ನಟ ದರ್ಶನ್ ದಿಢೀರ್ ಅರೆಸ್ಟ್, ಪೊಲೀಸರಿಂದ ವಿಚಾರಣೆ... Actor Darshan

ಸಿನಿಮಾ ನಟರು ಜೈಲಿಗೆ ಹೋಗುವುದು, ಪೊಲೀಸರ ಕೈಯಲ್ಲಿ ಲಾಕ್ ಆಗುವುದೆಲ್ಲಾ ಈಗ ಮಾಮೂಲಿ ಎಂಬಂತೆ ಆಗಿದೆ. ಅನೇಕ ಕೇಸ್‌ಗಳಲ್ಲಿ ಸಿನಿಮಾ ನಟರು & ನಟಿಯರು ಇದೀಗ ಜೈಲಿಗೆ ಹೋಗಿ ಪರದಾಡುತ್ತಿದ್ದಾರೆ. ಹೀಗೆ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರುವ ಸಿನಿಮಾ ನಟರು ಜೈಲಿಗೆ ಹೋಗುತ್ತಿರುವುದು ಬೇರೆಯದ್ದೇ ರೀತಿ ಸಂದೇಶವನ್ನು ಸಮಾಜಕ್ಕೆ ಕೊಡುತ್ತಿದೆ. ಹೀಗಿದ್ದಾಗಲೇ, ನಟ ದರ್ಶನ್ ದಿಢೀರ್ ಅರೆಸ್ಟ್, ಪೊಲೀಸರಿಂದ ವಿಚಾರಣೆ...

ಸಿನಿಮಾ ಸ್ಟಾರ್‌ಗಳಿಗೆ ಸಿಕ್ಕಾಪಟ್ಟೆ ದುಡ್ಡು ಬಂದುಬಿಡುತ್ತೆ, ಅದೇ ಕಾರಣಕ್ಕೆ ಅವರು ತಮ್ಮ ವರ್ತನೆ ಬದಲಾಯಿಸಿಕೊಂಡು ಹೊಡಿ & ಬಡಿ ಅಂತಾ ಸಾಮಾನ್ಯ ಜನರ ಮೇಲೆ ಹಲ್ಲೆಯ ಮಾಡುವುದು & ಬೈಯುವುದು ಮಾಡಿ ಟಾರ್ಗೆಟ್ ಆಗುತ್ತಿದ್ದಾರೆ. ಸಿನಿಮಾ ನಟರು ಹಾಗೂ ನಟಿಯರು ಹಲವು ಕಾನೂನು ಮೀರಿದ ಕೆಲಸ ಮಾಡಿ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ. ಇಷ್ಟಾದರೂ ಸಿನಿಮಾ ನಟರು ಜೈಲಿಗೆ ಹೋಗುವ ಘಟನೆಗಳು ಕಡಿಮೆ ಆಗಿಲ್ಲ. ಇಂತಹದ್ದೇ ಸಮಯದಲ್ಲೇ, ನಟ ದರ್ಶನ್ ದಿಢೀರ್ ಅರೆಸ್ಟ್, ಪೊಲೀಸರಿಂದ ವಿಚಾರಣೆ...

Actor Darshan Has Been Arrested And Police Investigated In This Case

ನಟ ದರ್ಶನ್ ದಿಢೀರ್ ಅರೆಸ್ಟ್, ಪೊಲೀಸರಿಂದ...

ಹೌದು, ಕನ್ನಡ ಸಿನಿಮಾ ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ರಂಗ ಬಗ್ಗೆ ಇಡೀ ಇಂಡಿಯಾ ಪೂರ್ತಿ ಹವಾ ಇದೆ. ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗ ಮಕಾಡೆ ಮಲಗಿ, ಸಾಲು & ಸಾಲು ಸಿನಿಮಾಗಳು ಹೀನಾಯವಾಗಿ ಸೋತು ತೋಪೆದ್ದು ಹೋಗುತ್ತಿರುವ ಸಮಯದಲ್ಲೇ, ದಕ್ಷಿಣ ಭಾರತದ ಸಿನಿಮಾಗಳು ಅದರಲ್ಲೂ ಕನ್ನಡ ಸಿನಿಮಾಗಳು ಹಿಂದಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗುತ್ತಿವೆ. ಹೀಗೆಲ್ಲಾ ದಕ್ಷಿಣ ಭಾರತದ ಸಿನಿಮಾ ರಂಗ ದೊಡ್ಡ ಹೆಸರು ಮಾಡುವ ಈ ಸಮಯದಲ್ಲೇ ಸಿನಿಮಾ ನಟರು & ನಟಿಯರು ಜೈಲಿಗೆ ಹೋಗುತ್ತಿದ್ದು, ನಟ ದರ್ಶನ್ ದಿಢೀರ್ ಅರೆಸ್ಟ್, ಪೊಲೀಸರಿಂದ ವಿಚಾರಣೆ...

ಹೈಕೋರ್ಟ್ ಜಡ್ಜ್ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ & ಗಲಾಟೆ ಮಾಡಿರುವ ಭಾರಿ ಗಂಭೀರ ಆರೋಪ ಕೂಡ ಇದೀಗ ತಮಿಳು ನಟ ದರ್ಶನ್ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಇದೀಗ ಚೆನ್ನೈ ಪೊಲೀಸರು ನಟ ದರ್ಶನ್ ಅವರನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದು, ಈ ವಿಚಾರ ಇದೀಗ ಸಂಚಲನ ಸೃಷ್ಟಿ ಮಾಡಿದೆ. ನಟ ದರ್ಶನ್ ಅವರ ಮನೆಯ ಮುಂದೆ ಕಾರನ್ನು ನಿಲ್ಲಿಸಲಾಗಿತ್ತು ಎಂಬ ವಿಚಾರಕ್ಕೆ ಗಲಾಟೆ ನಡೆದಿತ್ತು. ಹಾಗಾದ್ರೆ ಚೆನ್ನೈ ಪೊಲೀಸರು ಈ ಪ್ರಕರಣವನ್ನು ಇಷ್ಟು ಗಂಭೀರವಾಗಿ ಪರಿಗಣಿಸಿರುವುದು ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಭೀಕರ ಹೊಡೆದಾಟ & ಬಡಿದಾಟ ನಡೆದಿತ್ತಾ?

ತಮಿಳು ನಟ ದರ್ಶನ್ ಮನೆ ಚೆನ್ನೈನ ಮುಖರ್ಜಿ ಪ್ರದೇಶದಲ್ಲಿ ಇದ್ದು, ಜಡ್ಜ್ ಮಗ ತಮ್ಮ ಹೆಂಡತಿ ಜೊತೆಗೆ ಬಂದು ನಟ ದರ್ಶನ್ ಮನೆ ಎದುರಲ್ಲೇ ಕಾರು ನಿಲ್ಲಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ದೊಡ್ಡ ಗಲಾಟೆ ನಡೆದು ಹೊಡೆದಾಟ & ಬಡಿದಾಟ ಕೂಡ ಆಗಿದೆ. ಹೀಗೆ ಜಡ್ಜ್ ಮಗನ ಮೇಲೆ ಹಲ್ಲೆ ನಡೆದಿರುವ ಆರೋಪವನ್ನ ಪೊಲೀಸರು ಈಗ ತುಂಬಾ ಸೀರಿಯಸ್ ಆಗಿ ಸ್ವೀಕಾರ ಮಾಡಿದ್ದು, ತಮಿಳು ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆಯ ಕೂಡ ನಡೆಸಿದ್ದಾರೆ ಪೊಲೀಸರು. ಬಿಗ್‌ಬಾಸ್ ಮೂಲಕವೂ ತಮಿಳು ನಟ ದರ್ಶನ್ ಹೆಸರು ಮಾಡಿದ್ದರು.

ಚೆನ್ನೈ ಪೊಲೀಸರಿಗೆ ಹೊಸ ತಲೆನೋವು?

ತಮಿಳು ನಟ ದರ್ಶನ್ ಅವರ ಪ್ರಕರಣದಲ್ಲಿ ಇದೀಗ ಚೆನ್ನೈ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ ಎನ್ನಲಾಗಿದೆ. ಯಾಕಂದ್ರೆ ತಮಿಳು ನಟ ದರ್ಶನ್ ಅವರು ಜಡ್ಜ್ ಪುತ್ರನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದ್ದು, ತನಿಖೆಯ ಕೂಡ ನಡೆಸಲಾಗುತ್ತಿದೆ. ಇನ್ನೊಂದು ಕಡೆ ಅಭಿಮಾನಿಗಳು ತಮಿಳು ನಟ ದರ್ಶನ್ ಅವರ ಬೆನ್ನಿಗೂ ನಿಲ್ಲುತ್ತಿದ್ದಾರೆ. ತಮಿಳುನಾಡಿನಲ್ಲಿ ಇದೀಗ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೇ ವಿಚಾರವಾಗಿ ಪರ & ವಿರೋಧದ ಚರ್ಚೆಗಳು ಕೂಡ ಶುರುವಾಗಿವೆ. ಹೀಗಾಗಿ ಪ್ರಕರಣದ ಬಗ್ಗೆ ಒಂದು ಸ್ಪಷ್ಟನೆ ಸಿಗಲು ತನಿಖೆ ಸಂಪೂರ್ಣವಾಗಬೇಕು, ಆ ನಂತರವೇ ಈ ಕೇಸ್ ಕುರಿತಾಗಿ ಒಂದು ಸ್ಪಷ್ಟನೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+