ಕಾಲೇಜ್ ಹುಡುಗ, ಹುಡುಗಿಯರಿಗಾಗಿ ಬಂತು ಪ್ರತ್ಯೇಕ 'ಡೇಟಿಂಗ್ ಆಪ್'! Tinder U
ಬೆಂಗಳೂರು, ಮಾರ್ಚ್ 19: ನಿಮ್ಮ ಕಾಲೇಜಿನಲ್ಲಿ ಓದುವ ಹುಡುಗಿ ಅಥವಾ ಹುಡುಗನ ಮೇಲೆ ನಿಮಗೆ ಮನಸ್ಸಾಗಿದ್ದರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಇದೀಗ ಸುಲಭ. 'ಟಿಂಡರ್ ಯು' ಡೇಟಿಂಗ್ ಆಪ್ ನಿಮ್ಮ ಬಯಕೆ ಈಡೇರಿಸಲು ವಿಶ್ವವಿದ್ಯಾಲಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಆಯ್ಕೆಯನ್ನು ತನ್ನ ಡೇಟಿಂಗ್ ಆಪ್ನಲ್ಲಿ ವಿನ್ಯಾಸಗೊಳಿಸಿದೆ. ಈ ಕುರಿತು ಖುದ್ದು ಕಂಪನಿಯೇ ಹೇಳಿಕೊಂಡಿದೆ.
ಈ ಕುರಿತು ಮಾತನಾಡಿದ ಟಿಂಡರ್ ಕಮ್ಯುನಿಕೇಷನ್ ಲೀಡ್ ಅದಿತಿ ಶೋರ್ವಾಲ್, ಟಿಂಡರ್ ಡೇಟಿಂಗ್ ಆಪ್ನಲ್ಲಿ ನಿಮ್ಮ ಮಾನ್ಯ ಕಾಲೇಜು ಇಮೇಲ್ ವಿಳಾಸವನ್ನು ಹಾಕುವ ಮೂಲಕ ರಿಜಿಸ್ಟರ್ ಆಗಿದ್ದರೆ, ನೀವು ನಿಮ್ಮದೇ ಕಾಲೇಜಿನ ಕ್ರಶ್ನೊಂದಿಗೆ ಡೇಟಿಂಗ್ ಮಾಡಬಹುದು, ಅದೂ ಸುರಕ್ಷಿತವಾಗಿರಲಿದೆ ಎಂದಿದ್ದಾರೆ.

ಹೌದು, ಇತ್ತೀಚೆಗೆ ಯುವ ಸಮೂಹ ಡೇಟಿಂಗ್ನಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ಅವರಿಗಾಗಿ ಟಿಂಡರ್ ಯು ಈಗಾಗಲೇ ನಿಮ್ಮ ಸಹಚರವಾಗಿದೆ. ಈ ಆಪ್ನಲ್ಲಿ ಯಾರೋ ಅನಾಮಿಕ ವ್ಯಕ್ತಿಯನ್ನು ಹುಡುಕುವ ಬದಲು ನಿಮ್ಮ ಸುತ್ತಮುತ್ತಲೇ ಇರುವ ನಿಮ್ಮದೇ ಕಾಲೇಜಿನ ಕ್ರಶ್ನನ್ನು ಇದೇ ಆಪ್ನಲ್ಲಿ ಸುಲಭವಾಗಿ ಹುಡುಕಲು ಈ ಆಪ್ ಸಹಾಯ ಮಾಡುತ್ತದೆ.
ಒನ್ಪೋಲ್ ಸಮೀಕ್ಷೆಯ ಪ್ರಕಾರ ಶೇಕಡಾ 57ರಷ್ಟು ಭಾರತೀಯ ವಯಸ್ಕರು (18 ರಿಂದ 25 ವಯಸ್ಸಿನವರು) ಡೇಟಿಂಗ್ ಅಪ್ಲಿಕೇಶನ್ಗಳ ಮೂಲಕ ತಮ್ಮ ಜೊತೆಗಾರರನ್ನು ಹುಡುಕಿಕೊಳ್ಳುತ್ತಿದ್ದಾರೆ. ಅದರಲ್ಲೂ ಶೇಕಡಾ 67ರಷ್ಟು ಜನರು, "ನಾನು ಡೇಟಿಂಗ್ ಅಪ್ಲಿಕೇಶನ್ನಲ್ಲಿ ಭೇಟಿಯಾದ ವ್ಯಕ್ತಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಶೇಕಡಾ 55ರಷ್ಟು ಜನರು ಸ್ನೇಹಿತರನ್ನು ಹುಡುಕಿಕೊಂಡಿದ್ದಾರೆ ಎನ್ನಲಾಗಿದೆ.
ಆಪ್ನಲ್ಲಿ ವಿದ್ಯಾರ್ಥಿಗಳ ಬಿಟ್ಟು ಬೇರಾರು ಇರಲ್ಲ, ಸುರಕ್ಷಿತ
ವಿದ್ಯಾರ್ಥಿಗಳಿಗೆ ಅನುಗುಣವಾಗಿ ನಿಮ್ಮ ಪದವಿ ವರ್ಷವನ್ನು ಹಂಚಿಕೊಳ್ಳಬಹುದು, ಕಾಲೇಜು ಕ್ಲಬ್ ಮತ್ತು ಸಮಾಜಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಫೋಟೋ ಹಾಕುವ ಮೂಲಕ ಮಾಹಿತಿ ಶೇರ್ ಮಾಡಿಕೊಳ್ಳಬಹುದಾಗಿದೆ.
* ಸ್ಥಳೀಯ ಸಂಪರ್ಕಗಳು: ನಿಮ್ಮ ವಿಶ್ವವಿದ್ಯಾಲಯ ಮತ್ತು ಹತ್ತಿರದ ಕಾಲೇಜುಗಳ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಿಮ್ಮ ಕ್ಯಾಂಪಸ್ ಸಿಬ್ಬಂದಿಯನ್ನು ಭೇಟಿ ಮಾಡಬಹುದು.
* ಕಿರಿಕಿರಿ ಉಂಟುಮಾಡುವ ಡಿಎಂಗಳು ಇರುವುದಿಲ್ಲ: ನೀವು ಇಷ್ಟಪಡುವ ವ್ಯಕ್ತಿಯನ್ನು ಗುರುತಿಸಿ. ಅವರಿಗೆ 'ಸೂಪರ್ ಲೈಕ್' ನೀಡಿ ಮತ್ತು ಸಂದೇಶಗಳನ್ನು ಕಳುಹಿಸಿಬಹುದು.
* ಸುರಕ್ಷಿತ, ಅಧಿಕೃತ ಮತ್ತು ಎಂಟರ್ಟೈನ್ಮೆಂಟ್: ಟಿಂಡರ್ ಯು ಕೇವಲ ಹೊಸ ಜನರನ್ನು ಭೇಟಿಯಾಗುವುದಲ್ಲ, ಇದು ನಿಜವಾದ ಸಂಪರ್ಕಗಳಿಗಾಗಿ ಈ ವೇದಿಕೆ ಸುರಕ್ಷಿತ ಎನ್ನಬಹುದು. ಏಕೆಂದರೆ ಇಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಬೇರಾರು ಇರುವುದಿಲ್ಲ.
(ವಿಶೇಷ ಸೂಚನೆ: ಈ ಸುದ್ದಿ ನಿಮ್ಮ ಮಾಹಿತಿಗಾಗಿಯೇ ಹೊರತು ಆಪ್ ಬಳಕೆಗೆ ಸೂಚನೆಯಲ್ಲ)
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications