಣ ಗುಣವಾಗುತ್ತವೆ. ಕೈಕಾಲುಗಳಲ್ಲಿ ಹೊಸ ಚರ್ಮವೂ ಬರಲು ಪ್ರಾರಂಭಿಸುತ್ತದೆ.

ಮೊದಲ ಮಳೆಯಲ್ಲಿ ಸ್ನಾನ ಮಾಡುವುದರಿಂದ ಉಂಟಾಗುತ್ತವೆ ಈ ಸಮಸ್ಯೆಗಳು
ಮಳೆಯ ಮೊದಲ ತುಂತುರು ಬಿದ್ದ ತಕ್ಷಣ ಅನೇಕ ಜನರು ಸ್ನಾನ ಮಾಡುತ್ತಾರೆ, ಆದರೆ ಮೊದಲ ಮಳೆಯು ಕಲುಷಿತವಾಗಿರುತ್ತದೆ ಎಂದು ವೈದ್ಯರು ನಂಬುತ್ತಾರೆ. ಪರಿಸರದ ಎಲ್ಲಾ ಕಲ್ಮಶಗಳು ಇದರಲ್ಲಿ ಬೆರೆತಿರುವುದರಿಂದ ಮೊದಲ ಮಳೆಗೆ ಸ್ನಾನ ಮಾಡುವುದರಿಂದ ಅದೇ ಕಲುಷಿತ ನೀರಿನಿಂದ ಚರ್ಮದ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಹೀಗಾಗಿ ಮೊದಲ ಮಳೆಯಲ್ಲಿ ಮಕ್ಕಳು ಒದ್ದೆಯಾಗಲು ಬಿಡಬೇಡಿ. MyUpchar ಗೆ ಸಂಬಂಧಿಸಿದ AIIMS ನ ಡಾ. ಅಜಯ್ ಮೋಹನ್ ಅವರ ಪ್ರಕಾರ, ಮಳೆಗಾಲದಲ್ಲಿ ವೈರಲ್ ಜ್ವರದ ಅಪಾಯವು ಹೆಚ್ಚು. ಹೀಗಾಗಿ ನಿಮ್ಮ ದೇಹ ಮಳೆಯಲ್ಲಿ ಒದ್ದೆಯಾಗಲು ಒಗ್ಗಿಕೊಳ್ಳುತ್ತಿದ್ದರೆ ಮಳೆ ನೀರಿನಲ್ಲಿ ಸ್ನಾನ ಮಾಡಬಹುದು.
-
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications