ಸೊಳ್ಳೆ ನನಗೆ ಮಾತ್ರ ಕಚ್ಚುತ್ತೆ ಅನ್ನೋರು ಕಾರಣ ತಿಳಿಯಿರಿ
ನಮ್ಮ ಸುತ್ತಲು ನೊಣದಂತಹ ಸಣ್ಣ ಜೀವಿಗಳು ನಿರಂತರವಾಗಿ ಹಾರಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕೆಲವೊಮ್ಮೆ ಅವುಗಳ ಕಿರಿಕಿರಿಯನ್ನೂ ಅನುಭವಿಸಿದ್ದೇವೆ. ಅವುಗಳನ್ನು ದೂರವಿಡಲು ಪದೇ ಪದೇ ಪ್ರಯತ್ನಿಸಿದರೂ ಸಹ ಅವುಗಳ ಝೇಂಕಾರ ಹಿಂಸೆಯನ್ನುಂಟು ಮಾಡಿರುವುದಿದೆ. ಸೊಳ್ಳೆಗಳಾಗಿದ್ದರೆ ಅವು ನಮ್ಮ ದೇಹದಿಂದ ರಕ್ತವನ್ನು ಹೀರುತ್ತವೆ. ಕೆಲವೊಮ್ಮೆ ಸೊಳ್ಳೆಯು ಕಚ್ಚುವ ಮೂಲಕ ಅಪಾಯಕಾರಿ ಕಾಯಿಲೆಗಳನ್ನು ತರಬಹುದು. ಇದರಿಂದಾಗಿ ನಮ್ಮ ಸುತ್ತಲು ಹಾರಾಡುವ ಸೊಳ್ಳೆಗಳನ್ನು ಶಪಿಸುತ್ತೇವೆ. ಕೆಲವರಿಗೆ ಇವುಗಳ ಕಾಟ ಅತಿಯಾಗಿರುತ್ತದೆ. ಇದಕ್ಕೆ ಕಾರಣವೇನು? ನಮ್ಮ ಸುತ್ತಲೇ ಯಾಕೆ ಸೊಳ್ಳೆಗಳು ಹಾರಾಡುತ್ತವೆ ಎನ್ನುವ ಪ್ರಶ್ನೆ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಹೊಸ ಸಂಶೋಧನೆಯು ಕೆಲವರ ಸುತ್ತ ಮಾತ್ರ ಯಾಕೆ ಸಣ್ಣ ಜೀವಿಗಳು ಹಾರಾಡುತ್ತವೆ ಎನ್ನುವುದಕ್ಕೆ ಉತ್ತರವನ್ನು ನೀಡಿದೆ. ನಮ್ಮ ದೇಹದಿಂದ ಹೊರಸೂಸುವ ವಿಶಿಷ್ಟವಾದ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಹೊಸ ಅಧ್ಯಯನವು, ರಕ್ತದಲ್ಲಿನ ಸಕ್ಕರೆಯ ಮಟ್ಟ, ಬೆಳ್ಳುಳ್ಳಿ ಅಥವಾ ಬಾಳೆಹಣ್ಣುಗಳನ್ನು ಸೇವಿಸುವುದು ಮತ್ತು ಮಹಿಳೆ ಋತುಚಕ್ರದ ಸಮಯ ಎಂಬಿತ್ಯಾದಿ ಹಳೆ ಪುರಾಣದ ಹೇಳಿಕೆಗಳನ್ನು ತಳ್ಳಿಹಾಕಿದೆ.
ಚರ್ಮದಿಂದ ಹೊರಹೊಮ್ಮುವ ಕೊಬ್ಬಿನಾಮ್ಲಗಳು ಸೊಳ್ಳೆಗಳು ವಿರೋಧಿಸಲು ಸಾಧ್ಯವಾಗದ ವಿಶಿಷ್ಟವಾದ ವಾಸನೆಯನ್ನು ಸೃಷ್ಟಿಸುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಅಧ್ಯಯನದ ಆವಿಷ್ಕಾರಗಳನ್ನು ಜರ್ನಲ್ ಸೆಲ್ನಲ್ಲಿ ಪ್ರಕಟಿಸಲಾಗಿದೆ. ಇದು ಸೊಳ್ಳೆಗಳು ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲಗಳನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ ಎಂದು ಹೇಳುತ್ತದೆ.

"ನಿಮ್ಮ ಚರ್ಮದ ಮೇಲೆ ಕೊಬ್ಬಿನಾಮ್ಲಗಳು ದೊಡ್ಡ ಪ್ರಮಾಣದಲ್ಲಿದ್ದರೆ, ಸೊಳ್ಳೆಗಳು ಮ್ಯಾಗ್ನೆಟ್ನಂತೆ ನಿಮ್ಮನ್ನು ಆಕರ್ಷಿಸುತ್ತವೆ" ಎಂದು ರಾಕ್ಫೆಲ್ಲರ್ಸ್ ಲ್ಯಾಬೋರೇಟರಿ ಆಫ್ ನ್ಯೂರೋಜೆನೆಟಿಕ್ಸ್ ಮತ್ತು ಬಿಹೇವಿಯರ್ನ ಮುಖ್ಯಸ್ಥ ಲೆಸ್ಲಿ ವೋಸ್ಶಾಲ್ ಹೇಳುತ್ತಾರೆ. ಮೂರು ವರ್ಷಗಳ ಸುದೀರ್ಘ ಅಧ್ಯಯನದ ಮೂಲಕ ಸಂಶೋಧಕರು ಇದನ್ನು ಕಂಡು ಹಿಡಿದಿದ್ದಾರೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications