52 ಇಳಿ ವಯಸ್ಸಿನಲ್ಲಿ ಮದುವೆ ಆಗ್ತಾರಂತೆ ರೋಮ್ಯಾಂಟಿಕ್ ನಟಿ?!
ಚಿತ್ರರಂಗದಲ್ಲಿರುವ ಹಲವು ನಟಿಯರು ಯೌವನ ಕಳೆದರೂ ಮದುವೆ ಆಗಿರಲ್ಲ. ಅದಕ್ಕೆ ಸಿನಿಮಾಗಳಲ್ಲಿ ಆಫರ್ಗಳು ಮಿಸ್ ಆಗ್ತವೆ ಎನ್ನುವುದು ಸಹ ಕಾರಣ. ಇನ್ನು ಕೆಲವು ನಟಿಯರು ಅವರಿಗೆ ಮ್ಯಾಚ್ ಆಗುವ, ಅರ್ಥವಾಗುವ ಹುಡುಗ ಸಿಗುವವರೆಗೆ ಮದುವೆ ಆಗಲ್ಲ ಅಂತ ಕಾಯ್ತಾರೆ. ಆದರೆ, ಇಲ್ಲೊಬ್ಬ ನಟಿ 50 ವರ್ಷದ ನಂತರ ಅಂದರೆ ಅವರ 52ನೇ ವಯಸ್ಸಿನಲ್ಲಿ ಮದುವೆಯಾಗಲು ಮುಂದಾಗಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಈ ನಟಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಚಿತ್ರರಂಗದಲ್ಲಿ ಮಿಂಚಿದ ನಟಿ ಇದೀಗ ಅವರ 52 ವಯಸ್ಸಿನಲ್ಲಿ ಹಸೆಮಣೆ ಹತ್ತುವುದಕ್ಕೆ ಮುಂದಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಮದುವೆ ಆಗಲು ಬಾಲಿವುಡ್ ಬೆಡಗಿ ಟಬು ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಟಬು ಬಾಲಿವುಡು, ಕಾಲಿವುಡ್ ಹಾಗೂ ಟಾಲಿವುಡ್ ಮೂವಿಗಳಲ್ಲಿ ಮಿಂಚಿದ್ದಾರೆ. ಈಗಲೂ ಅವರು ಬಾಲಿವುಡ್ನ ಬಹುಬೇಡಿಕೆಯ ನಟಿ. ಅವರ ವಿವಾಹದ ಬಗ್ಗೆ ಇದೀಗ ಬಿಸಿಬಿಸಿ ಚರ್ಚೆ ಶುರುವಾಗಿದೆ.

ತೆಲುಗಿನಲ್ಲಿ ಇತ್ತೀಚಿನ ವರ್ಷದಲ್ಲಿ ಬಿಡುಗಡೆಯಾಗಿದ್ದ ಅಲಾ ವೈಕುಂಠ ಪುರ ಸಿನಿಮಾದಲ್ಲಿ ಅಲ್ಲುಅರ್ಜುನ್ ಅವರ ಅಮ್ಮನ ಪಾತ್ರ ಮಾಡಿಯೂ ಟಬು ಸೈ ಎನಿಸಿಕೊಂಡಿದ್ದರು. ನಟಿ, ಪೋಷಕ ನಟಿಯಾಗಿ ಮಿಂಚಿರುವ ಈ ಬೆಡಗಿಗೆ ಇದೀಗ 52 ವರ್ಷ. ಈ ವಯಸ್ಸಿನಲ್ಲಿ ಅವರು ಮದುವೆಯಾಗುವ ಮನಸ್ಸು ಮಾಡಿದ್ದಾರೆ.
ಟಬು ಅವರು ಇದೀಗ ಅವರಿಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಲು ಮುಂದಾಗಿದ್ದಾರೆ ಎನ್ನುವುದು ಸುದ್ದಿ. ಅಲ್ಲದೇ ಟಬು ಅವರಿಗೆ ಇದು ಎರಡನೇ ಮದುವೆಯಂತೆ! ಬಾಲಿವುಡ್ನ ನಟ ಹಾಗೂ ತನಗಿಂತ ಕಡಿಮೆ ವಯಸ್ಸಿನ ಯುವಕನನ್ನು ಟಬು ವರಿಸಲಿದ್ದಾರೆ ಎನ್ನುವುದು ಸುದ್ದಿ. ಆದರೆ, ಟಬು ಅವರ ಮದುವೆ ಬಗ್ಗೆ ಎದ್ದಿರುವ ಈ ವಿಷಯದ ಬಗ್ಗೆ ಟಬು ಎಲ್ಲೂ ಬಹಿರಂಗವಾಗಿ ಮಾತಾಡಿಲ್ಲ. ಈ ವಿಷಯವನ್ನು ವಿವಿಧ ಹಿಂದಿ ಮಾಧ್ಯಮಗಳು ವರದಿ ಮಾಡಿವೆಯಷ್ಟೇ.
50ರ ಮೇಲೂ ಮಿಂಚು: ಚಿತ್ರರಂಗದಲ್ಲಿ ನಟಿಯರಿಗೆ ವಯಸ್ಸು ಆಗುತ್ತಿದ್ದಂತೆಯೇ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಸುದ್ದಿ ಇದೆ. ಆದರೆ, ಈ ವಿಷಯವನ್ನು ಟಬು ಅವರು ಸುಳ್ಳು ಮಾಡುತ್ತಲ್ಲೇ ಬಂದಿದ್ದಾರೆ. ಟಬು ಅವರಿಗೆ 50 ವರ್ಷಗಳ ನಂತರವೂ ಅವಕಾಶಗಳು ಕಡಿಮೆಯಾಗಿಲ್ಲ. ರೋಮ್ಯಾಂಟಿಕ್ ಮೂವಿಗಳಿಂದಲೇ ಟಬು ಅವರು ಫೇಮಸ್ ಆಗಿದ್ದಾರೆ. ಈಗಲೂ ಅವರ ಹವಾ ಕಡಿಮೆಯಾಗಿಲ್ಲ. 50ರ ಮೇಲೂ ಯುವತಿಯಂತೆ ಅವರು ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
ಹಾಲಿವುಡ್ನಲ್ಲೂ ಮಿಂಚಿರುವ ಬೆಡಗಿ
ನಟಿ ಟಬು ಅವರು ಕೇವಲ ಭಾರತೀಯ ಸಿನಿರಂಗ ಮಾತ್ರವಲ್ಲ. ಹಾಲಿವುಡ್ನಲ್ಲೂ ಮಿಂಚಿದ್ದಾರೆ. ನಟಿ ಟಬು ಅವರು 2006 ರಲ್ಲಿ 'ದಿ ನೇಮ್ಸೇಕ್' ಎನ್ನುವ ಸಿನಿಮಾದ ಮೂಲಕ ಹಾಲಿವುಡ್ಗೆ ಮೊದಲ ಬಾರಿ ಪ್ರವೇಶಿಸಿದ್ದರು. ಈ ಚಿತ್ರವನ್ನು ಮೀರಾ ನಾಯರ್ ನಿರ್ದೇಶಿಸಿದ್ದರು. ಇರ್ಫಾನ್ ಖಾನ್ ನಟಿಸಿದ ಈ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆ ಸಹ ಬಂದಿತ್ತು. ಎರಡನೇ ಚಿತ್ರ 'ಲೈಫ್ ಆಫ್ ಪೈ' 2012ರಲ್ಲಿ ತೆರೆಕಂಡಿತ್ತು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications