‘ಪ್ರೇಮ ಬಾಣ ಹೂಡು ಜಾಣ’ ಎಂದ ಕಾಫಿನಾಡು ಚಂದು: ‘ಎಲ್ಲಿದ್ಯಾಪ್ಪ ಕಾಡು..’ ಅಂತಾ ಪ್ರಶ್ನೆ ಕೇಳಿದ್ರು ಜನ!
'ಬರ್ತ್ ಡೇ ಸಿಂಗರ್' ಅಂತಾ ಕರ್ನಾಟಕ ತುಂಬಾ ಖ್ಯಾತಿ ಪಡೆದಿರುವ ಕಾಫಿನಾಡು ಚಂದು ಇದೀಗ ಫುಲ್ ಟೈಂ ಡಾನ್ಸ್ ಮಾಡ್ಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಅದ್ರಲ್ಲೂ ಚಂದು ಹಾಕುವ ಸ್ಟೆಪ್ ಬಗ್ಗೆ ಕೆಲವರು 'ತಿಕ್ಕಲು ತಿಕ್ಕಲು' ಅಂತಾ ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಕಾಫಿನಾಡು ಚಂದು ಪರವಾಗಿ ನಿಲ್ಲುತ್ತಾರೆ. ಅದೇ ರೀತಿ ಇದೀಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಕಾಫಿನಾಡು ಚಂದು ಮಾಡಿದ ಡಾನ್ಸ್ ಬಗ್ಗೆ ಚರ್ಚೆ ಜೋರಾಗಿದೆ!
ಕಾಫಿನಾಡು ಚಂದು ಅವರೆ ಹೇಳುವಂತೆ ಅವರು ಸುಮಾರು 40 ಲಕ್ಷ ಹಾಡುಗಳನ್ನ ಹಾಡಿದ್ದಾರೆ ಅಂತೆ. ಆದ್ರೆ ಇದು ಬರೀ ಓಳು, ಸುಳ್ಳು ಅಂತಾ ಆರೋಪ ಮಾಡುವ ಜನರ ಮಧ್ಯೆ, ಚಂದುಗೆ ಡಾನ್ಸ್ ಮಾಡುವ ಅಭ್ಯಾಸ ಕೂಡ ರೂಢಿಯಾಗಿದೆ. ಅದೇ ರೀತಿ ಈಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಯುವತಿ ಒಬ್ಬರ ಜೊತೆ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಹಾಗೇ ಚಂದು ಡಾನ್ಸ್ ಬಗ್ಗೆ ಇದೀಗ ಡಿಸೈನ್ ಡಿಸೈನ್ ಕಮೆಂಟ್ಗಳು ಬರುತ್ತಿವೆ. ಜೊತೆಗೆ ಈ ಕುರಿತು ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಕಾಫಿನಾಡು ಚಂದು ಡಾನ್ಸ್ ಮಾಡಿರುವ ವಿಡಿಯೋ ನೋಡಲು ಮುಂದಕ್ಕೆ ಓದಿ.

ಶಿವಣ್ಣ ಸಿನಿಮಾ ಹಾಡಿಗೆ ಚಂದು ಡಾನ್ಸ್!
2003ರಲ್ಲಿ ರಿಲೀಸ್ ಆಗಿದ್ದ ಡಾ. ಶಿವರಾಜ್ಕುಮಾರ್ ಅಭಿನಯದ 'ಶ್ರೀರಾಮ್' ಸಿನಿಮಾದ ಹಾಡು 'ಪ್ರೇಮ ಬಾಣ ಹೂಡು ಜಾಣ' ಫುಲ್ ಫೇಮಸ್. ಅದರಲ್ಲೂ ಈ ಹಾಡನ್ನ ಕನ್ನಡ ನಾಡಿನ ಜನರು ತುಂಬಾ ಮೆಚ್ಚಿಕೊಂಡಿದ್ದರು. ಈಗಲೂ ಈ ಹಾಡು ಅಂದ್ರೆ ಜನರಿಗೆ ಸಖತ್ ಇಷ್ಟವಾಗುತ್ತಿದೆ. ಇದೀಗ ಇದೇ ಹಾಡಿಗೆ ಕಾಫಿನಾಡು ಚಂದು ಡಾನ್ಸ್ ಮಾಡಿದ್ದು, ವೆರೈಟಿ ವೆರೈಟಿ ಕಮೆಂಟ್ಸ್ ಬರುತ್ತಿವೆ.
ಫುಲ್ ಫೇಮಸ್ ಕಾಫಿನಾಡು ಚಂದು!
ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಡು ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಕಾಫಿನಾಡು ಚಂದು ಕೆಟ್ಟದಾಗಿ ಹಾಡುತ್ತಾರೆ ಆತನಿಗೆ ಹಾಡೋದಕ್ಕೆ ಬರೋದಿಲ್ಲ ಅಂತಾ ಕೆಲವರು ಹೇಳಿದರೆ. ಇನ್ನೂ ಹಲವು ಜನ ಚಂದು ಅವರ ಹಾಡು ಕೇಳಿ, ಭೇಷ್ ಭೇಷ್ ಅಂತಿದ್ದರು. ಹೀಗೆ ಕಾಫಿನಾಡು ಚಂದು ಎರಡೂ ಬಣಗಳಿಗೆ ಬೇಕಾದ ಹಾಡುಗಾರ ಆಗಿ ಬೆಳೆದು, ಸದ್ದು ಮಾಡಿದ್ದು ಉಂಟು. ಆದರೆ ಕೆಲ ತಿಂಗಳು ಮರೆಯಾಗಿದ್ದ ಈ ಸೋಷಿಯಲ್ ಮೀಡಿಯಾ ಸ್ಟಾರ್ಗೆ, ಈಗ ಹಾಡು ಹಾಡುವ ಹುಚ್ಚು ಇಲ್ಲ. ಬದಲಾಗಿ ಸಿಕ್ಕಾಪಟ್ಟೆ ಡಾನ್ಸ್ ಮಾಡುತ್ತಿದ್ದಾರೆ ಕಾಫಿನಾಡು ಚಂದು.
ಬೇರೆ ಬೇರೆ ಹಾಡಿಗೂ ಡಾನ್ಸ್!
ಕಾಫಿನಾಡು ಚಂದು ಈಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಡಾನ್ಸ್ ಮಾಡಿದ ರೀತಿಯೇ, ಕನ್ನಡದ ಅನೇಕ ಹಾಡು & ಸಂಗೀತಕ್ಕೆ ಕುಣಿದಿದ್ದಾರೆ ಚಂದು. ಇತ್ತೀಚೆಗಷ್ಟೆ ಕರಿಮಣಿ ಮಾಲೀಕ ಹಾಡಿಗೂ ಹೀಗೆ ಚಂದು ಡಾನ್ಸ್ ಮಾಡಿದ್ದು ವೈರಲ್ ಆಗಿತ್ತು. ಜನರು ಕೂಡ, ವೆರೈಟಿ ವೆರೈಟಿ ಕಮೆಂಟ್ನ ಮಾಡುತ್ತಾ, ಕಾಫಿನಾಡು ಚಂದು ವಿರುದ್ಧ ಗರಂ ಆಗಿದ್ದರು. ಇದರ ಜೊತೆಯಲ್ಲಿ ದಿಢೀರ್ ಹುಲಿ ಕುಣಿತ ಹಾಕಿ ಚರ್ಚೆಗೆ ಗ್ರಾಸವಾಗಿದ್ದರು. ಈಗ ನೋಡಿದ್ರೆ ಮತ್ತೊಂದು ಡಾನ್ಸ್ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ












Click it and Unblock the Notifications