ಸಾವು-ಬದುಕಿನ ಹೋರಾಟ, ಯಾವ ಶತ್ರುವಿಗೂ ಬೇಡ: ನಟಿ ರಜಿನಿ
ಅಮೃತವರ್ಷಿಣಿ ಸೀರಿಯಲ್ ಖ್ಯಾತಿಯ ಕನ್ನಡ ಕಿರುತೆರೆಯ ನಟಿ ರಜಿನಿ ಅವರು ಇತ್ತೀಚೆಗಷ್ಟೇ ತನ್ನ ಸ್ನೇಹಿತ ಅರುಣ್ ಗೌಡ ಅವರನ್ನು ಮದುವೆಯಾಗಿದ್ದರು. ಏಳು ವರ್ಷಗಳಿಂದ ಪರಿಚಯವಿದ್ದ ಅರುಣ್ ಅವರೊಂದಿಗೆ ಕಾಮಿಡಿ ರೀಲ್ಸ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದರು. ಇವರಿಬ್ಬರೂ ಮದುವೆಯಾಗಿದ್ದಾರೆ ಎಂದೆಲ್ಲ ವದಂತಿ ಮೊದಲೇ ಹಬ್ಬಿತ್ತು. ಆದರೆ ಅವರು ನನ್ನ ಸ್ನೇಹಿತ ಎಂದು ರಜಿನಿ ಹೇಳಿಕೊಂಡಿದ್ದರು. ಆದರೆ ಕೆಲ ವಾರದ ಹಿಂದಷ್ಟೇ ಇಬ್ಬರೂ ಸಪ್ತಪದಿ ತುಳಿಯುವ ಮೂಲಕ ಶಾಕ್ ಕೊಟ್ಟಿದ್ದಾರೆ. ಇದೀಗ ರಜಿನಿ ಅವರು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ "ಈ ಸಾವು-ಬದುಕಿನ ಹೋರಾಟ, ಯಾವ ಶತ್ರುವಿಗೂ ಬೇಡ" ಎಂದಿದ್ದಾರೆ.
ಬಾಡಿ ಬಿಲ್ಡರ್ ಆಗಿರುವ ರಜಿನಿ ಅವರ ಪತಿ ಅರುಣ್ ಇತ್ತೀಚೆಗೆ ಕಾಂಪಿಷೇಷನ್ಗೆ ಹೋಗಿದ್ದು, ಸಿಕ್ಕಾಪಟ್ಟೆ ತಯಾರಿ ಕೂಡ ನಡೆಸಿದ್ದರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. 'ಅರುಣ್ಗೆ ಮೆಡಲ್ ಟ್ರೋಫಿ ಸಿಕ್ಕಿಲ್ಲ. ಆದ್ರೆ ನಿಮ್ಮ ವಿಶ್ ಯಾವ ಟ್ರೋಫಿ, ಮೆಡಲ್ಗೂ ಕಮ್ಮಿ ಇಲ್ಲ. ಇದು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದಿದ್ದಾರೆ. ಬದುಕನ್ನು ಪ್ರೀತಿಸುತ್ತಾ ಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ. ಶುಭ ದಿನ' ಎಂದು ನಟಿ ಬರೆದುಕೊಂಡಿದ್ದಾರೆ.

'ಉಪ್ಪು ಖಾರವಿಲ್ಲದ ಊಟ'
'ಇದು ಅರುಣ್ ಒಬ್ಬರ ಕಥೆ ಅಲ್ಲ, ಅಲ್ಲಿ ಬಂದಂತಹ ಸಾವಿರಾರು ಮಂದಿಯ ಕಥೆ. ಉಪ್ಪು ಖಾರವಿಲ್ಲದ ಊಟ ಮಾಡಿದ ದಿನಗಳು, ನಿದ್ದೆಯಿಲ್ಲದ ರಾತ್ರಿಗಳು, ಈ ಒಂದು ದಿನಕ್ಕಾಗಿ ಒಂದು ವರ್ಷವಿಡೀ ಸಾವು ಬದುಕಿನ ಹೋರಾಟ. ಆದರೆ ಕೊನೆಗೆ ಏನೂ ಇಲ್ಲದೆ ಬರಿಗೈನಲ್ಲಿ ಉಳಿಯುವ ಸ್ಥಿತಿ ಯಾವ ಶತ್ರುವಿಗೂ ಬೇಡ' ಎಂದು ರಜಿನಿ ಬೇಸರ ಹೊರಹಾಕಿದ್ದಾರೆ.
'ಅರುಣ್ ಅವರ ದೇಹದ ಬಗ್ಗೆ ಅವರ ಕೋಚ್ ಕೂಡ ಒಳ್ಳೆಯದೇ ಹೇಳಿದ್ರು. ನಾವು ಮಾಡೋ ಕೆಲಸ ಕೋಚ್ಗೆ ಇಷ್ಟ ಆದ್ರೆ ಆ ದೇವರಿಗೆ ಇಷ್ಟ ಆದಂತೆ ಅಂದಿದ್ದ. ಆದರೆ ಅದೃಷ್ಣ ಕೈಕೊಟ್ಟಿದೆ. ಇದೆಲ್ಲ ಅವನಿಗೆ ಮೊದಲ ಸೋಲೇನಲ್ಲ. ನಾವು ಯಶಸ್ಸಿನ ಹಾದಿಯಲ್ಲಿದ್ದಾಗ ಏರಿಳಿತಗಳು ತುಂಬಾ ಮುಖ್ಯ. ಮುಂದೆ ಸೋಲು ಕೂಡ ನಮ್ಮ ಮುಂದೆ ತಲೆಬಾಗುವಂತಿರಬೇಕು' ಎಂದು ರಜಿನಿ ಹೇಳಿದ್ದಾರೆ.
'ಮದುವೆ ಬಗ್ಗೆ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ರಜಿನಿ, ನನ್ನ ಅರುಣ್ ಬಾಡಿ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ಆ ದೇಹ ಮಾಡಲು ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ನನಗೆ ಗೊತ್ತು. ಫೈನಲಿ ನಾವು ಏರ್ಪೋರ್ಟ್ಗೆ ರೀಚ್ ಆದೆವು. ಅರುಣ್ನ ಕಳಿಸಿಕೊಡೋಕೆ ತುಂಬಾ ಬೇಜಾರಾಗ್ತಿದೆ. ಆದರೂ ಆಲ್ದಿ ಬೆಸ್ಟ್ ಹೇಳಿದೆ. ಬದುಕನ್ನು ಬೇರೆಯವರ ಇಚ್ಛೆಯಂತೆ ಅಲ್ಲ, ನಮ್ಮ ಇಚ್ಛೆಯಂತೆ ಬದುಕಬೇಕು' ಎಂದು ರಜನಿ ಹೇಳಿದ್ದರು.
-
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications