ವಿಜಯ್ ದಿವಸ್ 2021: ತ್ಯಾಗ, ಬಲಿದಾನವನ್ನು ಸ್ಮರಿಸುವ ಸಂದೇಶಗಳು
1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ವಿಜಯದ ನೆನಪಿಗಾಗಿ ಭಾರತವು ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಅನ್ನು ಆಚರಿಸುತ್ತದೆ. ಈ ವರ್ಷ ದೇಶವು 50 ನೇ ವಿಜಯ್ ದಿವಸ್ ಅನ್ನು ಆಚರಿಸುತ್ತಿದೆ. ಈ ದಿನದಂದು, ದೇಶವನ್ನು ರಕ್ಷಿಸಿದ ಎಲ್ಲಾ ಸೈನಿಕರಿಗೆ ಭಾರತ ಗೌರವ ಸಲ್ಲಿಸುತ್ತದೆ. ಡಿಸೆಂಬರ್ 16, 1971 ರಂದು, ಪೂರ್ವ ಪಾಕಿಸ್ತಾನವನ್ನು ಸ್ವತಂತ್ರಗೊಳಿಸಲಾಯಿತು ಬಾಂಗ್ಲಾದೇಶವನ್ನು ರಚಿಸಲಾಯಿತು.
ಡಿಸೆಂಬರ್ 16, 1971 ರಂದು ಪಾಕಿಸ್ತಾನಿ ಪಡೆಗಳ ಮುಖ್ಯಸ್ಥ ಜನರಲ್ ನಿಯಾಜಿ ಜೊತೆಗೆ ಒಟ್ಟು 93,000 ಸೈನಿಕರು ಭಾರತೀಯ ಪಡೆಗಳಿಗೆ ಶರಣಾದರು. ಈ ದಿನವನ್ನು ಬಾಂಗ್ಲಾದೇಶದಲ್ಲಿ 'ವಿಜಯ್ ದಿವಸ್' ಅಥವಾ ಬಾಂಗ್ಲಾದೇಶ ವಿಮೋಚನಾ ದಿನ ಎಂದೂ ಕರೆಯಲಾಗುತ್ತದೆ. ಇದು ಪಾಕಿಸ್ತಾನದಿಂದ ಬಾಂಗ್ಲಾದೇಶದ ಅಧಿಕೃತ ಸ್ವಾತಂತ್ರ್ಯವನ್ನು ಸೂಚಿಸುತ್ತದೆ.
1971 ರ ಭಾರತ-ಪಾಕಿಸ್ತಾನ ಯುದ್ಧವು ಡಿಸೆಂಬರ್ 3 ರಂದು ಪ್ರಾರಂಭವಾಯಿತು ಮತ್ತು 13 ದಿನಗಳವರೆಗೆ ನಡೆಯಿತು. ಯುದ್ಧವು ಡಿಸೆಂಬರ್ 16 ರಂದು ಅಧಿಕೃತವಾಗಿ ಕೊನೆಗೊಂಡಿತು. ಇದು ವಿಶ್ವ ಸಮರ II ರ ನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ. ಈ ಯುದ್ಧಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಜನರನ್ನು ಶೋಷಿಸುತ್ತಿದ್ದರು. ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದರು, ಜನರನ್ನು ಕೊಂದು ಹಾಕುತ್ತಿದ್ದರು. 1971ರ ಯುದ್ಧ ಅಂತ್ಯದಲ್ಲಿ ಭಾರತ ಪೂರ್ವ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತು. ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಮಾಡಲಾಯಿತು. ವಿಜಯ್ ದಿವಸ್ ಅಂಗವಾಗಿ ಕೋಲ್ಕತ್ತಾದಲ್ಲಿರುವ ಈಸ್ಟರ್ನ್ ಕಮಾಂಡ್ ಹೆಡ್ ಕ್ವಾರ್ಟರ್ಸ್ ಪೋರ್ಟ್ ಮಿಲಿಯಂನಲ್ಲಿ ವಿಜಯ್ ಸ್ಮಾರಕ್ನಲ್ಲಿ ಮಾಲಾರ್ಪಣೆ ನಡೆಯುತ್ತದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ.

ವಿಜಯ್ ದಿವಸ್: ಶುಭಾಶಯಗಳು ಮತ್ತು ಸಂದೇಶಗಳು
* ಈ ದಿನದಂದು ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲು ಕರ್ತವ್ಯದ ಸಾಲಿನಲ್ಲಿ ಮಡಿದ ವೀರ ಸೈನಿಕರ ತ್ಯಾಗವನ್ನು ಸ್ಮರಿಸೋಣ. ವಿಜಯ್ ದಿವಸ್ ಶುಭಾಶಯಗಳು! ಜೈ ಹಿಂದ್!
* ನಮ್ಮ ದೇಶವು ಈ ದಿನ ಉಸಿರಾಡಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದರು - ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಜೈ ಭಾರತ್! ಜೈ ಜವಾನ್!
* ನಿಮ್ಮ ದೇಶ ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ, ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿ. ವಿಜಯ್ ದಿವಸ್ ಶುಭಾಶಯಗಳು!
* ಸ್ವಾತಂತ್ರ್ಯವನ್ನು ಎಂದಿಗೂ ನೀಡಲಾಗುವುದಿಲ್ಲ; ಅದನ್ನು ನಾವು ಪಡೆಯಬೇಕು. ವಿಜಯ್ ದಿವಸ್ ಶುಭಾಶಯಗಳು!
* ದೇಶಭಕ್ತಿಯು ಧ್ವಜವನ್ನು ಬೀಸುವುದರಲ್ಲಿ ಅಲ್ಲ, ನೀತಿವಂತ ಮತ್ತು ಬಲಶಾಲಿಯಾಗಬೇಕೆಂದು ಶ್ರಮಿಸುವಲ್ಲಿ ಒಳಗೊಂಡಿದೆ. ವಿಜಯ್ ದಿವಸ್ ಶುಭಾಶಯಗಳು!
* ದೇಶಭಕ್ತಿಯು ಚಿಕ್ಕದಲ್ಲ. ಅದು ಉನ್ಮಾದದ ಭಾವನೆಗಳ ಸಾಗರ, ಜೀವಿತಾವಧಿಯ ಸ್ಥಿರವಾದ ಸಮರ್ಪಣೆಯಾಗಿದೆ. ವಿಜಯ್ ದಿವಸ್ ಶುಭಾಶಯಗಳು!
* ಭಾರತದ ನಿಜವಾದ ಹೀರೋಗಳಿಗೆ ಧನ್ಯವಾದಗಳು!
* ದೇಶಪ್ರೇಮವು ನಿಮ್ಮ ದೇಶವನ್ನು ಸಾರ್ವಕಾಲಿಕವಾಗಿ ಬೆಂಬಲಿಸುತ್ತದೆ ಜೈ ಹಿಂದ್..ವಿಜಯ್ ದಿವಸ್
* ಅಸಾಧ್ಯವಾದದ್ದನ್ನು ಈ ದೇಶವನ್ನು ಪ್ರೀತಿಸುವ ಜನರು ಸಾಧ್ಯಗೊಳಿಸಬಹುದು. ಜೈ ಹಿಂದ್!
ವಿಜಯ್ ದಿವಸ್: ಉಲ್ಲೇಖಗಳು
* "ಮೊದಲನೆಯದಾಗಿ ಮತ್ತು ಕೊನೆಯದಾಗಿ ನಾವು ಭಾರತೀಯರು" - ಬಿ.ಆರ್.ಅಂಬೇಡ್ಕರ್
* "ಪೌರತ್ವವು ದೇಶ ಸೇವೆಯನ್ನು ಒಳಗೊಂಡಿದೆ" - ಜವಾಹರಲಾಲ್ ನೆಹರು
* "ಭಾರತದ ಪ್ರತಿಯೊಬ್ಬ ಪ್ರಜೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವನು ಭಾರತೀಯ ಮತ್ತು ಈ ದೇಶದಲ್ಲಿ ಅವನಿಗೆ ಪ್ರತಿಯೊಂದಕ್ಕೂ ಕೆಲವು ಕರ್ತವ್ಯಗಳೊಂದಿಗೆ ಹಕ್ಕಿದೆ" - ಸರ್ದಾರ್ ವಲ್ಲಭ ಭಾಯಿ ಪಟೇಲ್
* "ಸಹಿಷ್ಣುತೆ ಮತ್ತು ಸ್ವಾತಂತ್ರ್ಯವು ಶ್ರೇಷ್ಠ ಗಣರಾಜ್ಯದ ಅಡಿಪಾಯವಾಗಿದೆ." - ಫ್ರಾಂಕ್ ಲಾಯ್ಡ್ ರೈಟ್
* "ರಾಷ್ಟ್ರದ ಧ್ವಜವನ್ನು ನೋಡುವಾಗ ಧ್ವಜವನ್ನು ಮಾತ್ರ ನೋಡುವುದಿಲ್ಲ ಅದರಲ್ಲಿ ಇಡೀ ರಾಷ್ಟ್ರವನ್ನೇ ನೋಡುತ್ತೇವೆ. ಧ್ವಜದಲ್ಲಿ ಸರ್ಕಾರ, ತತ್ವಗಳು, ಸತ್ಯಗಳು, ಅದನ್ನು ರೂಪಿಸುವ ರಾಷ್ಟ್ರದ ಇತಿಹಾಸವನ್ನು ಓದಬಹುದು". - ಹೆನ್ರಿ ವಾರ್ಡ್ ಬೀಚರ್
Recommended Video
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications