Pavithra Gowda: ಇಂದು ಕೋಟಿ ಕೋಟಿ ಒಡತಿಯಾದ ಪವಿತ್ರಾ ಗೌಡ.. ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಬೆಂಗಳೂರು, ಜೂನ್. 21: ಆಪ್ತ ಸ್ನೇಹಿತನಿಂದ ತನ್ನ ಬಗ್ಗೆ ಕೆಟ್ಟದಾಗಿ ಮೆಸೇಜ್ ಹಾಕಿದವನ ಹತ್ಯೆಗೆ ಕಾರಣರಾಗಿವ ನಟಿ ಪವಿತ್ರಾ ಗೌಡ ಕೋಟಿ ಕೋಟಿಗಳ ಒಡತಿ. ತನ್ನದೆ ಸ್ವಂತ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋ ಹೊಂದಿರುವ ಅವರ ಐಷಾರಾಮಿ ಜೀವನ ಈಗ ನಾಡಿನ ಜನರ ಎದುರು ಬಹಿರಂಗಗೊಂಡಿದೆ.
ಈ ನಟಿ ಪವಿತ್ರಾ ಗೌಡ ಮೂರು ಫ್ಲೋರ್ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಮನೆ ಕೆಲಸಕ್ಕೆ ಅವರ ಬಳಿ ಸಹಾಯಕರ ದಂಡೆ ಇದೆ. ಆದರೆ, ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನಲ್ಲಿ ನೆಲೆ ಕಾಣಲು ಈಕೆ ಮಾಡಿದ್ದು ಹರಸಾಹಸ. ಜನರೇ ಕೇಳೇ ಇಲ್ಲದ ಸಿನಿಮಾಗಳಲ್ಲಿ ನಟಿಸಿರುವ ಈ ಪವಿತ್ರಾ ಗೌಡ ತಮ್ಮ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎನ್ನುವುದನ್ನು ನಿರ್ದೇಶಕರೇ ಬಹಿರಂಗ ಪಡಿಸಿದ್ದಾರೆ.

ಸಿನಿಮಾಗೆ ನಟಿ ಪವಿತ್ರಾ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?
ಸದ್ಯ ಇಡೀ ರಾಜ್ಯದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಪವಿತ್ರಾ ಗೌಡ ಮತ್ತು ನಟ ದರ್ಶನ್ ತೂಗುದೀಪ ಹೆಸರು. ಕನ್ನಡ ಸಿನಿರಂಗದಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿರುವ ಪವಿತ್ರಾ ಗೌಡ ಹೆಚ್ಚು ಸುದ್ದಿಯಾಗಿದ್ದು ಮಾತ್ರ ನಟ ದರ್ಶನ್ ಜೊತೆಗಿನ ಸಂಬಂಧ ಮತ್ತು ವಿಜಯಲಕ್ಷ್ಮಿ ಜೊತೆಯ ಸೋಶಿಯಲ್ ಮಿಡಿಯಾ ವಾರ್ಗಳಿಂದ ಮಾತ್ರ.
ಸ್ಯಾಂಡಲ್ವುಡ್ನಲ್ಲಿ ನಟಿಯಾಗುವ ಆಸೆ ಹೊತ್ತು ಬಂದ ಪವಿತ್ರಾ ಗೌಡ ಮೊದಲ ಸಿನಿಮಾ 'ಅಗಮ್ಯ'. ಈ ಸಿನಿಮಾದ ನಿರ್ದೇಶಕ ಉಮೇಶ್ ಅವರು ಚೊಚ್ಚಲ ಚಿತ್ರಕ್ಕೆ ಪವಿತ್ರಾ ಗೌಡ ಆಯ್ಕೆ ಆಗಿದ್ದು ಹೇಗೇ? ಅವರು ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬ ಬಗ್ಗೆ ಖಾಸಗಿ ಚಾನೆಲ್ಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಮಾತಾನಾಡಿದ್ದಾರೆ.

ಲಕ್ಷ ಲಕ್ಷ ಕೇಳುವವರ ಮಧ್ಯೆ ಸಾವಿರಕ್ಕೆ ಒಪ್ಪಿದ್ದರು!
ಒಂದು ದಶಕಗಳ ಬಳಿಕ ಖಾಸಗಿ ಚಾನೆಲ್ಗಳ ಜೊತೆಗೆ ತಮ್ಮಾನುಭವಗಳನ್ನು ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಗೌಡ, "ಆ ಸಮಯದಲ್ಲಿ ನಮ್ಮದು ಚಿಕ್ಕ ಬಜೆಟ್ ಸಿನಿಮಾ, ಬೇರೆ ಯಾವ ನಟಿಯರ ಡೇಟ್ಸ್ ಮತ್ತು ಸಂಭಾವನೆ ಮ್ಯಾಚ್ ಆಗುತ್ತಿರಲಿಲ್ಲ. ಲಕ್ಷ ಲಕ್ಷ ಅಂತ ಬೇರೆ ನಾಯಕಿಯರು ಕೇಳುವಷ್ಟು ಸಂಭಾವನೆ ಕೊಡಲು ಆಗುತ್ತಿರಲಿಲ್ಲ. ಹೀಗಾಗಿ ಐದು, ಹತ್ತು ಲಕ್ಷ ಕೇಳುವ ನಾಯಕಿಯರ ನಡುವೆ ಕೇವಲ ಇಪತ್ತು ಸಾವಿರ ಸಂಭಾವನೆ ಕೊಟ್ಟು ಪವಿತ್ರಾ ಗೌಡ ಅವರನ್ನು ಸಿನಿಮಾಗೆ ತೆಗೆದುಕೊಂಡೆವು" ಎಂದಿದ್ದಾರೆ.
ನಟಿ ಪವಿತ್ರಾ ಗೌಡ ಅವರಿಗೆ ನಟನೆ ಬರುತ್ತಿರಲಿಲ್ಲ ಎಂದಿರುವ ನಿರ್ದೇಶಕ ಉಮೇಶ್ ಮಾತನಾಡಿ ಪವಿತ್ರಾ ಗೌಡಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಟಿಯಾಗುವ ಯಾವ ಲಕ್ಷಣಗಳು ಇರಲಿಲ್ಲ. ಮುಖ ಮಾತ್ರ ಚೆನ್ನಾಗಿತ್ತು. ಅವರನ್ನು ತುಂಬಾ ಸಲಿ ಗದರಿದ್ದೆ. ಹೊಡಿಯೋಕೂ ಹೋಗಿದ್ದೆ. ಸಿನಿಮಾಗೆ ಅವರಿಗೆ ಕೊಟ್ಟ ಸಂಭಾವನೆ 20 ಸಾವಿರ ರೂಪಾಯಿ ಎಂದು ತಿಳಿಸಿದ್ದಾರೆ.
"ಸಿನಿಮಾ ಶುರುವಾಗಿ ಆರೇಳು ತಿಂಗಳಲ್ಲಿ ಅವರ ಬಳಿ ಕಾರು ಬಂತು. ಸಿನಿಮಾ ಯಶಸ್ಸು ಆಗಿರಲಿಲ್ಲ. ಇನ್ನು, ಸಿನಿಮಾ ರಂಗಕ್ಕೆ ಬಂದು ಎರಡು ವರ್ಷದಲ್ಲೇ ದೊಡ್ಡ ಮನೆ, ಕಾರು, ಹಣ ಆಸ್ತಿ ಎಲ್ಲವೂ ಬಂತು. ಅವರು ಆದಷ್ಟು ಬೇಗ ಎಲ್ಲರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಚಿತ್ರರಂಗದ ಎಲ್ಲರ ಪರಿಚಯ ಅವರಿಗಿತ್ತು. ಆದರೆ, ದರ್ಶನ್ ಮತ್ತು ಪವಿತ್ರಾ ಗೌಡಗೆ ಪರಿಚಯ ಇರುವುದು ನಮಗೆ ಮೊದಲು ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications