BSNL: ಕೈಗೆಟುವ ಬೆಲೆಗೆ 60 ದಿನದ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್! ಪ್ರಯೋಜನಗಳು
ಬೆಂಗಳೂರು, ಫೆಬ್ರವರಿ 13: ಭಾರತದ ಟೆಲಿಕಾಂ ಸಂಸ್ಥೆಯಲ್ಲಿ ತನ್ನ ಅಚ್ಚರಿಯ ಹಾಗೂ ಗ್ರಾಹಕ ಸ್ನೇಹಿ ಯೋಜನೆಗಳ ಮೂಲಕ ಜನಮನ ಸೆಳೆಯುತ್ತಿರುವ BSNL ಬಜೆಟ್ ಸ್ನೇಹಿ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆ ಇದಾಗಿದ್ದು, ಇಜಿಯೋ, ಏರ್ಟೆಲ್, ವಡಾಫೋನ್ನಂತಹ ದಿಗ್ಗಜ ಖಾಸಗಿ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಿಸಿಕೊಳ್ಳಲಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ರೂ. 345 ಪ್ರಿಪೇಯ್ಡ್ ಯೋಜನೆ ಘೋಷಿಸಿದೆ. ಇಷ್ಟು ಕಡಿಮೆ ಬೆಲೆಗೆ ಒಟ್ಟು 60 ದಿನಗಳವರೆಗೆ (ಎರಡು ತಿಂಗಳ) ಈ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯಿಂದ ನೀವು ಅನಿಯಮಿತವಾಗಿ ಧ್ವನಿ ಕರೆ ಪಡೆಯಬಹುದು. ಎರಡು ತಿಂಗಳು ಅನ್ಲಿಮಿಟೆಡ್ ಕರೆಗಳ ಜೊತೆಗೆ ದೈನಂದಿನ 100 ಎಸ್ಎಂಎಸ್ ಹಾಗೂ ಪ್ರತಿ ದಿನ 1ಜಿಬಿ ಡೇಟಾ ಪಡೆಯಲಾಗುತ್ತದೆ.

ರೂ. 345 & 347 ಪ್ಲಾನ್ ವತ್ಯಾಸ ಪ್ರಯೋಜನ
ಹೆಚ್ಚು ಡೇಟಾ ಬೇಕು ಎನ್ನುವವರು ಬಳಕೆದಾರರು ರೂ. 345 ಪ್ರಿಪೇಯ್ಡ್ ಯೋಜನೆ ಬದಲಾಗಿ ರೂಪಾಯಿ 347 ರಿಚಾರ್ಜ್ ಪ್ಲಾನ್ ಪಡೆಯಬಹುದು. ಇದರಲ್ಲೂ ಉತ್ತಮ ಸೇವೆ ಲಭ್ಯ ಇದೆ. ಈ ಎರಡು ಮೊಬೈಲ್ ರಿಚಾರ್ಜ್ ಯೋಜನೆಗಳ ಮಧ್ಯೆ ಕೇವಲ 2 ರೂಪಾಯಿ ವ್ಯತ್ಯಾಸ ಇದೆ. ಆದರೆ ರೂ. 347 ಪ್ಲಾನ್ ನಿಮಗೆ ಪ್ರತಿ ನಿತ್ಯ 2GB ಇಂಟರ್ನೆಟ್ ಸೇವೆ ನೀಡುತ್ತದೆ. ಡೈಲಿ ಬೇಸ್ ಡೇಟಾ ಖಾಲಿಯಾದರೂ ನೀವು ಅನಿಮಿತ 40kbps 4g ಇಂಟರ್ನೆಟ್ ಪಡೆಯಬಹುದಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ರೂ. 347 ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಅನಿಯಮಿತ ಧ್ವನಿ ಕರೆಗಳು, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವು ಸಿಗಲಿದೆ. ಈ ಪ್ಲಾನ್ 54 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಗಳ ಮಧ್ಯ ಅಂತಹ ದೊಡ್ಡ ವ್ಯತ್ಯಾಸವೇನು ಇಲ್ಲ. ಆದರೆ ಇವು ಬಳಕೆದಾರರಿಗೆ ಅನುಕೂಲಕರವಾಗಿವೆ ಎನ್ನುತ್ತದೆ ಕಂಪನಿ.

65 ಸಾವಿರ ಸೈಟ್ಗಳಲ್ಲಿ 4ಜಿ ಲಭ್ಯ
BSNL ಸಂಸ್ಥೆಯು ಅಲ್ಪಾವಧಿ ಮತ್ತು ದೀರ್ಘಾವಧಿ ಪ್ಲಾನ್ಗಳನ್ನು ಘೋಷಿಸಿದೆ. ಇದರಿಂದ ವಿವಿಧ ಎಲ್ಲ ವರ್ಗದ ಜನರಿಗೆ ಹತ್ತಿರವಾಗುತ್ತಿದೆ. ಈಗಾಗಲೇ 65 ಸಾವಿರ ಟವರ್ ನಿರ್ಮಾಣ ಮಾಡಿದ್ದು, ಆ ಎಲ್ಲ ಸ್ಥಳಗಳಲ್ಲಿ 4G ಇಂಟರ್ನೆಟ್ ಸೇವೆ ನೀಡುತ್ತಿದೆ. ಜನವರಿ 15 ರಂದು ತನ್ನ 3G ಇಂಟರ್ನೆಟ್ ಸ್ಥಗಿತಗೊಳಿಸಿತ್ತು.
ದೇಶಾದ್ಯಂತ 1 ಲಕ್ಷ ಟವರ್ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಕೆಲಸಗಳೂ ಪ್ರಗತಿಯಲ್ಲಿವೆ. ಈ ಎಲ್ಲ ಸೈಟ್ಗಳಲ್ಲೂ 4G ಇಂಟರ್ನೆಟ್ ಸೇವೆ ನೀಡುವ ಜೊತೆ ಜೊತೆಗೆ 5ಜಿ ಇಂಟರ್ನೆಟ್ ಗೂ BSNL ಅಪ್ಡೇಟ್ ಆಗಲಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications