Actor Darshan: ದರ್ಶನ್ಗೆ ಸಹಾಯ ಮಾಡುವೆ, ಆದರೆ ಕಂಡಿಷನ್ಸ್ ಅಪ್ಲೈ: ಲಾಯರ್ ಜಗದೀಶ್
ಬೆಂಗಳೂರು, ಅಕ್ಟೋಬರ್ 29: ನಟ ದರ್ಶನ್ ತೂಗುದೀಪ ವಿಚಾರವಾಗಿ ಮಾತನಾಡಿ, ಪ್ರತಿಭಟನೆಗೂ ಕರೆ ನೀಡಿದ್ದ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮತ್ತಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. ನಟ ದರ್ಶನ್ ಗೆ ಇನ್ನೂವರೆಗೂ ಜಾಮೀನು ಸಿಕ್ಕಿಲ್ಲ. ಇದೀಗ ದರ್ಶನ್ ಶತದಡ್ಡ ಎಂದಿದ್ದ ಲಾಯರ್ ಜಗದೀಶ್ ಅವರು ನಟನಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ದರ್ಶನ್ಗೆ ಒಂದಷ್ಟು ಕಂಡಿಷನ್ಸ್ ಹಾಕಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಕುರಿತು ಓಪನ್ ಆಗಿ ಮಾತನಾಡಿದ್ದ ಲಾಯರ್ ಜಗದೀಶ್ ಏನೇ ಮಾತನಾಡಿದರೂ ಸುದ್ದಿ ಆಗುತ್ತದೆ. ರಾಜಕಾರಣಗಳು ಹಾಗೂ ಡಿ.ಬಾಸ್ ವಿಚಾರವಾಗಿ ಮಾತನಾಡುತ್ತಿದ್ದಂತೆ ಮುನ್ನೆಲೆಗೆ ಬಂದು.

ಅದರಿಂದಲೇ ಅವರಿಗೆ ಬಿಗ್ ಬಾಸ್ ಹೋಗಲು ಅವಕಾಶ ಸಿಕ್ಕಿತು ಎನ್ನಲಾಗಿದೆ. ಇದೀಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಜೈಲಿನಲ್ಲಿದ್ದು ಜಾಮೀನಿಗೆ ಪರದಾಡುತ್ತಿರುವ ನಟ ದರ್ಶನ್ಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಸದ್ಯ ಬಿಗ್ ಬಾಸ್ನಿಂದ ಹೊರ ಬಂದಿರುವ ಲಾಯರ್ ಜಗದೀಶ್ ಅವರು ಮತ್ತೆ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ನಾನು ಅವರಿಗೆ ಸಹಾಯ ಮಾಡುತ್ತೇನೆ ಆದರೆ ನಟ ಶೆಡ್ಗೆ ಹೋಗಬಾರದು ಎಂದು ಷರತ್ತು ವಿಧಿಸಿದ್ದಾರೆ. ಈ ಮಾತನ್ನು ಅವರು ಖಾಸಗಿ ಟಿವಿ ವಾಹಿನಿಯೊಂದರಲ್ಲಿ ತಿಳಿಸಿದ್ದು, ಆ ವಿಡಿಯೋ ತುಣುಕು ವೈರಲ್ ಆಗುತ್ತಿದೆ.
ದರ್ಶನ್ ಪರ ಹೋರಾಡುತ್ತಿರುವವ ನಾನೊಬ್ಬನೇ
ಈಗಾಗಲೇ ನಟ ದರ್ಶನ್ ವಿಚಾರವಾಗಿ ನಾನು ಸಾಕಷ್ಟು ಮಾತನಾಡಿದ್ದೇನೆ. ದರ್ಶನ್ ಕೇಸ್ ವಿಚಾರ ಬರುತ್ತಿದ್ದಂತೆ ಅವರಿಗೆ ಜಾಮೀನು ಸಿಗಬೇಕು. ನಾನು ಅವರ ಪರ ಪ್ರತಿಭಟನೆ, ಅಭಿಯಾನ ಮಾಡಿಸಿದೆ. ಬಿಗ್ ಬಾಸ್ ಬಳಿಕ ಹೊರಗಿದ್ದುಕೊಂಡು ಒಂದಷ್ಟು ಕೆಲಸ ಮಾಡುತ್ತಿರುವೇ. ಈಗಲೇ ನಾನು ನಟ ದರ್ಶನ್ಗೆ ಸಹಾಯ ಮಾಡಲು ಸಿದ್ಧ, ಆದರೆ ಅವರ ಮನೆಯವರು ಇನ್ನುವರೆಗೂ ನನ್ನ ಸಂಪರ್ಕಿಸಿಲ್ಲ ಎಂದು ಅವರು ಸಂದರ್ಶನ ವೇಳೆ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಸಂಬಂಧ ದರ್ಶನ್ ವಿರುದ್ಧ ನಡೆದ ಪೊಲೀಸ್ ತನಿಖೆ ವಿರುದ್ಧ ಬಹಿರಂಗವಾಗಿ ಆಕ್ಷೇಪ ಎತ್ತಿರುವವನು ನಾನೊಬ್ಬನೇ. ಅವರಿಗೆ ನಾನು ಸಹಾಯ ಮಾಡುವೆ, ಅವರು ಮತ್ತೆ ಶೆಡ್ ಕಡೆಗೆ ಹೋಗಬಾರದು ಎಂದು ಮಾರ್ಮಿಕವಾಗಿ ಹೇಳಿದರು. ತಮ್ಮ ಮನೆಗೆ ಹೋಗಬೇಕು ಎಂದು ತಮ್ಮದೇ ಸ್ಟೈಲ್ನಲ್ಲಿ ತಿಳಿಸಿದ್ದಾರೆ.
ದರ್ಶನ್ ಪರ ನನ್ನ ಕೈಲಾದಷ್ಟು ನಾನು ಪ್ರಯತ್ನ ಮಾಡುತ್ತೇನೆ. ದರ್ಶನ್ಗೆ ಬೇಲ್ ಸಿಗಬೇಕು. ವಿಜಯಲಕ್ಷಮೀ ಅವರನ್ನು ನಾನು ಮರಳಿ ದರ್ಶನ್ ಜೊತೆಗೆ ನೋಡಬೇಕು. ಇದು ಅಭಿಮಾನಿಗಳು ಕಾತರವೂ ಹೌದು. ಸಂಜೆ ಆದರೆ, ಬೇರೆ ಮನೆಗೆ, ಅಪ್ಪಿ ತಪ್ಪಿ ಶೆಡ್ ಕಡೆಗೆ ಹೋಗುವುದು ಬೇಡ ಎಂದು ನೀವು ಹೇಳಿ ಎಂದು ನಗುಮೊಖದಲ್ಲಿಯೇ ಸಲಹೆ ನೀಡಿದರು. ಅವರ ಹೇಳಿಕೆಯ ವೈರಲ್ ಆಗುತ್ತಿದೆ. ಈ ಹಿಂದೆ ಪ್ರತಿಭಟನೆ ವೇಳೆ ಬರುವುದಾಗಿ ಹೇಳಿದ್ದ ಡಿ ಬಾಸ್ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿಯೇ ಜಗದೀಶ್ ಪರವಾಗಿ ಧ್ವನಿ ಎತ್ತಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications