Bigg Boss 12: ಜಾಹ್ನವಿ ತರ ಕಾಣೋ ಆಂಟಿಗಳು ಇಷ್ಟ: ಅಭಿಷೇಕ್ ವಿಡಿಯೋ ವೈರಲ್
ಬಿಗ್ಬಾಸ್ ಮನೆ ಅಂದಾಕ್ಷಣ ತರ್ಲೆ, ಹರಟೆ ಮಾತುಗಳಿಗೇನು ಕಡಿಮೆ ಇರೋದಿಲ್ಲ. ಪ್ರತಿ ಸೀಸನ್ನಲ್ಲೂ ಇಂತಹ ಪ್ರತಿಭೆಗಳು ಇದ್ದೇ ಇರ್ತಾರೆ. ಇಂತವರಿದ್ದರೆ ಟ್ರೋಲ್ ಪೇಜ್ಗಳಿಗೆ ಕೂಡ ಹಬ್ಬ. ಕಂಟೆಂಟ್ ಸಿಕ್ಕರೆ ಸಾಕು ಅಂತ ಕಾದಿರುತ್ತಾರೆ. ಬಿಗ್ಬಾಸ್ ಮನೆಯ ಅಂತಹ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಹಾಗೂ ಟ್ರೋಲ್ ಆಗುತ್ತಿದೆ. ಬಿಗ್ಬಾಸ್ ಸೀಸನ್ 12ರ (Bigg Boss Kannada 12) ಸ್ಪರ್ಧಿಗಳಾಗಿರುವ ಜಾಹ್ನವಿ ಹಾಗೂ ಅಭಿಷೇಕ್ ಶ್ರೀಕಾಂತ್ ನಡುವೆ ನಡೆದಿರುವ "ಆಂಟಿ ಲವ್ವರ್" ಮಾತುಕತೆ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ. ಅಭಿಷೇಕ್ ನೇರವಾಗಿ ನಿಮ್ಮಂತ ಆಂಟಿ ಅಂದ್ರೆ ನನಗೆ ಇಷ್ಟ ಎಂದು ಹೇಳಿದ್ದಾರೆ.
ಹೌದು, ಟಾಸ್ಕ್ ಬದಿಗಿಟ್ಟು ತಮಾಷೆಯ ಮಾತುಗಳಿಗೆ ಜಾರಿರುವ ಜಾಹ್ನವಿ ಹಾಗೂ ಅಭಿಷೇಕ್ ಅವರು ತಮ್ಮ ವಯಸ್ಸಿನ ಬಗ್ಗೆ ಚರ್ಚೆ ಶುರು ಮಾಡಿದ್ದು, ಇದು ಕೊನೆಗೆ ಆಂಟಿ ಲವ್ವರ್ ಹಂತದವರೆಗೆ ತಲುಪಿದೆ. ಆರಂಭದಲ್ಲಿ ಅಭಿಷೇಕ್ 'ನಿನ್ನಿಂದಲೇ..' ಹಾಡು ಹಾಡುತ್ತಿದ್ದರು. ಆಗ ನೀವು ನನ್ನಂತೆ ಎಷ್ಟು ಜನರಿಗೆ ಇದೇ ರೀತಿ ಹಾಡು ಹಾಡಿದ್ದೀರಿ? ಎಂದು ಜಾಹ್ನವಿ ಕೇಳಿದರು. ಇದು ನಿಮಗಾಗಿ ಮಾತ್ರ ಹೇಳೋದು ಎಂದು ಅಭಿಷೇಕ್ ಫ್ಲರ್ಟ್ ಮಾಡಿದ್ದಾರೆ.

ನೀವು ಆಂಟಿ ಲವ್ವರ್ರಾ?
ಮೊದಲಿಗೆ ತಮ್ಮ ವಯಸ್ಸಿನ ಬಗ್ಗೆ ಮಾತು ಶುರು ಮಾಡಿರುವ ಜಾಹ್ನವಿ, 'ನಿಮಗಿಂತ ನಾನು ಹತ್ತು ವರ್ಷ ದೊಡ್ಡವಳು. ನಿಮಗೆ ದೊಡ್ಡವರು ಅಂದ್ರೆ ಇಷ್ಟವೇ? ನೀವು ಆಂಟಿ ಲವ್ವರ್ರಾ? ಎಂದು ಅಭಿಷೇಕ್ಗೆ ಕೇಳಿದ್ದಾರೆ. ಆಗ ಮಾತಿಗಿಳಿದ ಅಭಿಷೇಕ್, ಹಾಗಾದರೆ ನಿಮ್ಮನ್ನು ನೀವು ಆಂಟಿ ಎನ್ನುತ್ತಿರುವಿರೇ? ಎಂದು ಕೇಳಿದ್ದಾರೆ. ನಾನು ಅನ್ನಲ್ಲ, ಸಾಮಾನ್ಯವಾಗಿ ಮದುವೆಯಾದವರನ್ನು ಆಂಟಿ ಅಂತಾರೆ ಎಂದಿದ್ದಾರೆ ಜಾಹ್ನವಿ. ನೀವು ಹಾಗೆ ಕಾಣ್ತಿಲ್ಲ ಎಂದಿದ್ದಕ್ಕೆ ನಾನು ಆ ರೀತಿ ಮೇಂಟೇನ್ ಮಾಡಿದ್ದೇನೆ' ಎಂದಿದ್ದಾರೆ.
'ನಿಮ್ಮ ರೀತಿ ಕಾಣೋ ಆಂಟಿಗಳಂದ್ರೆ ಇಷ್ಟ. ಅವರನ್ನ ಆಂಟಿಗಳು ಎಂದು ಭಾವಿಸುವುದಿಲ್ಲ. ಆದರೆ ಇಷ್ಟ ಎಂದು ಅಭಿಷೇಕ್ ಮಾತು ಮುಂದುವರಿಸಿದ್ದಾರೆ. ಯಾಕೆ ನಿಮಗೆ ನಿಮಗಿಂತ ದೊಡ್ಡವರು ಇಷ್ಟ ಆಗ್ತಾರೆ?' ಎಂದು ಕೇಳಿದಾಗ 'ಅವನಿಗೆ ಬೇರೆ ಆಪ್ಷನ್ ಇಲ್ಲ' ಎಂದು ಅಶ್ವಿನಿ ರೇಗಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದಕ್ಕಾ ಬಿಗ್ಬಾಸ್ ಮನೆಗೆ ಹೋಗಿದ್ದು? ಎಂದು ಟ್ರೋಲ್ ಮಾಡುತ್ತಿದ್ದಾರೆ.
-
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ











Click it and Unblock the Notifications