ಬಿಸಿಲನಾಡಿನಲ್ಲಿ ನಡೆಯಲಿಲ್ಲ ಮಳೆ ಹುಡುಗಿ ಜಾದೂ

ಜಿಲ್ಲೆಯಲ್ಲಿ ಏಳು ವಿಧಾಸಭಾ ಕ್ಷೇತ್ರಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಎರಡು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು ಕೇವಲ ಒಂದು ಸ್ಥಾನಕ್ಕೆ ಪಕ್ಷ ತೃಪಿ ಪಟ್ಟುಕೊಂಡಿತ್ತು.
ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರಿಗೆ ವೇಂಕಟೇಶ್ ನಾಯಕ್ ಸೋಲುಣಿಸಿದ್ದಾರೆ. ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾನಪ್ಪ ವಜ್ಜಲ್ ಲಿಂಗಸುಗೂರು ಕ್ಷೇತ್ರದಿಂದ ಜಯಗಳಿಸಿ ಪಕ್ಷದ ನಾಯಕರ ನಂಬಿಕೆ ಉಳಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಫ್ಯಾನ್ ಗಾಳಿ ಬೀಸುವಂತೆ ಮಾಡಬೇಕು ಎಂಬ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಆಸೆ ಫಲಿಸಲಿಲ್ಲ. ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಕೇವಲ 1815 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಸಿಂಧನೂರು ಕ್ಷೇತ್ರದಲ್ಲೂ ಕೆ.ಕರಿಯಪ್ಪ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ರಾಯಚೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
| ರಾಯಚೂರು ಗ್ರಾಮೀಣ | ತಿಪ್ಪರಾಜು | ಬಿಜೆಪಿ | 50,497 | ರಾಜಾ ರಾಯಪ್ಪ ನಾಯಕ್ | ಕಾಂಗ್ರೆಸ್ | 47,227 |
| ರಾಯಚೂರು | ಡಾ.ಶಿವರಾಜ್ ಪಾಟೀಲ್ | ಜೆಡಿಎಸ್ | 45,263 | ಸೈಯದ್ ಯಾಸೀನ್ | ಕಾಂಗ್ರೆಸ್ | 37,392 |
| ಮಾನ್ವಿ | ಹಂಪಯ್ಯ ನಾಯಕ್ | ಕಾಂಗ್ರೆಸ್ | 50,619 | ರಾಜಾವೆಂಕಟಪ್ಪ ನಾಯಕ್ | ಜೆಡಿಎಸ್ | 43,632 |
| ದೇವದುರ್ಗ | ಎ.ವೆಂಕಟೇಶ್ ನಾಯಕ್ | ಕಾಂಗ್ರೆಸ್ | 62,070 | ಶಿವನಗೌಡ ನಾಯಕ್ | ಬಿಜೆಪಿ | 58,370 |
| ಲಿಂಗಸುಗೂರು | ಮಾನಪ್ಪ ವಜ್ಜಲ್ | ಜೆಡಿಎಸ್ | 31,737 | ಡಿ.ಎಸ್.ಹುಲಿಗಿರಿ | ಕಾಂಗ್ರೆಸ್ | 30,451 |
| ಮಸ್ಕಿ | ಪ್ರತಾಪ್ ಗೌಡ ಪಾಟೀಲ್ | ಕಾಂಗ್ರೆಸ್ | 45,552 | ಮಹದೇವಪ್ಪ ಗೌಡ | ಕೆಜೆಪಿ | 26,405 |
| ಸಿಂಧನೂರು | ಹಂಪನಗೌಡ ಬಾದರ್ಲಿ | ಕಾಂಗ್ರೆಸ್ | 49,213 | ಕೆ.ಕರಿಯಪ್ಪ | ಕೆಜೆಪಿ | 36,197 |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications