ಬಿಸಿಲನಾಡಿನಲ್ಲಿ ನಡೆಯಲಿಲ್ಲ ಮಳೆ ಹುಡುಗಿ ಜಾದೂ

ಜಿಲ್ಲೆಯಲ್ಲಿ ಏಳು ವಿಧಾಸಭಾ ಕ್ಷೇತ್ರಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಎರಡು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು ಕೇವಲ ಒಂದು ಸ್ಥಾನಕ್ಕೆ ಪಕ್ಷ ತೃಪಿ ಪಟ್ಟುಕೊಂಡಿತ್ತು.
ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರಿಗೆ ವೇಂಕಟೇಶ್ ನಾಯಕ್ ಸೋಲುಣಿಸಿದ್ದಾರೆ. ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾನಪ್ಪ ವಜ್ಜಲ್ ಲಿಂಗಸುಗೂರು ಕ್ಷೇತ್ರದಿಂದ ಜಯಗಳಿಸಿ ಪಕ್ಷದ ನಾಯಕರ ನಂಬಿಕೆ ಉಳಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಫ್ಯಾನ್ ಗಾಳಿ ಬೀಸುವಂತೆ ಮಾಡಬೇಕು ಎಂಬ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಆಸೆ ಫಲಿಸಲಿಲ್ಲ. ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಕೇವಲ 1815 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಸಿಂಧನೂರು ಕ್ಷೇತ್ರದಲ್ಲೂ ಕೆ.ಕರಿಯಪ್ಪ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ರಾಯಚೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
| ರಾಯಚೂರು ಗ್ರಾಮೀಣ | ತಿಪ್ಪರಾಜು | ಬಿಜೆಪಿ | 50,497 | ರಾಜಾ ರಾಯಪ್ಪ ನಾಯಕ್ | ಕಾಂಗ್ರೆಸ್ | 47,227 |
| ರಾಯಚೂರು | ಡಾ.ಶಿವರಾಜ್ ಪಾಟೀಲ್ | ಜೆಡಿಎಸ್ | 45,263 | ಸೈಯದ್ ಯಾಸೀನ್ | ಕಾಂಗ್ರೆಸ್ | 37,392 |
| ಮಾನ್ವಿ | ಹಂಪಯ್ಯ ನಾಯಕ್ | ಕಾಂಗ್ರೆಸ್ | 50,619 | ರಾಜಾವೆಂಕಟಪ್ಪ ನಾಯಕ್ | ಜೆಡಿಎಸ್ | 43,632 |
| ದೇವದುರ್ಗ | ಎ.ವೆಂಕಟೇಶ್ ನಾಯಕ್ | ಕಾಂಗ್ರೆಸ್ | 62,070 | ಶಿವನಗೌಡ ನಾಯಕ್ | ಬಿಜೆಪಿ | 58,370 |
| ಲಿಂಗಸುಗೂರು | ಮಾನಪ್ಪ ವಜ್ಜಲ್ | ಜೆಡಿಎಸ್ | 31,737 | ಡಿ.ಎಸ್.ಹುಲಿಗಿರಿ | ಕಾಂಗ್ರೆಸ್ | 30,451 |
| ಮಸ್ಕಿ | ಪ್ರತಾಪ್ ಗೌಡ ಪಾಟೀಲ್ | ಕಾಂಗ್ರೆಸ್ | 45,552 | ಮಹದೇವಪ್ಪ ಗೌಡ | ಕೆಜೆಪಿ | 26,405 |
| ಸಿಂಧನೂರು | ಹಂಪನಗೌಡ ಬಾದರ್ಲಿ | ಕಾಂಗ್ರೆಸ್ | 49,213 | ಕೆ.ಕರಿಯಪ್ಪ | ಕೆಜೆಪಿ | 36,197 |
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications