CRPF ರೈಸಿಂಗ್ ಡೇ: ಭಾರತದ ಅತಿದೊಡ್ಡ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಇತಿಹಾಸ ಮತ್ತು ಸ್ಥಾಪನೆ
ನಮ್ಮ ದೇಶದ ಅತಿ ದೊಡ್ಡ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆ (CRPF) ಸಂಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ಈ ಸಿಆರ್ಪಿಎಫ್ ಧೀರ ಭದ್ರತಾ ಪಡೆಗಳನ್ನು ಹೆಮ್ಮಯಿಂದ ಸ್ಮರಿಸುವ ದಿನವಾಗಿದೆ. ಸಿಆರ್ಪಿಎಫ್ ಅಂದರೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ದೇಶದ 83 ವರ್ಷಗಳ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಸಿಆರ್ಪಿಎಫ್ ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾತ್ರ ವಹಿಸಿದೆ.
ಮೂರೂವರೆ ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರು ಈ ಮೀಸಲು ಪಡೆಯೊಂದಿಗೆ ಇದ್ದಾರೆ. ವರ್ಷಗಳ ಕಾಲ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ದೇಶಗಳ ಪಡೆಗಳು ಈ ಸಿಆರ್ಪಿಎಫ್ನ ತರಬೇತಿ ಕೇಂದ್ರಗಳಿಗೆ ತರಬೇತಿ ಪಡೆದುಕೊಳ್ಳುತ್ತವೆ.
ಸಿಆರ್ಪಿಎಫ್ಗೆ ಹೆಮ್ಮೆಯ ಇತಿಹಾಸವಿದೆ ಮತ್ತು ಕಳೆದ 83 ವರ್ಷಗಳಿಂದ ಈ ಪಡೆಯ ಸಿಬ್ಬಂದಿ ದೇಶ ಸೇವೆಯಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ. CRPF ತಂಡವು ಹಲವಾರು ಸಂದರ್ಭಗಳಲ್ಲಿ ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾತ್ರವನ್ನು ವಹಿಸಿದೆ.

ಮಧ್ಯಪ್ರದೇಶದ ಸಣ್ಣ ಪಟ್ಟಣವಾದ ನೀಮುಚ್ನಲ್ಲಿ ಸ್ಥಾಪನೆ
ಸಿಆರ್ಪಿಎಫ್ನ 84ನೇ ಸಂಸ್ಥಾಪನಾ ದಿನವನ್ನು ಇಂದು (ಜುಲೈ 27) ರಂದು ಆಚರಿಸಲಾಗುತ್ತದೆ. ಸಿಆರ್ಪಿಎಫ್ ಅಂದರೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಇದು ದೇಶದಲ್ಲಿ ಅತಿ ದೊಡ್ಡ ಭದ್ರತೆ ಒದಗಿಸುವ ದಳವಾಗಿದೆ. 27 ಜುಲೈ 1939ರಂದು ಮಧ್ಯಪ್ರದೇಶದ ಒಂದು ಸಣ್ಣ ಪಟ್ಟಣವಾದ ನೀಮುಚ್ನಲ್ಲಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಸಿಆರ್ಪಿಎಫ್ ಪಡೆಯನ್ನು ಕ್ರೌನ್ ಪ್ರತಿನಿಧಿ ಪೊಲೀಸ್ ಎಂದು ಹೆಸರಿಸಲಾಯಿತು.
ಸ್ವಾತಂತ್ರ್ಯದ ನಂತರ ಈ ಪಡೆಗೆ 1949ರಲ್ಲಿ ಈ ಪಡೆಗೆ ಸಿಆರ್ಪಿಎಫ್ ಎಂದು ಹೆಸರಿಸಲಾಯಿತು. 1965ರಲ್ಲಿ ಸರ್ದಾರ್ ಪೋಸ್ಟ್ನಲ್ಲಿ ಹಾಟ್ ಸ್ಪ್ರಿಂಗ್ ಮತ್ತು ರನ್ ಆಫ್ ಕಚ್ ಘಟನೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ತಮ್ಮ ಶೌರ್ಯವನ್ನು ಪ್ರದರ್ಶಿಸಿದರು. ಇದರೊಂದಿಗೆ ಸಂಸತ್ತಿನ ಮೇಲಿನ ಫಿದಾಯಿನ್ ದಾಳಿ, ಅಯೋಧ್ಯೆ ದಾಳಿ ಮತ್ತು ಹಲವು ಕಾರ್ಯಾಚರಣೆಗಳಲ್ಲಿ ಸಿಆರ್ಪಿಎಫ್ ಸಿಬ್ಬಂದಿ ದಾಳಿಕೋರರಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮುಂದೆ ಸಿಆರ್ಪಿಎಫ್ ಯೋಧರನ್ನು ನಿರಂತರವಾಗಿ ಹೆಚ್ಚಿನ ಭದ್ರತೆಗಾಗಿ ನೀಯೋಜಿಸಲಾಗಿದೆ.

ಸಿಆರ್ಪಿಎಫ್ ಕಾಯಿದೆ ಜಾರಿ
ಈ ಪಡೆಗಳು ಬ್ರಿಟಿಷರ ಸಾಮ್ರಾಜ್ಯಶಾಹಿ ಆಳ್ವಿಕೆಯಿಂದಲೂ ಇದ್ದವು ಮತ್ತು ಕ್ರೌನ್ ರೆಪ್ರೆಸೆಂಟೇಟಿವ್ಸ್ ಪೋಲೀಸ್ ಎಂದು ಕರೆಯಲಾಗುತ್ತಿತ್ತು. ವಸಾಹತುಶಾಹಿ ರಾಜ್ನ ಸಂಕೋಲೆಯಿಂದ ಭಾರತದ ಸ್ವಾತಂತ್ರ್ಯದ ನಂತರ 1949ರ ಡಿಸೆಂಬರ್ 28ರಂದು ಸಿಆರ್ಪಿಎಫ್ ಕಾಯಿದೆಯನ್ನು ಜಾರಿಗೊಳಿಸುವುದರೊಂದಿಗೆ ಇದು ತನ್ನ ಹೆಸರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಎಂದು ಪಡೆದುಕೊಂಡಿತು.
ಸಿಆರ್ಪಿಎಫ್ ಪಡೆಗಳು ದೇಶದಲ್ಲಿ 54 ತರಬೇತಿ ಕೇಂದ್ರಗಳನ್ನು ಹೊಂದಿದೆ. ಇದಲ್ಲದೇ 246 ಬೆಟಾಲಿಯನ್ಗಳಿವೆ. ಇವುಗಳಲ್ಲಿ ಐದು ಸಿಗ್ನಲ್ ಬೆಟಾಲಿಯನ್ಗಳು, 6 ಮಹಿಳಾ ಬೆಟಾಲಿಯನ್, 15 ಆರ್ಎಎಫ್ ಬೆಟಾಲಿಯನ್ಗಳು, 10 ಕೋಬ್ರಾ ಬೆಟಾಲಿಯನ್ಗಳಿವೆ. ಇದಲ್ಲದೆ, 3.50 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರನ್ನು ಹೊಂದಿದ್ದಾರೆ. ಈ ರೀತಿಯಾಗಿ ಸಿಆರ್ಪಿಎಫ್ ಪ್ರಸ್ತುತ ವಿಶ್ವದ ಅತಿದೊಡ್ಡ ಅರೆಸೇನಾ ಪಡೆಯಾಗಿದೆ.
ಮೀರತ್ನ ರಾಪೋ ಘಟಕದಲ್ಲಿ ತರಬೇತಿ
ಸಿಆರ್ಪಿಎಫ್ನ ಕೆಲವು ಯೋಧರು ತರಬೇತಿ ಪಡೆದು ರಾಪೋದಲ್ಲಿ ಸೇರಿಸಿಕೊಂಡಿದ್ದಾರೆ. ಕೆಲವು ಮಾರಣಾಂತಿಕ ಮತ್ತು ಗುಂಪು ಹಿಂಸಾಚಾರವನ್ನು ಎದುರಿಸಲು ಸಿಆರ್ಪಿಎಫ್ ತರಬೇತಿ ಪಡೆದಿದೆ. ಮೀರತ್ನ ರಾಪೋ ಘಟಕದಲ್ಲಿ ಈ ಹಿಂದೆ ಹಲವು ದೇಶಗಳು ತಮ್ಮ ಸೈನಿಕರನ್ನು ತರಬೇತಿಗೆ ಕಳುಹಿಸಿದ್ದವು. ಇತ್ತೀಚೆಗೆ ಶ್ರೀಲಂಕಾ, ಹೈಟಿ, ಕೊಸೊವೊ, ಲೈಬೀರಿಯಾ ಸೇರಿದಂತೆ ಹಲವು ದೇಶಗಳ ಸೈನಿಕರು ಇಲ್ಲಿ ತರಬೇತಿ ಪಡೆದಿದ್ದಾರೆ. ಇದಲ್ಲದೇ ಆರ್ಪಿಎಫ್, ದೆಹಲಿ ಪೊಲೀಸ್, ಹರಿಯಾಣ ಪೊಲೀಸ್, ತೆಲಂಗಾಣ ಪೊಲೀಸ್ ಹೀಗೆ ಹಲವು ಇಲಾಖೆಗಳ ತಂಡಗಳೂ ಇಲ್ಲಿ ತರಬೇತಿ ಪಡೆದಿವೆ.
|
ಸಿಆರ್ಪಿಎಫ್ ಪಡೆಯ ಮಹತ್ವದ ಸಂಗತಿಗಳು
* ಸಿಆರ್ಪಿಎಫ್ ವೈಭವದ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಇದು ಹಲವಾರು ಕಾರ್ಯಾಚರಣೆಗಳಲ್ಲಿದೆ.
* ಭಾರತದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸುಮಾರು 246 ಬೆಟಾಲಿಯನ್ಗಳನ್ನು ಹೊಂದಿದೆ.
* ಈ ಪಡೆಗಳು 30,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ.
* 1965ರಲ್ಲಿ ಗಡಿ ಭದ್ರತಾ ಪಡೆ ವಿಶೇಷವಾಗಿ ಈ ಉದ್ದೇಶಕ್ಕಾಗಿ ಅಸ್ತಿತ್ವಕ್ಕೆ ಬರುವವರೆಗೂ ಸಿಆರ್ಪಿಎಫ್ ಭಾರತ-ಪಾಕ್ ಗಡಿಯಲ್ಲಿ ಕಾವಲು ಪಡೆಯಾಗಿತ್ತು.
* 2001ರಲ್ಲಿ ಭಾರತೀಯ ಸಂಸತ್ತಿಗೆ ನುಗ್ಗಿದ್ದ ಐವರು ಉಗ್ರರನ್ನು ಸಿಆರ್ಪಿಎಫ್ ಸಿಬ್ಬಂದಿ ಹೊಡೆದುರುಳಿಸಿದ್ದರು.
* 1962ರಲ್ಲಿ ಭಾರತ-ಚೀನಾ ಯುದ್ಧದ ಸಮಯದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಹೆಚ್ಚಿನ ಮೌಲ್ಯವನ್ನು ಚಿತ್ರಿಸಿದ್ದರು.
* ನಕ್ಸಲೀಯರ ಆಂದೋಲನವನ್ನು ಎದುರಿಸಲು 2008ರಲ್ಲಿ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (CoBRA) ಪಡೆಯನ್ನು CRPFಗೆ ಸೇರಿಸಲಾಯಿತು.
* ಚುನಾವಣೆಯ ಸಮಯದಲ್ಲಿ ಪಡೆಗಳನ್ನು ನಿಯೋಜಿಸುವುದರಿಂದ ಮತ್ತು ದಂಗೆಗಳನ್ನು ಎದುರಿಸುವುದರಿಂದ ಜಮ್ಮು ಮತ್ತು ಕಾಶ್ಮೀರ, ಬಿಹಾರ ಮುಂತಾದ ರಾಜ್ಯಗಳಲ್ಲಿ ಹಿಂಸಾಚಾರದ
*ಸ್ಫೋಟವನ್ನು ಕಾಪಾಡುವವರೆಗೆ, ರಾಷ್ಟ್ರದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಸಿಆರ್ಪಿಎಫ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಷ್ಟ್ರೀಯ ಮಿಷನ್ಗಳ ಹೊರತಾಗಿ, ವಿಶ್ವಸಂಸ್ಥೆಯ
*ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗಾಗಿ ಸಿಆರ್ಪಿಎಫ್ ಪಡೆಗಳನ್ನು ನಿಯೋಜಿಸಲಾಗಿದೆ.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications