Buddha Purnima 2023: ಬುದ್ಧ ಪೂರ್ಣಿಮಾ ದಿನಾಂಕ, ಸಮಯ, ಇತಿಹಾಸ, ಮಹತ್ವ, ಇನ್ನಷ್ಟು

ಬುದ್ಧ ಪೂರ್ಣಿಮಾ ಅಥವಾ ವೈಶಾಖ ಪೂರ್ಣಿಮೆಯನ್ನು ಪ್ರತಿ ವರ್ಷ ಮೇ 5 ರಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮದ ಸಂಸ್ಥಾಪಕ ಭಗವಾನ್ ಬುದ್ಧನ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಭಗವಾನ್ ಬುದ್ಧನ ನಿಜವಾದ ಹೆಸರು ಸಿದ್ಧಾರ್ಥ ಗೌತಮ."ಬುದ್ಧ" ಎಂದರೆ 'ಜ್ಞಾನ ಪಡೆದವನು' ಎಂದರ್ಥ. ಇಂದು ಬೌದ್ಧ ಮತೀಯರಿಗೆ ಬಹಳ ಪವಿತ್ರವಾದ ದಿನ.

ಈ ವರ್ಷ ಬುದ್ಧ ಪೂರ್ಣಿಮಾ ಶುಕ್ರವಾರ ಮೇ 5 ರಂದು ಬರುತ್ತದೆ. ವರ್ಷದ ಮೊದಲ ಚಂದ್ರಗ್ರಹಣ ಕೂಡ ಇದೇ ದಿನಾಂಕದಂದು ನಡೆಯಲಿದೆ.

Buddha Purnima 2023: Know Date, Time, History, Significance, Celebrations, Tithi & More in Kannada

ದೃಕ್ ಪಂಚಾಂಗ್ ಪ್ರಕಾರ, ಗೌತಮ ಬುದ್ಧನ ಜನನ ಮತ್ತು ಮರಣದ ಸಮಯ ಅನಿಶ್ಚಿತವಾಗಿದೆ. ಆದಾಗ್ಯೂ, ಹೆಚ್ಚಿನ ಇತಿಹಾಸಕಾರರು ಅವರ ಜೀವಿತಾವಧಿಯನ್ನು 563-483 B.C. ವರೆಗೆ ಎಂದು ಹೇಳುತ್ತಾರೆ. ಹೆಚ್ಚಿನ ಜನರು ನೇಪಾಳದ ಲುಂಬಿನಿಯನ್ನು ಬುದ್ಧನ ಜನ್ಮಸ್ಥಳವೆಂದು ಪರಿಗಣಿಸುತ್ತಾರೆ. ಬುದ್ಧ 80 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ಕುಶಿನಗರದಲ್ಲಿ ನಿಧನರಾದರು ಎಮದು ಹೇಳಲಾಗುತ್ತದೆ.

ಬುದ್ಧ ಪೂರ್ಣಿಮೆಯ ಇತಿಹಾಸ ಮತ್ತು ಮಹತ್ವ

ಬೌದ್ಧ ಧರ್ಮದ ಎಲ್ಲಾ ಅನುಯಾಯಿಗಳಿಗೆ ಬುದ್ಧ ಪೂರ್ಣಿಮೆ ಮುಖ್ಯವಾಗಿದೆ. ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಭಗವಾನ್ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ಕೆಲವರು ನಂಬುತ್ತಾರೆ. ಬುದ್ಧ ಜಯಂತಿ ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮೆಗೆ ಹಿಂದೂಗಳಲ್ಲಿ ಹೆಚ್ಚಿನ ಮಹತ್ವವಿದೆ. ಈ ವಿಶೇಷ ದಿನದಂದು ಭಕ್ತರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ದಿನ ಭಗವಾನ್ ವಿಷ್ಣುವನ್ನು ಆರಾಧಿಸುತ್ತಾರೆ. ಸತ್ಯನಾರಾಯಣ ಕಥೆಯನ್ನು ಪಠಿಸುವ ಮೂಲಕ ಉಪವಾಸವನ್ನು ಆಚರಿಸುತ್ತಾರೆ.

ದೃಕ್ ಪಂಚಾಂಗದ ಪ್ರಕಾರ, ಉತ್ತರ ಭಾರತದಲ್ಲಿ ಭಗವಾನ್ ವಿಷ್ಣುವಿನ ಒಂಬತ್ತನೇ ಅವತಾರವೆಂದು ಪರಿಗಣಿಸಲಾಗಿದೆ. ಆದರೆ ದಕ್ಷಿಣ ಭಾರತದ ನಂಬಿಕೆಯಲ್ಲಿ ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುವುದಿಲ್ಲ.

ಬುದ್ಧ ಪೂರ್ಣಿಮಾ 2023 ತಿಥಿ: ದಿನಾಂಕ ಮತ್ತು ಸಮಯ

ದೃಕ್ ಪಂಚಾಂಗದ ಪ್ರಕಾರ ಬುದ್ಧ ಪೂರ್ಣಿಮಾ ತಿಥಿ ಹೀಗಿದೆ:

ಪೂರ್ಣಿಮಾ ತಿಥಿ ಆರಂಭ: ಮೇ 4 ರಂದು ರಾತ್ರಿ 11:44

ಪೂರ್ಣಿಮಾ ತಿಥಿ ಮುಕ್ತಾಯ: ಮೇ 5 ರಂದು ರಾತ್ರಿ 11:03 ಕ್ಕೆ

Buddha Purnima 2023: Know Date, Time, History, Significance, Celebrations, Tithi & More in Kannada


ಬುದ್ಧ ಪೂರ್ಣಿಮಾ 2023 ಆಚರಣೆಗಳು

*ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಲಾಗುತ್ತದೆ. ಕೆಲವರು ತಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಹರಿದ್ವಾರ ಮತ್ತು ಋಷಿಕೇಶದಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

*ಅರ್ಘ್ಯ ಜಲವನ್ನು ಅರ್ಪಿಸುವ ಮೂಲಕ ಸೂರ್ಯನಿಗೆ ಕೃತಜ್ಞತೆಯನ್ನು ತೋರಿಸಿ.

*ಮಂಗಳಕರವೆಂದು ಪರಿಗಣಿಸಲಾದ ಈ ಸಂದರ್ಭದಲ್ಲಿ ದಾನಗಳನ್ನು ಮಾಡುವುದರಿಂದ ಒಳೆತಾಗುತ್ತದೆ ಎಂದು ಹೇಲಳಾಗುತ್ತದೆ.

*ಬ್ರಾಹ್ಮಣರಿಗೆ ಆಹಾರ ಮತ್ತು ಬಟ್ಟೆಗಳನ್ನು ಅರ್ಪಿಸಲಾಗುತ್ತದೆ.

*ನೀವು ಸತ್ಯನಾರಾಯಣ ಉಪವಾಸವನ್ನು ಆಚರಿಸುತ್ತಿದ್ದರೆ ಸಂಜೆ ನಿಮ್ಮ ಉಪವಾಸವನ್ನು ಮುರಿಯಿರಿ.

*ಹುಣ್ಣಿಮೆಯ ಬೆಳಕಿಗೆ ಸಾಕ್ಷಿಯಾಗಿದೆ. ಈ ಹುಣ್ಣಿಮೆಯ ಬೆಳಕು ಭೂಮಿಗೆ ಬಂದ ನಂತರ ದಂಪತಿಗಳಿಗೆ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

*ಓಂ ಚಂದ್ರಯೇ ನಮಃ, ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ, ಹೇ ನಾಥ ನಾರಾಯಣ ವಾಸುದೇವ; ಮತ್ತು ಓಂ ನಮೋ ಭಗವತೇ ವಾಸುದೇವಯೇ ಮುಂತಾದ ಮಂತ್ರಗಳನ್ನು ಪಠಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+