Bigg Boss: ಅದೇ ಜಾಗದಲ್ಲಿ ಜಿಪ್..ಬಟನ್..ಬಾಳೆಎಲೆ: ಬಿಗ್ಬಾಸ್ ಕಾಸ್ಟ್ಯೂಮ್ ಬಗ್ಗೆ ಸುದೀಪ್ ಹೇಳಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್ 11 ಹೊಸ ಸೀಸನ್ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ಸ್ವರ್ಗ ನರಕ ಪರಿಕಲ್ಪನೆಯ ಪ್ರೋಮೋ ನೋಡುಗರ ಕುತೂಹಲ ಹೆಚ್ಚಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೇಲೆ ಪ್ರೇಕ್ಷಕರಿಗೂ ಕೂಡ ಅತಿಯಾದ ನಿರೀಕ್ಷೆ ಶುರುವಾಗಿದ್ದು, ಯಾರೆಲ್ಲ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ. ಮುಖ್ಯವಾಗಿ ನಿರೂಪಕರು ಬದಲಾವಣೆ ಎನ್ನುವ ಗಾಸಿಪ್ಗೆ ಈಗಾಗಲೇ ಬ್ರೇಕ್ ಬಿದ್ದಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಈಗಾಗಲೇ ಸುದೀಪ್ ಎಂಟ್ರಿಯ ಪ್ರೋಮೋ ಎಲ್ಲಡೆ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಿಗ್ ಬಾಸ್ ಪ್ರತಿ ಸೀಜನ್ನ್ ಅಲ್ಲೂ ಕಿಚ್ಚ ಸುದೀಪ್ ಕಾಸ್ಟ್ಯೂಮ್ ಮೇಲೆ ಎಲ್ಲರ ಕಣ್ಣು ಇರುತ್ತದೆ. ಈ ಬಾರಿ ಸುದೀಪ್ ಕಾಸ್ಟ್ಯೂಮ್ ಡಿಸೈನ್ ಹೇಗಿರಲಿದೆ..? ಡಿಸೈನರ್ ಬಳಿ ನಿಮ್ಮ ಬೇಡಿಕೆ ಏನು ಎನ್ನುವ ಪ್ರಶ್ನೆಗೆ ನಟ ಕಿಚ್ಚ ಸುದೀಪ್, ಬಾಳೆಎಲೆ ಎಂದು ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ಬಳಿಕ ಮಾತು ಮುಂದುವರಿಸಿದ ಸುದೀಪ್, ಈ ಬಾರಿಯ ಕಾಸ್ಟ್ಯೂಮ್ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಎಂದಿದ್ದಾರೆ.
ಆ ವಾರದ ಶನಿವಾರ ಬಂದಾಗ ವಾರ ಪೂರ್ತಿ ಜಗಳ ಇರಲಿ ಏನೇ ಇರಲಿ ಸ್ಪರ್ಧಿಗಳು ನಮಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಕುಳಿತಿರುತ್ತಾರೆ. ಅವರು ನಮಗೋಸ್ಕರ ಅಷ್ಟು ಸಮಯ ಕೊಟ್ಟು ರೆಡಿಯಾಗಿರುತ್ತಾರೆ. ಹುಡುಗರು ಕೂಡ ನಮಗಾಗಿ ರೆಡಿಯಾಗಿರುತ್ತಾರೆ. ಹೀಗಾಗಿ ಅವರಿಗಾಗಿ ನಾನೂ ಏನಾದರೂ ಮಾಡಬೇಕು ಎಂದುಕೊಳ್ಳುತ್ತೇನೆ ಎಂದರು.

ಕಾಸ್ಟ್ಯೂಮ್ ಅಂತಾ ಬಂದಾಗ ನಾವು ಅದಕ್ಕಾಗಿ ಸ್ವಲ್ಪ ಸಮಯ ಕೊಡುತ್ತೇವೆ. ಇವತ್ತಿಗೆ ಏನು ಟ್ರೆಂಡ್ ಆಗುತ್ತದೆ ಅಂತಾ ಯೋಚನೆ ಮಾಡುತ್ತೇವೆ. ಏನೂ ಹೊಸದಾಗಿ ಮಾಡಬಹುದು ಅಂತಾ ಯೋಚನೆ ಮಾಡಿ ಮಾಡುತ್ತೇವೆ. ಡಿಸೈನರ್ಗಳು ನಾನು ಚೆನ್ನಾಗಿ ಕಾಣಲು ಹೆಚ್ಚು ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.
ಈ ಬಾರಿ ಕಾಸ್ಟ್ಯೂಮ್ ಬಗ್ಗೆ ನನಗೂ ಕೂಡ ಕುತೂಹಲ ಇದೆ. ನಿಜ ಹೇಳಬೇಕು ಅಂದರೆ ನಮಗೆ ಆಯ್ಕೆಗಳು ಕಮ್ಮಿ ಇರುತ್ತದೆ. ಮಹಿಳೆಯರ ತರ ಹೆಚ್ಚಿನ ಆಯ್ಕೆ ಇರುವುದಿಲ್ಲ. ನಮ್ಮ ಹತ್ತಿರ ಏನೂ ಇಲ್ಲ. ಜಿಪ್ ಅದೇ ಜಾಗದಲ್ಲಿ, ಬಟನ್ ಅದೇ ಜಾಗದಲ್ಲಿ, ಎಲ್ಲವೂ ಅಲ್ಲಲ್ಲೇ ಇರುತ್ತದೆ. ನಮ್ಮ ಬಟ್ಟೆಯಲ್ಲಿ ಏನೂ ಬದಲಾವಣೆ ಆಗಲ್ಲ. ಅಂತಾ ತಮಾಷೆ ಮಾಡಿರುವ ನಟ ಕಿಚ್ಚ ಸುದೀಪ್, ಇಂತಹ ಕಡಿಮೆ ಆಯ್ಕೆಯಲ್ಲೂ ನಮ್ಮ ಬಟ್ಟೆ ಬಗ್ಗೆ ಜನರಿಗೆ ಆಕರ್ಷಣೆ ಬರುತ್ತಿದೆ ಎಂದರೆ ನನ್ನ ಡಿಸೈನರ್ಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications