Get Updates
Get notified of breaking news, exclusive insights, and must-see stories!

ಕರ್ನಾಟಕ ಬಂದ್... ಕನ್ನಡ ಬಗ್ಗೆ ಮಾತನಾಡಿದ ಕಮಲ್ ಹಾಸನ್ ವಿರುದ್ಧ ಜೂನ್ 2 ಸೋಮವಾರ... Karnataka Bandh

2500 ವರ್ಷ ಇತಿಹಾಸ ಇರುವ ಭಾಷೆ ನಮ್ಮ ಕನ್ನಡ... ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ ಕನ್ನಡ ಆಗಿದ್ದು ಕನ್ನಡಿಗರು ಕನ್ನಡ ಭಾಷೆಯನ್ನ ಅತ್ಯಂತ ಪ್ರೀತಿಯಿಂದ ಆರಾಧನೆ ಮಾಡುತ್ತಾರೆ & ರಕ್ಷಣೆ ಮಾಡುತ್ತಾರೆ. ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ಭಾಷೆಗೆ ತಾಯಿ ಸ್ಥಾನ ಇದೆ. ಆದರೆ, ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ & ಕನ್ನಡಿಗರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿರುವ ಆರೋಪ ಕೇಳಿ ಬಂದು ಬೆಂಕಿ ಹೊತ್ತಿಕೊಂಡಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಕನ್ನಡ ಬಗ್ಗೆ ಮಾತನಾಡಿದ ಕಮಲ್ ಹಾಸನ್ ವಿರುದ್ಧ ಜೂನ್ 2 ಸೋಮವಾರ...

ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿರುವ ಆರೋಪ ಹೊತ್ತಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಹೋರಾಟ ಶುರು ಮಾಡಿದ್ದಾರೆ. ಇದೀಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕೂಡ ತಯಾರಿ ಸಾಗುತ್ತಿದೆ. ಇಂತಹ ಸಮಯದಲ್ಲೇ, ವರನಟ ಡಾ. ರಾಜ್‌ಕುಮಾರ್ ಪುತ್ರ ಶಿವಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆರಂಭ ಆಗಿದೆ. ನಟ ಶಿವಣ್ಣ ಅವರು ತಮಿಳು ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಬೇಕು ಎಂದು ನೆಟ್ಟಿಗರು ಆಗ್ರಹ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಸಂಚಲನ ಸೃಷ್ಟಿಸಿದೆ...

Karnataka Bandh Matter Is On Discussion For This Reason Now

ಕರ್ನಾಟಕ ಬಂದ್...

ಹೌದು, ಕನ್ನಡಿಗರು ಇದೀಗ ತಮಿಳು ನಟ ಕಮಲ್ ಹಾಸನ್ ವಿರುದ್ಧ ಬೃಹತ್ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ತಮಿಳು ನಟ ಕಮಲ್ ಹಾಸನ್ ವಿರುದ್ಧ ಭಾರಿ ಆಕ್ರೋಶದ ರಣಕಹಳೆ ಮೊಳಗಿದ್ದು, ಎಲ್ಲೆಲ್ಲೂ ಪ್ರತಿಭಟನೆ ಬಗ್ಗೆ & ಹೋರಾಟ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಕನ್ನಡ ಬಗ್ಗೆ ಮಾತನಾಡಿದ ಕಮಲ್ ಹಾಸನ್ ವಿರುದ್ಧ ಜೂನ್ 2 ಸೋಮವಾರ...

ಕರ್ನಾಟಕ ಬಂದ್... ಕರ್ನಾಟಕ ಬಂದ್...

ಕನ್ನಡ ನಾಡು & ನುಡಿ ಬಗ್ಗೆ ಮಾತನಾಡಿದರೆ, ಕನ್ನಡಿಗರ ತಾಳ್ಮೆ ಕೆಣಕಿದರೆ ಅದಕ್ಕೆ ತಕ್ಕ ಪಾಠ ಗ್ಯಾರಂಟಿ ಅನ್ನೋದು ಇದೀಗ ಮತ್ತೊಮ್ಮೆ ಪ್ರೂವ್ ಆಗಿದೆ. ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ಹಬ್ಬಿದ ನಂತರ ಕನ್ನಡ ಪರ ಸಂಘಟನೆಗಳ ನಾಯಕರು ಇದೀಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ, ಕರ್ನಾಟಕದ ಮೂಲೆ ಮೂಲೆಯಲ್ಲೂ ತಮಿಳು ನಟ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಹೋರಾಟ ನಡೆಸಲು ಇದೀಗ ತಯಾರಿ ಕೈಗೊಳ್ಳಲಾಗಿದೆ. ಅಲ್ಲದೆ ಇನ್ನೂ ಒಂದು ನಿರ್ಧಾರ ಕೈಗೊಳ್ಳಲು ಚಿಂತನೆ ನಡೆದು, ಕನ್ನಡ ಬಗ್ಗೆ ಮಾತನಾಡಿದ ಕಮಲ್ ಹಾಸನ್ ವಿರುದ್ಧ ಜೂನ್ 2 ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ಚರ್ಚೆ ಆರಂಭವಾಗಿದೆ. ಅಲ್ಲದೆ ಜೂನ್ 2 ಸೋಮವಾರ ಕರ್ನಾಟಕ ಬಂದ್ ಮಾಡಲು ಕೂಡ ಚರ್ಚೆ ಮಾಡಲಾಗುತ್ತಿದ್ದು, ನಾಳೆ ಒಳಗೆ ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಮಾಹಿತಿ ಸಿಗುವ ಸಾಧ್ಯತೆ ಇದೆ.

ಕನ್ನಡದ ಬಗ್ಗೆ ತಮಿಳು ನಟನ...

ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ, ಕನ್ನಡ ಭಾಷೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಹೇಳಿಕೆ ಸರಿ ಮಾಡಿಕೊಳ್ಳದೇ ಹೊದರೆ ಇದೀಗ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ಆರೋಪ ಇದೆ. ಯಾಕಂದ್ರೆ ಕನ್ನಡ ಹುಟ್ಟಿದ್ದೇ ತಮಿಳು ಭಾಷೆಗೆ ಅನ್ನೋ ರೀತಿ ಮಾತನಾಡಿರುವ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕೋಪ ಕೆರಳುವಂತ ಮಾಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ತಮ್ಮ ಚಿತ್ರದ ಪ್ರಚಾರಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತಲೂ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಕ್ಷಮೆ ಕೇಳಿ, ಕನ್ನಡಿಗರ ಬಳಿ ತಾವು ಮಾಡಿದ್ದು ತಪ್ಪು ಅನ್ನೋದನ್ನು ಒಪ್ಪಿಕೊಳ್ಳಬೇಕಿದೆ ತಮಿಳು ನಟ ಕಮಲ್ ಹಾಸನ್.

ತಮಿಳು ನಟ ಕಮಲ್ ಹಾಸನ್ ತಪ್ಪು ಒಪ್ಪಿಕೊಳ್ಳದೇ ಇದ್ರೆ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಆಗುತ್ತಿದ್ದು, ಶನಿವಾರದ ಒಳಗೆ ಕರ್ನಾಟಕ ಬಂದ್ ದಿನಾಂಕ ಫಿಕ್ಸ್ ಆಗಲಿದೆ. ಕನ್ನಡಪರ ಸಂಘಟನೆಗಳ ಮುಖಂಡರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದ್ದು, ಈಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ಹೀಗಾಗಿ ಅದೇ ದಿನ ಕರ್ನಾಟಕದ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ ಇದೆ.

ಜೂನ್ 3 ಮಂಗಳವಾರ ರಜೆ ಘೋಷಣೆ?

ಕರ್ನಾಟಕ ಬಂದ್ ಬಗ್ಗೆ ಕನ್ನಡಪರ ಸಂಘಟನೆಗಳು ಕೂಡ ಚರ್ಚೆ ಮಾಡುತ್ತಿದ್ದು, ಜೂನ್ 2 ಸೋಮವಾರ ಬದಲಿ ಜೂನ್ 3 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಇನ್ನು ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ ಎನ್ನಲಾಗಿದ್ದು, ಕನ್ನಡಪರ ಸಂಘಟನೆ ಮುಖಂಡರಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ. ಅಲ್ಲದೆ, ತಮಿಳು ನಟ ಕಮಲ್ ಹಾಸನ್ ಸಿನಿಮಾ ಕರ್ನಾಟಕ ರಾಜ್ಯದಲ್ಲಿ ರಿಲೀಸ್ ಆಗುವುದೇ ಅನುಮಾನ ಎನ್ನುವಂತೆ ಆಗಿದ್ದು, ಈಗ ಜೂನ್ 3 ಮಂಗಳವಾರ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಜೂನ್ 3 ಮಂಗಳವಾರ ಕರ್ನಾಟಕ ಬಂದ್ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+