ಹೆದ್ದಾರಿ ಬಳಿ ಮಲಗಿದ್ದ ಮನುಷ್ಯನನ್ನು ಬಿಟ್ಟು ನಾಯಿಯನ್ನು ಎಳೆದೊಯ್ದ ಚಿರತೆ- ವಿಡಿಯೋ ವೈರಲ್
ದುರ್ಬಲ ಪ್ರಾಣಿಗಳನ್ನು ಕಾಡಿನ ಕ್ರೂರ ಪ್ರಾಣಿಗಳು ಬೇಟೆಯಾಡುತ್ತವೆ ಎಂದು ತಿಳಿದಿದೆ. ಈ ಮಾತು ನೂರಕ್ಕೆ ನೂರರಷ್ಟು ನಿಜ ಅನ್ನೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಸಾಕ್ಷಿಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಹೆದ್ದಾರಿ ಬಳಿ ಮಲಗಿದ್ದ ನಾಯಿಯನ್ನು ಚಿರತೆಯೊಂದು ಎಳೆದೊಯ್ದಿದೆ.
ಪುಣೆಯ ಅಲೆಫಾಟಾ ಬಳಿ ಹೆದ್ದಾರಿಯ ಸಮೀಪ ಮಲಗಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿದೆ. ಸದ್ಯ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಈ ವಿಡಿಯೋ ನಿಜಕ್ಕೂ ಭೀತಿಯನ್ನು ಹುಟ್ಟಿಸುವಂತಿದೆ. ಈ ಭಯಾನಕ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರಿ ವೀಕ್ಷಣೆಗಳನ್ನು ಸಂಗ್ರಹಿಸಿದೆ.

ವೈರಲ್ ದೃಶ್ಯದಲ್ಲಿ ಹಲವಾರು ಟ್ರಕ್ಗಳು ಒಟ್ಟಿಗೆ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಇದು ಹೆದ್ದಾರಿಯಲ್ಲಿ ಟ್ರಕ್ ಸ್ಟಾಪ್ ಆಗಿರಬಹುದು ಎಂದು ತೋರುತ್ತದೆ. ಅಥವಾ ಇದು ಚಾಲಕರಿಗೆ ವಿಶ್ರಾಂತಿ ನಿಲುಗಡೆಯಾಗಿರಬಹುದು. ಒಬ್ಬ ವ್ಯಕ್ತಿಯು ತೆರೆದ ಗಾಳಿಯಲ್ಲಿ ಹೊರಗಿನ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು.
ತಕ್ಷಣ ಚಿರತೆ ಕಳ್ಳನಡಿಗೆಯಲ್ಲಿ ಮಲಗಿದ್ದ ನಾಯಿಯ ಬಳಿ ಬರುತ್ತದೆ. ಚಿರತೆ ನಿಧಾನವಾಗಿ ಬಂದು ಏಕಾಏಕಿ ನಾಯಿಯ ಮೇಲೆ ದಾಳಿ ಮಾಡುತ್ತದೆ. ಅದು ನಾಯಿಯನ್ನು ತನ್ನೊಂದಿಗೆ ಹತ್ತಿರದ ಪೊದೆಗೆ ಎಳೆಯುತ್ತದೆ. ಈ ವೇಳೆ ನಾಯಿ ಬೊಗಳುತ್ತದೆ. ಇದರಿಂದ ಮಲಗಿದ್ದ ವ್ಯಕ್ತಿ ಎದ್ದು ನೋಡುತ್ತಾನೆ. ಭಯಾನಕ ಕ್ಲಿಪ್ ಇಲ್ಲಿಗೆ ಮುಕ್ತಾಯವಾಗುತ್ತದೆ.
ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಭಯಾನಕ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಹೀಗೆ ಬರೆದಿದ್ದಾರೆ- "ಚಿರತೆಯ ರಹಸ್ಯ ಮತ್ತು ಚುರುಕುತನವನ್ನು ನೋಡಿ. ಪುಣೆ-ನಾಸಿಕ್ ಹೆದ್ದಾರಿಯ ಬದಿಯಲ್ಲಿ ಚಿರತೆ". ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವೀಡಿಯೊವನ್ನು 80,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಕೆಳಗಿನ ಕೆಲವು ಪ್ರತಿಕ್ರಿಯೆಗಳನ್ನು ಪರಿಶೀಲಿಸಿ:
They love hot dogs. Look at the stealth & agility. Dog had no idea what was coming. A leopard in action on side of busy Pune-Nashik highway. pic.twitter.com/cn0pJDhCV9
— Parveen Kaswan, IFS (@ParveenKaswan) May 18, 2023
ವೀಡಿಯೋವನ್ನು ಕಂಡ ವ್ಯಕ್ತಿಯೊಬ್ಬರು ಹೀಗೆ ಬರೆದಿದ್ದಾರೆ, "ಚಿರತೆ ಅಡೆತಡೆಗಳ ನಡುವೆಯೂ ತನ್ನ ಬೇಟೆಯನ್ನು ಆರಿಸಿಕೊಂಡಿದೆ. ಚಿರತೆಯ ಬೇಟೆಯನ್ನು ಆಯ್ಕೆ ಮಾಡುವ ನಿರ್ಧಾರ ಅದ್ಬುತ. ಚಿರತೆ ಅಲ್ಲೆ ಇದ್ದ ಮನುಷ್ಯನ ಮೇಲೆ ದಾಳಿ ಮಾಡಬಹುದಿತ್ತು. ಆದರೆ ಮನುಷ್ಯ v/s ನಾಯಿಯ ನಡುವೆ ಚಿರತೆ ನಾಯಿಯನ್ನು ಆಯ್ಕೆ ಮಾಡಿಕೊಂಡಿದ್ದು ಅದ್ಭುತವಾಗಿದೆ" ಎಂದು ಬರೆದಿದ್ದಾರೆ.
ಎರಡನೆಯ ವ್ಯಕ್ತಿ, 'ರಾತ್ರಿಯಲ್ಲಿ ಕೆಲವು ಮಾಂಸಾಹಾರಿ ಆಹಾರವನ್ನು ಬೇಯಿಸಿರಬೇಕು ಮತ್ತು ಆ ಪರಿಮಳವು ಚಿರತೆಯನ್ನು ಆಕರ್ಷಿಸಿರಬೇಕು.. ದುಃಖಕರವೆಂದರೆ, ಆ ನಾಯಿಯು ಆಹಾರವನ್ನು ಬೇಯಿಸಿದ ಸ್ಥಳದ ಸಮೀಪದಲ್ಲಿಯೇ ಇರಬೇಕು..." ಎಂದು ಕಾಮೆಂಟ್ ಮಾಡಿದ್ದಾರೆ.
ಮೂರನೇ ವ್ಯಕ್ತಿ, 'ಇದು ತುಂಬಾ ಭಯಾನಕವಾಗಿದೆ' ಎಂದು ಬರೆದಿದ್ದಾರೆ.
ಈ ಹಿಂದೆಯೂ ಮಹಾರಾಷ್ಟ್ರದ ಗ್ರಾಮಾಂತರದಲ್ಲಿ ಚಿರತೆಯೊಂದು ಕುಟುಂಬದ ಸಾಕುನಾಯಿಯನ್ನು ಬೇಟೆಯಾಡುತ್ತಿರುವ ವಿಡಿಯೋ ಸಾಮಾಜಿಕ ವಿಡಿಯೋದಲ್ಲಿ ವೈರಲ್ ಆಗಿತ್ತು. ಭುಸೆ ಗ್ರಾಮದ ಮನೆಯೊಂದರ ಹೊರಗಿದ್ದ ಕಣ್ಗಾವಲು ಕ್ಯಾಮೆರಾದಲ್ಲಿ ಈ ಭಯಾನಕ ಕ್ಷಣ ಸೆರೆಯಾಗಿದೆ.
ಅದನ್ನು ಇಲ್ಲಿ ವೀಕ್ಷಿಸಿ:
One of the easiest prey for leopards, pet dogs. In human habitations important to stay alert at all times when near the peripheries of a forest landscape. The leopard is an amazing hunter which adapts with its surroundings and stealthily approaches its prey, with pin-drop silence pic.twitter.com/PVDZA21KLg
— Dr. PM Dhakate (@paragenetics) October 12, 2019
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications