ಕನ್ನಡ ಸಿನಿಮಾ ಲೋಕಕ್ಕೆ ಹೊಸ ಉಡುಗೊರೆ ನೀಡಿದ ‘ಹೆಬ್ಬುಲಿ ಕಟ್’... Hebbuli Cut
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ನಟರು ಬಂದು ಹೋಗಿರುವುದೇ ಸಣ್ಣ ಸಣ್ಣ ಸಿನಿಮಾಗಳ ಮೂಲಕ. ಈ ರೀತಿ ಸಮಾಜದ ತಳಹದಿ ಮೇಲೆ ಪ್ರಭಾವ ಬೀರುದ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ದಿಕ್ಕು ತೋರಿಸಿದ್ದು ಉಂಟು. ಅದೇ ರೀತಿ ಹಲವು ಸಿನಿಮಾಗಳು ಆಯಾ ಕಾಲಘಟ್ಟಕ್ಕೆ ಬಂದಿದ್ದು, ಇದೀಗ ಅಂತಹದ್ದೇ ಮತ್ತೊಂದು ಸಿನಿಮಾ ಕನ್ನಡಿಗರ ಮನಸ್ಸು ಗೆಲ್ಲುತ್ತಿದೆ. ಅಲ್ಲದೆ ಕನ್ನಡ ಸಿನಿಮಾಗಳ ಲೋಕದಲ್ಲಿ ಹೊಸ ಸಂಚಲನ ಕೂಡ ಸೃಷ್ಟಿ ಮಾಡುತ್ತಾ, ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದೆ.
ಹೌದು, ಕನ್ನಡ ಸಿನಿಮಾ ಲೋಕದಲ್ಲಿ ಸಾವಿರಾರು ಸಿನಿಮಾಗಳು ಬಂದಿವೆ. ಆದರೆ ಕನ್ನಡಿಗರ ಎದೆಯಲ್ಲಿ ಉಳಿಯುವ ಸಿನಿಮಾಗಳ ಲೆಕ್ಕ ನೋಡುವುದಾದರೆ ಕೆಲವೇ ಕೆಲವು. ಅದರಲ್ಲೂ ಜಾಗತಿಕ ಮಟ್ಟದಲ್ಲೂ, ಕನ್ನಡ ಸಿನಿಮಾಗಳ ಹವಾ ಜೋರಾಗಿ ಇರುವ ಈ ಸಮಯದಲ್ಲಿ 'ಹೆಬ್ಬುಲಿ ಕಟ್' ಇನ್ನೊಂದು ರೀತಿಯ ಅಲೆ ಎಬ್ಬಿಸುವ ಮೂಲಕ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಹಾಗಾದ್ರೆ ಈ ಸಿನಿಮಾ ಮೂಲಕ ಸಮಾಜಕ್ಕೆ ಸಿಗುವ ಮೆಸೇಜ್ ಏನು? ಮುಂದೆ ಓದಿ.

'ಹೆಬ್ಬುಲಿ ಕಟ್' ಹವಾ ಜೋರು!
ನಿಮಗೆಲ್ಲಾ ಗೊತ್ತಿರುವಂತೆ 'ಹೆಬ್ಬುಲಿ' ಸಿನಿಮಾ ಕಿಚ್ಚ ಸುದೀಪ್ ಅವರ ಮುಖ್ಯ ಭೂಮಿಕೆಯಲ್ಲಿ ಮಿಂಚಿ ಸದ್ದು ಮಾಡಿದ್ದ ಚಿತ್ರ. ಇದೇ ಚಿತ್ರದ ಆಧಾರದಲ್ಲಿ 'ಹೆಬ್ಬುಲಿ ಕಟ್' ಇದೀಗ ರಿಲೀಸ್ ಆಗುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಹಾಗೇ 'ಹೆಬ್ಬುಲಿ ಕಟ್' ಸಿನಿಮಾದಲ್ಲಿ ಒಂದು ಗಂಭೀರ ಚರ್ಚೆಯ ವಿಷಯ ಕೂಡ ಇದೆ. ಜಾತಿ ಪದ್ಧತಿ, ಆಧುನಿಕ ಜಗತ್ತಿನಲ್ಲೂ ಗ್ರಾಮೀಣ ಭಾರತದ ಆ ಗಂಭೀರ ಸಮಸ್ಯೆಗಳನ್ನು ತಿಳಿಸಲಾಗಿದೆ.
ನಟ ಪುನೀತ್ ಶೆಟ್ಟಿ ಅಬ್ಬರ!
ಇಂತಹದ್ದೇ ಪ್ರಮುಖ ವಿಚಾರಗಳನ್ನು ಕೇಂದ್ರವಾಗಿ ಇಟ್ಟುಕೊಂಡು 'ಹೆಬ್ಬುಲಿ ಕಟ್' ಸಿನಿಮಾ ಬೆಳ್ಳಿತೆರೆ ಮೇಲೆ ಅಬ್ಬರಿಸುತ್ತಿದೆ. ನಿರ್ದೇಶಕ ಭೀಮರಾವ್ ಅವರು ತುಂಬ ಲವಲವಿಕೆಯಿಂದಲೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು, ಸಿನಿಮಾ ಪಾತ್ರಗಳು ಕೂಡ ಸಾಕಷ್ಟು ಗಮನ ಸೆಳೆಯುತ್ತಿವೆ. ಉತ್ತರ ಕರ್ನಾಟಕ ಗ್ರಾಮೀಣ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಹೈಸ್ಕೂಲ್ ಓದುತ್ತಿರುವ ಬಾಲಕನೊಬ್ಬನಿಗೆ ತನ್ನ ಹೇರ್ ಸ್ಟೈಲ್ ಬಗ್ಗೆ ಅಪಾರ ಪ್ರೀತಿ ಇರುತ್ತೆ.
ಅಲ್ಲಿಂದ ಏನೆಲ್ಲ ತಿರುವು ಪಡೆಯುತ್ತೆ? ಈ 'ಹೆಬ್ಬುಲಿ ಕಟ್' ಸಿನಿಮಾದಲ್ಲಿ ನಟ ಸುದೀಪ್ ಹೇರ್ ಸ್ಟೈಲ್ ಹೇಗೆ ಫಾಲೋ ಮಾಡುತ್ತಾನೆ ಶಾಲಾ ಬಾಲಕ? ಅನ್ನೋದು ಈ ಕಥೆಯ ಜೀವಾಳ ಆಗಿದ್ದರೂ ಆಧುನಿಕ ಸಮಾಜದ ಅಂಕುಡೊಂಕಗಳನ್ನ ಕೂಡ ತೋರಿಸಲಾಗಿದೆ. ಇದರ ಜೊತೆಗೆ ಪುನೀತ್ ಶೆಟ್ಟಿ ಎಂಬ ನಟನ ಖದರ್ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗಿದೆ.
ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಮೌನೇಶ್ ಜೊತೆಗೆ ನಿರ್ದೇಶಕ ಭೀಮರಾವ್ ಅವರು ಸಾಕಷ್ಟು ಪ್ರಯೋಗ ಮಾಡಿದ್ದು, ಮತ್ತೊಂದು ಕಡೆ ಗ್ಯಾರೇಜ್ ಮಾಲೀಕನ ಪಾತ್ರ ನಿಭಾಯಿಸುವ ರಫೀಕ್ ಪಾತ್ರ ಎಲ್ಲರ ಗಮನ ಸೆಳೆದಿದೆ. ನಟ ಪುನೀತ್ ಶೆಟ್ಟಿ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಾಗೇ ಕನ್ನಡಿಗರು ಬಹಳ ದಿನಗಳ ನಂತರ ಒಂದು ಅದ್ಭುತ ಸಿನಿಮಾದ ದರ್ಶನ ಮಾಡಿಕೊಂಡಿದ್ದಾರೆ. ನಿರ್ದೇಶಕ ಭೀಮರಾವ್ ಅವರ ಪ್ರಯತ್ನಕ್ಕೆ ದೊಡ್ಡ ಗೆಲುವು ಈ ಮೂಲಕ ಸಿಕ್ಕಂತೆ ಆಗಿದೆ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ











Click it and Unblock the Notifications