Geetha Shivarajkumar: ಗೀತಕ್ಕನ ಹುಟ್ಟುಹಬ್ಬಕ್ಕೆ ಶಿವಣ್ಣನಿಂದ ಸ್ಪೆಷಲ್ ಸರ್ಪ್ರೈಸ್, ಏನದು?
ಸ್ಯಾಂಡಲ್ವುಡ್ ದೊಡ್ಮನೆಯ ದೊಡ್ಡ ಸೊಸೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜ್ಯದೆಲ್ಲೆಡೆ ಈ ಜೋಡಿ ಗೀತಕ್ಕ-ಶಿವಣ್ಣ ಎಂದೇ ಮನೆಮಾತಾಗಿದೆ. ಇನ್ನು ಗೀತಕ್ಕನ ಹುಟ್ಟುಹಬ್ಬಕ್ಕೆ ಶಿವಣ್ಣನ ಅಭಿಮಾನಿಗಳು ವಿಶ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಜೋಡಿಯ ಫೋಟೋ ಹಂಚಿಕೊಂಡಿದ್ದಾರೆ. ಶಿವಣ್ಣ ಕೂಡ ತಮ್ಮ ಪ್ರೀತಿಯ ಪತ್ನಿಗೆ ವಿಶೇಷವಾಗಿ ಸರ್ಪ್ರೈಸ್ವೊಂದನ್ನು ನೀಡಿದ್ದಾರೆ.
ಗೀತಾ ಪಿಕ್ಚರ್ಸ್ ಕೂಡ ವಿಶೇಷವಾಗಿ ಗೀತಕ್ಕನ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ಪ್ರೀತಿ, ಗೌರವ ಮತ್ತು ಪ್ರಾಮಾಣಿಕತೆಯ ಪ್ರತಿರೂಪ ನೀವು, ನಿಮ್ಮ ಕಾರ್ಯನಿಷ್ಠೆ ನಮಗೆಲ್ಲ ಮಾದರಿ. ನೀವಿರೋ ಜಾಗವೆಲ್ಲ ಪ್ರೀತಿಯಿಂದ ತುಂಬಿರಲಿ. ಪಬ್ಬಾರ್ ತಂಡದಿಂದ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಎಂದು ಪೋಸ್ಟ್ ಹಂಚಿಕೊಂಡಿದೆ. ಶಿಸ್ತಿಗೆ ಮಾರ್ಗದರ್ಶಿ, ಪ್ರೀತಿಗೆ ಮೂಲಸೂತ್ರ, ನಮ್ಮೆಲ್ಲರ ಪ್ರೀತಿಯ ಪ್ರಿನಿಪಾಲ್ ಮೇಡಂ ಗೀತಕ್ಕ ಅವರಿಗೆ A for ಆನಂದ್ ತಂಡದಿಂದ H ಫಾರ್ ಹ್ಯಾಪಿ ಬರ್ತ್ಡೇ ಎಂದು ನಿರ್ದೇಶಕ ಶ್ರೀನಿ ಕೂಡ ವಿಶ್ ಮಾಡಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಗೀತಕ್ಕನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಹರಿದಿದೆ. ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿಯ ಶಕ್ತಿಯಾಗಿ ಜೊತೆನಿಂತ ಶಕ್ತಿ, ಅತ್ಯದ್ಭುತ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ಪ್ರಭುದ್ಧ ನಿರ್ಮಾಪಕಿ, ಗೀತಾ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹಲವರು ಶುಭಕೋರಿದ್ದಾರೆ.
ನೀನಿದ್ದರೇ ಈ ಆನಂದ!
ನಟ ಶಿವರಾಜ್ಕುಮಾರ್ ಅವರು ವಿಶೇಷವಾದ ಫೋಟೋ ಹಂಚಿಕೊಂಡು ಪತ್ನಿ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಗೀತಾ, ನೀನಿದ್ದರೆ ಆನಂದ, ನೀನಿದ್ದರೇ ಈ ಆನಂದ ಎಂದು ಶಿವಣ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಗೀತಕ್ಕ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ಶಿವರಾಜ್ಕುಮಾರ್ ಅವರು ನೀನೇ ನನ್ನ ಶಕ್ತಿ, ನನ್ನ ಶಾಂತಿ, ನನ್ನ ಕುಟುಂಬದ ಆಧಾರ ಎಂದು ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು.
ನಟ ಶಿವರಾಜ್ಕುಮಾರ್ ಅವರ ಧರ್ಮಪತ್ನಿ, ನಟ ರಾಜ್ಕುಮಾರ್ ಕುಟುಂಬದ ಸೊಸೆಗೆ ಗೀತಾ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಸಂಭ್ರಮ ಮನೆಮಾಡಿದೆ. ಗೀತಾ ಶಿವರಾಜ್ಕುಮಾರ್ ಅವರು ಶಿವಣ್ಣನಿಗೆ ನಂಬಿಕೆ, ನೆರವು ಮತ್ತು ಪ್ರೇರಣೆಯ ಮೂಲ ಎಂದು ಹಲವರು ಕರೆದಿದ್ದಾರೆ. ಅವರು ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಚಾರಿಟಿ ಕೆಲಸಗಳಲ್ಲಿ, ಚಿತ್ರರಂಗದಲ್ಲಿಯೂ ನಿಜವಾದ ಶಕ್ತಿ ಎಂದು ಹೊಗಳಿದ್ದಾರೆ. ಗೀತಕ್ಕನ ಹುಟ್ಟುಹಬ್ಬದ ಈ ದಿನದಂದು ಅಭಿಮಾನಿಗಳು ಗೀತಾ ಮತ್ತು ಶಿವರಾಜ್ಕುಮಾರ್ ಜೋಡಿಯ ಫೋಟೋಗಳು ಹಾಗೂ ಹಳೆಯ ನೆನಪುಗಳ ಫೋಟೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ ಎಂದಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications