Darshan Thoogudeepa: ರಚಿತಾ ರಾಮ್ಗೆ ತುಂಬಾ ಥ್ಯಾಂಕ್ಸ್ ಹೇಳಿದ ಡಿ-ಬಾಸ್ ದರ್ಶನ್ ರಕ್ಷಿತಾ, ಧನ್ವೀರ್ಗೂ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತುಂಬಾ ನೋವಿನಲ್ಲಿ ಇದ್ದು, ಅಭಿಮಾನಿಗಳಿಗು ಕೂಡ ತಮ್ಮ ನೋವಿನ ವಿಚಾರ ತಿಳಿಸಿದ್ದಾರೆ. ಅಲ್ಲದೆ ಸಂಕಷ್ಟದ ಸಮಯದಲ್ಲಿ ತಮ್ಮ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಈ ಸಮಯದಲ್ಲೇ, ರಚಿತಾ ರಾಮ್ಗೆ ತುಂಬಾ ಥ್ಯಾಂಕ್ಸ್ ಹೇಳಿದ ಡಿ-ಬಾಸ್ ದರ್ಶನ್ ರಕ್ಷಿತಾ, ಧನ್ವೀರ್ಗೂ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿ ಕೋಟ್ಯಂತರ ಫ್ಯಾನ್ಸ್ ಬಾಯಿಂದ ಡಿ-ಬಾಸ್ ಎಂಬ ಬಿರುದು ಪಡೆದಿದ್ದ ದರ್ಶನ್ ತೂಗುದೀಪ್ ಅವರು ಇದೀಗ ಹೊಸ ಜೀವನದ ಕಡೆಗೆ ಮುಖ ಮಾಡಿದ್ದಾರೆ. ಹಳೆಯ ನೋವನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳಲು ಇದೀಗ ಅವರು ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಎಂಬ ದೊಡ್ಡ ನೋವನ್ನು ಈಗ ಮರೆತು, ತಮ್ಮ ಅಭಿಮಾನಿಗಳ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹೀಗಿದ್ದಾಗಲೇ, ರಚಿತಾ ರಾಮ್ಗೆ ತುಂಬಾ ಥ್ಯಾಂಕ್ಸ್ ಹೇಳಿದ ಡಿ-ಬಾಸ್ ದರ್ಶನ್ ರಕ್ಷಿತಾ, ಧನ್ವೀರ್ಗೂ...

ರಚಿತಾ ರಾಮ್ಗೆ ತುಂಬಾ ಥ್ಯಾಂಕ್ಸ್...
ಹೌದು, ವಿಶೇಷ ವಿಡಿಯೋ ಮಾಡಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ತಮ್ಮ ಅಭಿಮಾನಿಗಳ ಜೊತೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಕಷ್ಟದ ಜೊತೆಗೆ ಸಾಥ್ ನೀಡಿದ್ದ ರಚಿತಾ ರಾಮ್ಗೆ ತುಂಬಾ ಥ್ಯಾಂಕ್ಸ್ ಹೇಳಿದ್ದು, ರಕ್ಷಿತಾ ಅವರನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಧನ್ವೀರ್ ಗೌಡ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ ಡಿ-ಬಾಸ್ ದರ್ಶನ್ ಅವರು.
ಮೂವರ ಸಹಾಯ ನೆನೆದ ಡಿ-ಬಾಸ್
ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋದ ಸಮಯದಲ್ಲಿ ಕೂಡ ಅವರ ಬಗ್ಗೆ ರಚಿತಾ ರಾಮ್ ಅವರು ಮುಕ್ತವಾಗಿ & ಹೆಮ್ಮೆಯಿಂದ ಮಾತನಾಡಿದ್ದರು. ಹಾಗೇ ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿ ಡಿ-ಬಾಸ್ ದರ್ಶನ್ ಅವರ ಪರ ನಿಂತಿದ್ದರು, ಧನ್ವೀರ್ ಅವರು ದರ್ಶನ್ ಅವರಿಗೆ ಸ್ವಂತ ತಮ್ಮನ ರೀತಿ ನಿಂತು ಕಷ್ಟದ ಸಮಯದಲ್ಲಿ ಹೋರಾಡಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಮೂವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ವಿಡಿಯೋ ಮೂಲಕ ತಮ್ಮ ನೆಚ್ಚಿನ ನಟ ಮಾತನಾಡಿರುವುದು ನೋಡಿ ಖುಷಿಯಾಗಿದ್ದಾರೆ. ಹಾಗೇ, ಮತ್ತಷ್ಟು ಬೆಂಬಲ ನೀಡುತ್ತಿದ್ದಾರೆ ಕೂಡ. ಆದಷ್ಟು ಬೇಗ ಮುಂದಿನ ಸಿನಿಮಾ ಬರಲಿ ನಾವೇ ನಿಂತು ಆ ಚಿತ್ರ ಗೆಲ್ಲುವಂತೆ ಮಾಡುತ್ತೇವೆ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications