ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಎಂಗೆಜ್ಮೆಂಟ್ ರಿಂಗ್ ಸದ್ದು.. ಭಾರೀ ವೈರಲ್
ಬಿಗ್ ಬಾಸ್ ಕನ್ನಡ 11 ಸೀಸನ್ ಮನೆಗೆ ಕಾಲಿಟ್ಟ ಚೈತ್ರಾ ಕುಂದಾಪುರ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದರು. ಮೊದಲಿಗೆ ಅವರಪ್ಪನಿಗೆ ಹುಟ್ಟಿದ್ರೆ ಎಂದು ಹೇಳಿಕೆ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ತಮಗೆ ತಾವೇ ಪೂಜೆ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ಎಂಗೆಜ್ಮೆಂಟ್ ರಿಂಗ್ ವಿಚಾರ ಭಾರೀ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಜೋಡಿ ಟಾಸ್ಕ್ ನೀಡಲಾಗಿದೆ. ಈ ಜೋಡಿಗಳು ಬೆಲ್ಟ್ ಕಟ್ಟಿಕೊಂಡೇ ಜೊತೆಗೆ ಆಟದಲ್ಲಿ ಸ್ಪರ್ಧಿಸಿ ಪಾಯಿಂಟ್ಸ್ಗಳನ್ನು ಪಡೆಯಬೇಕಾಗುತ್ತದೆ. ಹೆಚ್ಚು ಪಾಯಿಂಟ್ಸ್ಗಳನ್ನು ಪಡೆದ ತಂಡ ನಾಮಿನೇಷನ್ ಪ್ರಕ್ರಿಯೆಯಿಂದ ಹೊರಬರುತ್ತದೆ.

ಅದರಂತೆಯೇ ಬಿಗ್ ಬಾಸ್ ಕೆಸರಿನಲ್ಲಿ ಆಡುವ ಆಟವನ್ನು ನೀಡಿದ್ದರು. ಈ ವೇಳೆ ಶಿಶಿರ್ ಜೋಡಿಯಾದ ಚೈತ್ರಾ ಕುಂದಾಪುರ ಅವರು ಕೆಸರಿನಲ್ಲಿ ಆಡುವ ಭರದಲ್ಲಿ ಉಂಗುರವನ್ನು ಕಳೆದುಕೊಂಡಿದ್ದರು. ಬಳಿಕ ಚೈತ್ರಾ ಒಂದು ಕ್ಷಣ ಗಾಬರಿಗೊಂಡು ಮೌನವಾಗಿಬಿಟ್ಟರು. ಅಲ್ಲದೆ, ಕ್ಯಾಮೆರಾ ಮುಂದೆ ಹೋಗಿ ಇದು ನನ್ನ ಎಂಗೇಜ್ಮೆಂಟ್ ರಿಂಗ್ ಬಿಗ್ ಬಾಸ್, ಹುಡುಕಿಕೊಡಿ ಎಂದು ಚೈತ್ರಾ ಮನವಿ ಮಾಡಿದ್ದರು.
ಬಳಿಕ, ಬಿಗ್ ಬಾಸ್ ಉಂಗುರ ಕಳುಹಿಸಿಕೊಟ್ಟಿದ್ದು, ಇದನ್ನು ಕಂಡ ಚೈತ್ರಾ ಕುಂದಾಪುರ ಅವರು ಸಂತೋಷದಿಂದ ಕುಣಿದು ಕುಪ್ಪಳಿಸದರು. ಅಲ್ಲದೆ, ಬಿಗ್ ಬಾಸ್ ಮತ್ತು ಕೊರಗಜ್ಜನಿಗೆ ಧನ್ಯವಾದ ಹೇಳಿದರು. ಉಂಗುರು ಕಳೆದಾಗ ಅವರು ಕೊರಗಜ್ಜನಿಗೆ ಪ್ರಾರ್ಥನೆಯನ್ನೂ ಮಾಡಿಕೊಂಡಿದ್ದರು. ಅದರಂತೆಯೇ ಇದೀಗ ಉಂಗುರ ಮತ್ತೆ ಕೈಸೇರಿದೆ.
ಮತ್ತೊಂದೆಡೆ ಶಿಶಿರ್ ಜೊತೆ ಆಡುತ್ತೇನೆ ಎಂದು ಹೇಳಿದ್ದ ಚೈತ್ರಾ ಕುಂದಾಪುರ್ ಅವರು ಪ್ಲೇಟ್ ಬದಲಾಯಿಸಿ ಬಳಿಕ ತ್ರಿವಿಕ್ರಮ್ ಜೊತೆ ಆಡುವುದಾಗಿ ಹೇಳಿದ್ದರು. ಇದರಿಂದ ಕೋಪಗೊಂಡ ಶಿಶಿರ್ ಇದಪ್ಪಾ ನಿಯತ್ತ ಅಂದ್ರೆ ಎಂದು ಹೇಳುವ ಮೂಲಕ ಚೈತ್ರಾ ಕುಂದಾಪುರ್ ಅವರಿಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ಹೇಳುತ್ತಾರೆ.
ತ್ರಿವಿಕ್ರಮ್ ಕೊನೆಗೆ ತನ್ನ ಪಾರ್ಟನರ್ ಆಯ್ಕೆಗೆ ಬಿಟ್ಟಾಗ ಅವರು ಆಯ್ಕೆ ಮಾಡಿಕೊಂಡಿದ್ದು ಭವ್ಯ ಗೌಡನನ್ನ. ಬಳಿಕ ಕೋಪಗೊಂಡ ತ್ರಿಶಿರ್ ಚೈತ್ರಾ ಕುಂದಾಪುರಗೆ ಮೋಸದ ಹಣೆಪಟ್ಟಿಯನ್ನು ಕಟ್ಟುವುದಲ್ಲದೆ, ನಂಬಿಕೆಗೆ ನೀವು ಅರ್ಹರಲ್ಲ. ಕೊನೆಯವರೆಗೂ ಜೊತೆಯಲ್ಲೇ ಆಡುತ್ತೇನೆ ಎಂದು ಕೈಕೊಟ್ಟುಬಿಟ್ರಲ್ಲ. ನಂಬಿದ್ದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡೆದುಕೊಳ್ಳಬೇಕು ಎಂದು ಹೇಳಿದರು.
ಬಳಿಕ ಚೈತ್ರಾ ಜೊತೆಗಿದ್ದ ಜೋಡಿ ಬೆಲ್ಟ್ನಿಂದ ಹೊರಬರುತ್ತಾರೆ. ಆಗ ಐಶ್ವರ್ಯ ಅವರು ಇದು ಆಟ, ಹಾಗೆಲ್ಲ ಮಾಡಬೇಡಿ ಎಂದು ಮನವೊಲಿಸಿದರೂ ಕೂಡ ಶಿಶಿರ್ ಮಾತ್ರ ಆಗಿದ್ದಾಗಲಿ, ನಾನು ಅವರ ಜೊತೆ ಆಡಲು ಇಷ್ಟ ಪಡುಚುದಿಲ್ಲ ಎಂದು ಚೈತ್ರಾ ಕುಂದಾಪುರ್ ವಿರುದ್ಧ ಕೆಂಡಕಾರುತ್ತಾರೆ ಎದ್ದು ಹೋಗುತ್ತಾರೆ.
ಚೈತ್ರ ಕುಂದಾಪುರ ಆಕ್ರೋಶ: ಇತ್ತೀಚೆಗಷ್ಟೇ ಗೋಲ್ಡ್ ಸುರೇಶ್ ಅವರು ಹಂಸ ಅವರ ಲವ್ ಸ್ಟೋರಿ ನಡೆಯುತ್ತಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಹಂಸ ಚೈತ್ರಾ ಕುಂದಾಪುರ್ ಬಳಿ ಹೇಳಿಕೊಂಡು ಸಾಕಷ್ಟು ಬೇಸರಗೊಂಡಿದ್ದರು. ಬಳಿಕ ಚೈತ್ರಾ ಅವರು ಪ್ರತಿಕ್ರಿಯಿಸಿ, ಹೀಗೆ "ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತನಾಡಿದರೆ, ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನನಗೆ ಈಗಾಗಲೇ ಮದುವೆ ಫಿಕ್ಸ್ ಆಗಿದೆ. ನನ್ನ ಸುದ್ದಿಗೆ ಯಾರು ಬರಬೇಡಿ," ಅಂತಲೂ ಹೇಳಿದ್ದರು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications