Hanumantha: ಮಾದರಿ ಗಾಯಕ- ಬಿಗ್ಬಾಸ್ ವಿನ್ನರ್ ಹನುಮಂತ ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ?
ಬಿಗ್ಬಾಸ್ ಹನುಮಂತ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿ ಇದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿರುವ ಹನುಮಂತ ಬಗ್ಗೆ ಕೆಲವೊಂದಿಷ್ಟು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ಹನುಮಂತನ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಹನುಮಂತನ ವಿಧ್ಯಾಭ್ಯಾಸ ಎಷ್ಟು? ಎಲ್ಲಿಯವರೆಗೆ ಓದಿದ್ದಾರೆ? ಎಸ್ಎಸ್ಎಲ್ಸಿಯಲ್ಲಿ ಹನುಮಂತ ತೆಗೆದುಕೊಂಡ ಮಾರ್ಕ್ಸ್ ಎಷ್ಟು?
ಹನುಮಂತ ಸಿಕ್ಕಾಪಟ್ಟೆ ಕಷ್ಟಪಟ್ಟು ಮೇಲೆ ಬಂದ ಪ್ರತಿಭಾವಂತ ವ್ಯಕ್ತಿ. ಇವರು ತುಂಬಾ ಚೆನ್ನಾಗಿ ಹಾಡು ಹಾಡುವುದು ಮಾತ್ರವಲ್ಲ ತುಂಬಾ ಚೆನ್ನಾಗಿ ಓದಿದ್ದಾರೆ. ಇದೇ ಕಾರಣಕ್ಕೆ ಹನುಮಂತನನ್ನು ಶಾಲಾ ಶಿಕ್ಷಕರು ಕೂಡ ಕೊಂಡಾಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆ ಮಾತು ಹನುಮಂತನಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.

ಹಾಡಿನಲ್ಲಿ ಮಾತ್ರವಲ್ಲ ಓದಿನಲ್ಲೂ ಹನುಮಂತ ಫಸ್ಟ್
ಹೌದು.. ಹನುಮಂತ ಹಾಡುವುದರಲ್ಲಿ ಮಾತ್ರ ಅಲ್ಲ ಓದುವುದರಲ್ಲೂ ಮೇಲುಗೈ ಸಾಧಿಸಿದ್ದಾರೆ. ಹನುಮಂತ ಉನ್ನತ ಮಟ್ಟದ ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗಿಲ್ಲ. ಆದರೂ ಕೂಡ ಓದಿದಷ್ಟು ಉತ್ತಮ ವಿದ್ಯಾರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ. ಹನುಮಂತ ಹಾಡಿನಲ್ಲಿ ಮಾತ್ರವಲ್ಲ ಶಾಲೆಯಲ್ಲೂ ತುಂಬಾ ಚೆನ್ನಾಗಿ ಓದಿ ಸೈ ಎನಿಸಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯ ವಿನ್ನರ್ ಹನುಮಂತನ ಹಾಡು ಹಾಗೂ ಮುಗ್ಧತೆ ಜನರ ಮನದಿಂದ ಮಾಸಿಲ್ಲ. ಹನುಮಂತ ಅವರಿಗೆ ಎಲ್ಲರೂ ಹತ್ತಿರವಾಗುತ್ತಿದ್ದದ್ದು ಅವರ ಮುಗ್ಧತೆಯಿಂದಾಗಿ. ಸರಾಗವಾಗಿ ಹಾಡು ಹಾಡುವ ಹನುಮಂತ ಮಾತನಾಡುವಾಗ ಕೆಲವೊಂದು ಇಂಗ್ಲೀಷ್ ಪದಗಳನ್ನು ಬಳಕೆ ಮಾಡಲು ತೊಳಲಾಡಿಬಿಡುತ್ತಾರೆ. ಹಾಗಂತ ಅವರಿಗೆ ಜ್ಞಾನದ ಕೊರತೆ ಇದೆ ಎಂದಲ್ಲ. ಹೀಗಂದುಕೊಂಡರೆ ಅಂಥವರ ತಿಳುವಳಿಕೆ ತಪ್ಪು. ಯಾಕೆಂದರೆ ಹನುಮಂತ ತುಂಬಾ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಹನುಮಂತ ಪಡೆದ ಅಂಕ ಎಷ್ಟು?
ಹನುಮಂತ ಎಸ್ಎಸ್ಎಲ್ಸಿಯನ್ನು ಮುಗಿಸಿದ್ದಾರೆ. ಅವರು ಎಸ್ಎಸ್ಎಲ್ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್ ಕಾರ್ಡ್ ಈಗ ಎಲ್ಲಾ ಕಡೆಗಳಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸೀದಾ ಸಾದ ಹಳ್ಳಿಯ ಹುಡುಗ ಹನುಮಂತ ಕಲಿಕೆಯಲ್ಲಿಯೂ ಕೂಡ ಎತ್ತಿದ ಕೈ ಎನ್ನುವುದು ಅವರ ಮಾರ್ಕ್ಸ್ ಕಾರ್ಡ್ನಿಂದ ಗೊತ್ತಾಗಿದೆ. ಹಾಗಾದರೆ ಹನುಮಂತ ಓದಿದ್ದು ಎಲ್ಲಿ? ಪಡೆದ ಅಂಕ ಎಷ್ಟು?
ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರಂತೆ. ಬಾಹ್ಯ ವಿದ್ಯಾರ್ಥಿಯಾಗಿ 2020-21ರ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿದ್ದಾರೆ ಹನುಮಂತ. ಈತನ ಓದು, ಕಲಿಕೆ ಹಾಗೂ ಗುಣದ ಬಗ್ಗೆ ಶಾಲಾ ಶಿಕ್ಷಕರು ಕೊಂಡಾಡಿದ್ದಾರೆ. ಹನುಮಂತನ ಬಗ್ಗೆ ಶಿಕ್ಷಕರಿಗೂ ಹೆಮ್ಮೆ ಇದೆ. ಇದೀಗ ಹನುಮಂತ ಎಸ್ಎಸ್ಎಲ್ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್ ನೋಡಿ ಎಲ್ಲರೂ ಕೂಡ ಹುಬ್ಬೇರಿಸುತ್ತಿದ್ದಾರೆ.
-
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
ಇರಾನ್ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸಿದ HE ಪದ: ಇದು ಉದ್ದೇಶಪೂರ್ವಕವೇ? ಮಂಜುನಾಥ ಕೊಳ್ಳೇಗಾಲ ವಿಶ್ಲೇಷಣೆ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ












Click it and Unblock the Notifications