1,25,000 ಮತಗಳ ಅಂತರದಿಂದ ಗೆದ್ದಿದ್ದ ಸುಮಲತಾ ಅಂಬರೀಶ್ ವಿರುದ್ಧ ಡಿ-ಬಾಸ್ ಮುನಿಸು... Darshan Thoogudeepa
ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದ ದೊಡ್ಡ ಸ್ಟಾರ್. ಆದರೆ, ಇದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿ ಸ್ಟಾರ್ ಆಗುವ ಮೊದಲು ಸಹಾಯ ಮಾಡಿದ್ದೇ ರೆಬೆಲ್ ಸ್ಟಾರ್ ಅಂಬರೀಶ್ ಅವರು. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಕಷ್ಟಪಟ್ಟು ಮೇಲೆ ಬಂದ ದಿನಗಳಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹವನ್ನ ನೀಡಿದ್ದರು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಹೀಗಿದ್ದಾಗಲೇ, 1,25,000 ಮತಗಳ ಅಂತರದಿಂದ ಗೆದ್ದಿದ್ದ ಸುಮಲತಾ ಅಂಬರೀಶ್ ವಿರುದ್ಧ ಡಿ-ಬಾಸ್ ಮುನಿಸು...
ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ರಂಗದಲ್ಲಿ 100 ಕೋಟಿ ರೂಪಾಯಿ & 200 ಕೋಟಿ ರೂಪಾಯಿ ಹಣ ಮಾಡಿದ ಸಿನಿಮಾಗಳನ್ನ ನೀಡಿದ್ದಾರೆ, ಅಂತಾ ಅವರ ಅಭಿಮಾನಿ ಬಳಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೀಗಿದ್ದಾಗ ಸುಮಲತಾ ಅಂಬರೀಶ್ ಅವರ ಜೊತೆ ಚನ್ನಾಗಿಯೇ ಇದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಕೋಪಗೊಂಡು ಆಕ್ರೋಶ ಹೊರ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಯಿ & ಮಗನ ರೀತಿ ಇದ್ದ ದರ್ಶನ್ ತೂಗುದೀಪ್ & ಸುಮಲತಾ ಅಂಬರೀಶ್ ಅವರ ನಡುವೆ ದ್ವೇಷದ ಬೆಂಕಿ...

ಡಿ-ಬಾಸ್ ದರ್ಶನ್ ತೂಗುದೀಪ್...
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೊಗಿದ್ದ ಸಮಯದಲ್ಲಿ ಸಾಕಷ್ಟು ಜನ ದೂರ ಆದರು. ಇದೇ ವಿಚಾರವಾಗಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಕೋಪಗೊಂಡಿದ್ದಾರೆ ಎಂಬ ಮಾತು ಹರಿದಾಡಿತ್ತು. ಇನ್ನೊಂದು ಕಡೆ ದರ್ಶನ್ ತೂಗುದೀಪ್ ಅವರಿಂದ ಸಹಾಯ ಪಡೆದಿದ್ದ ನಟ & ನಟಿಯರೇ ಮೋಸವನ್ನ ಮಾಡಿದ್ದಾರೆ ಅಂತಾ ಅವರ ಅಭಿಮಾನಿಗಳು ಆರೋಪವನ್ನ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, 1,25,000 ಮತಗಳ ಅಂತರದಿಂದ ಗೆದ್ದಿದ್ದ ಸುಮಲತಾ ಅಂಬರೀಶ್ ವಿರುದ್ಧ ಡಿ-ಬಾಸ್ ಮುನಿಸು...
ಸುಮಲತಾ ಅಂಬರೀಶ್ ವಿರುದ್ಧ ಡಿ-ಬಾಸ್ ಕೋಪ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಕನ್ನಡ ಸಿನಿಮಾ ಈಗ ಹಾಲಿವುಡ್ ಲೆವೆಲ್ ಮೀರಿಸಲು ಸಜ್ಜಾಗಿದೆ ಅಂತಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ಸುಮಲತಾ ಅಂಬರೀಶ್ ಅವರ ವಿರುದ್ಧದ ಕೋಪವನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತಷ್ಟು ಹೆಚ್ಚು ಮಾಡಿಕೊಂಡ್ರಾ?
ಅಂದಹಾಗೆ ಕೆಲವು ವರ್ಷಗಳ ಹಿಂದೆ ಸುಮಲತಾ ಅಂಬರೀಶ್ ಅವರ ಗೆಲುವಿಗೆ ದುಡಿದಿದ್ದ ಸಚ್ಚಿದಾನಂದ ಅಂದ್ರೆ ಇಂಡುವಾಳು ಎಸ್. ಸಚ್ಚಿದಾನಂದ್ ಅವರ ಹುಟ್ಟುಹಬ್ಬವನ್ನ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರಲ್ಲಿ ಏನು ಸ್ಪೆಷಲ್ ಅಂದ್ರಾ? ಅಸಲಿ ವಿಚಾರ ಇರೋದೆ ಇಲ್ಲಿ, ಸಚ್ಚಿದಾನಂದ ಅಂದ್ರೆ ಇಂಡುವಾಳು ಎಸ್. ಸಚ್ಚಿದಾನಂದ್ ಅವರು ಮಂಡ್ಯದ ಗಂಡು ರೆಬೆಲ್ ಸ್ಟಾರ್ ನಟ ಅಂಬರೀಶ್ ಅವರ ಕುಟುಂಬಕ್ಕೆ ಆಪ್ತರು. ಹೀಗಿದ್ದಾಗ 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆಲುವು ಕಾಣಲು ಸಾಕಷ್ಟು ದುಡಿದಿದ್ದರು ಸಚ್ಚಿದಾನಂದ್ ಎಂಬ ಮಾತು ಕೇಳಿಬಂದಿತ್ತು. ಆದರೆ ಕೆಲ ವರ್ಷಗಳ ಹಿಂದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಇಂಡುವಾಳು ಎಸ್. ಸಚ್ಚಿದಾನಂದ್ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರಂತೆ!
2019ರ ಲೋಕಸಭಾ ಚುನಾವಣೆ ವೇಳೆ....
2019ರ ಲೋಕಸಭಾ ಚುನಾವಣೆ ವೇಳೆ, ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡಿದ್ದ ಇಂಡುವಾಳು ಎಸ್. ಸಚ್ಚಿದಾನಂದ್ ಗೆಲುವಿಗಾಗಿ ಶ್ರಮಿಸಿದ್ದರಂತೆ. ಆದರೆ ಇದೇ ಇಂಡುವಾಳು ಎಸ್. ಸಚ್ಚಿದಾನಂದ್ ಅವರಿಗೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸಹಾಯ ಮಾಡಿಲ್ಲ ಎಂಬ ಕೋಪ ಇತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ ಕಳೆದ ವಿಧಾನಸಭಾ ಚುನಾವಣೆ ನಂತರ ಸುಮಲತಾ ಅಂಬರೀಶ್ ಅವರ ತಂಡದಿಂದ ಅಂತರ ಕಾಯ್ದುಕೊಂಡಿದ್ದರು ಎಸ್. ಸಚ್ಚಿದಾನಂದ್. ಹೀಗೆಲ್ಲ ಸುಮಲತಾ ಅಂಬರೀಶ್ ಅವರ ತಂಡದಿಂದ ದೂರ ಆಗಿರುವ ಎಸ್. ಸಚ್ಚಿದಾನಂದ್ ಅವರ ಹುಟ್ಟುಹಬ್ಬವನ್ನೇ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಭರ್ಜರಿಯಾಗಿ ಆಚರಣೆ ಮಾಡಿರುವುದು ಗಮನ ಸೆಳೆದಿದೆ.
ಒಂದು ಕಡೆ ಮದರ್ ಇಂಡಿಯಾ ಅಂತಾ ಸುಮಲತಾ ಅಂಬರೀಶ್ ಅವರನ್ನು ಅಮ್ಮಾ... ಅಮ್ಮಾ... ಅಂತಾ ಕರೆಯುತ್ತಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಕೋಪ ಮಾಡಿಕೊಂಡಿದ್ದಾರಾ? ಹೀಗಾಗಿಯೇ ಇದೀಗ ಸುಮಲತಾ ಅಂಬರೀಶ್ ಅವರ ವಿರುದ್ಧ ಕೋಪ ಮಾಡಿಕೊಂಡಿದ್ದ ಸಚ್ಚಿ ಅವರ ಬರ್ತ್ ಡೇ ಭರ್ಜರಿಯಾಗಿ ಸಿನಿಮಾ ಸೆಟ್ನಲ್ಲೇ ಆಚರಣೆ ಮಾಡಿದ್ರಾ? ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.












Click it and Unblock the Notifications