Viral Video: ಅಬ್ಬಾ ಏನ್ ಟ್ರಕ್ ಡ್ರೈವರ್ ಟೈಮಿಂಗ್: ಕೊಂಚ ಮಿಸ್ ಆಗಿದ್ರು, ಬಡ ಜೀವ ಖಲ್ಲಾಸ್
ವೈರಲ್ ವಿಡಿಯೋಗಳನ್ನು ಸುಮ್ನೆ ನೋಡ್ತಾ ಇದ್ದರೆ, ಮೈ ಜುಂ ಅನಿಸುತ್ತದೆ. ಈ ವಿಡಿಯೋಗಳು ರಸ್ತೆಯಲ್ಲಿ ತಿರುಗಾಡುವಾಗ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ದೃಶ್ಯ ಕೈಗನ್ನಡಿಯಾಗಿದೆ. ನಾವು ರಸ್ತೆಯಲ್ಲಿ ಹೊರಟಾಗ ಯಾವುದೇ ವಸ್ತುವನ್ನು ಹಗರುವಾಗಿ ಪರಿಗಣಿಸಬಾರದು ಎಂಬುದಕ್ಕೆ ಈ ದೃಶ್ಯ ಬೆಸ್ಟ್ ಎಕ್ಸಾಮಪಲ್..
ಈ ದೃಶ್ಯವನ್ನು ಒಮ್ಮೆ ನೋಡಿದರೆ, ಪದೇ ಪದೇ ನೋಡ ಬೇಕೆಂದು ಅನಿಸುವುದಿಲ್ಲ. ಆದರೆ ಈ ಘಟನೆಯ ತೀವ್ರತೆ ನಿಮ್ಮ ಮನಸ್ಸಿಗೆ ನಾಟದೇ ಇರಲು ಸಾಧ್ಯವೇ ಇಲ್ಲ. ಅಬ್ಬಾ.. ಈ ದೃಶ್ಯ ಕಂಡ ಮೇಲೆ ರಸ್ತೆಯಲ್ಲಿ ಗಾಡಿ ಓಡಿಸುವುದು ಸಹ ದುಸ್ತರ ಎಂದು ಅನಿಸದೇ ಇರದು. ಏನಪ್ಪಾ ಈ ದ್ವಿಚಕ್ರವಾಹನ ಸವಾರರ ಲಕ್ ಚೆನ್ನಾಗಿದೆ ಎಂದು ತಿಳಿಯುತ್ತದೆ.

ರಸ್ತೆಯಲ್ಲಿ ಸಂಚರಿಸುವ ಬಿಡಾಡಿ ಪ್ರಾಣಿಗಳು ಸಹ ಕೆಲವೊಮ್ಮೆ ನೋವಿನ ಅಪಘಾತಗಳಿಗೆ ಕಾರಣವಾಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗೂಳಿಯೊಂದರಿಂದ ಬೈಕ್ ನಲ್ಲಿ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರ ಅಪಘಾತವನ್ನು ಮಾಡಿದೆ. ಈ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಿಂದ ವರದಿಯಾಗಿದೆ.
बेंगलुरु: महालक्ष्मी लेआउट में सांड की टक्कर से बाइक सवार नीचे गिर गया। जैसे ही वह नीचे गिरा, ट्रक चालक ने तुरंत रोक दिया। गनीमत रही कि व्यक्ति बाल बाल बच गया। pic.twitter.com/wWDmpwmZT4
— Pinky Rajpurohit 🇮🇳 (@Madrassan_Pinky) April 5, 2024
ಆಗಿದ್ದೇನು?
ರಸ್ತೆಯಲ್ಲಿ ಗೂಳಿಯನ್ನು ಕರೆದುಕೊಂಡು ಒಬ್ಬ ಮಹಿಳೆ ಹೋಗುತ್ತಿದ್ದಳು. ಆಗ ಇನ್ನೊಂದು ಬದಿಯಿಂದ ಟೂವಿಲರ್ ಒಂದು ಬರುತ್ತಿತ್ತು. ಪಾಪಾ ಆ ಟೂವಿಲರ್ ಚಾಲಕನಿಗೆ ಏನು ಗೊತ್ತು ಹೇಳಿ, ತನ್ನ ಪಾಡಿಗೆ ತಾನು ಸ್ಕೂಟರ್ ಓಡಿಸುತ್ತಾ ಹೊರಟಿದ್ದಾನೆ. ಆಗಲೇ ಈ ಗೂಳಿ ತನ್ನ ಕಾಲಿಗೆ ಬುದ್ಧಿ ಹೇಳಿದೆ. ಅಬ್ಬಾ ಏನ್ ಜಿಗಿತಾ ರಿ ಈ ಗೂಳಿದ್ದು. ಇದನ್ನು ನೋಡಿದರೆ ಮೈ ಜೂಂ ಅನಿಸುತ್ತದೆ.
ಟೂ ವಿಲರ್ ತನ್ನ ಮುಂದೆ ಬರುತ್ತಿದ್ದಂತೆ ಗೂಳಿ ಕಾರ್ಯ ಪ್ರವೃತ್ತವಾಗಿ, ಟೂ ವಿಲರ್ ಚಾಲಕನ ಮೇಲೆ ಜಿಗಿದಿದೆ. ಭಯಕ್ಕೆ ಬಿದ್ದ ಚಾಲಕ ರಸ್ತೆಗೆ ಬಿದ್ದಿದ್ದಾನೆ. ಅದು ಆ ಚಾಲಕ ಸಮಯ ಎಷ್ಟು ಚೆನ್ನಾಗಿತ್ತು ಎಂದರೆ, ಈ ವಿಡಿಯೋ ನೋಡಿದರೆ ತಿಳಿಯುತ್ತದೆ.
ಇವನು ಬಿಳುವುದನ್ನು ತನ್ನ ಮೀರರ್ನಲ್ಲಿ ನೋಡಿದ್ದ ಟ್ರಕ್ ಚಾಲಕ, ಬ್ರೇಕ್ ಹಾಕಿ, ಟೂವಿಲರ್ ಚಾಲಕನ ಜೀವ ಉಳಿಸಿದ್ದಾನೆ. ಇಲ್ಲಾ ಅಂದ್ರೆ ಚಾಲಕನ ಕಥೆ ಬೇರೆಯದ್ದೆ ಆಗಿತ್ತು. ಟ್ರಕ್ ಚಾಲಕನ ಟೈಮಿಂಗ್ ಕಂಡು ನೆಟ್ಟಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ.
ಈ ವೈರಲ್ ವೀಡಿಯೊವನ್ನು @Madrassan_Pinky ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. "ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಗೂಳಿಯಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ತಕ್ಷಣ ಟ್ರಕ್ ಚಾಲಕ ತಕ್ಷಣ ಟ್ರಕ್ ನಿಲ್ಲಿಸಿದ್ದಾನೆ. ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿರುವುದು ಅದೃಷ್ಟ" ಎಂದು ಬಳಕೆದಾರರು ಬರೆದುಕೊಂಡಿದ್ದಾರೆ.
-
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ












Click it and Unblock the Notifications