Get Updates
Get notified of breaking news, exclusive insights, and must-see stories!

ಧಾರವಾಡ ಕ್ಷೇತ್ರ: ಗೆಲುವಿನ ಪೇಡಾ ಸವಿಯುವವರ್ಯಾರು?

ಧಾರವಾಡ ಕರ್ನಾಟಕದ ವಾಣಿಜ್ಯ ನಗರಿ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ! ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ನಂತರ ಅತ್ಯಂತ ದೊಡ್ಡ ನಗರ ಪಾಲಿಕೆಯನ್ನು ಹೊಂದಿರುವ ನಗರವೆಂದರೆ ಧಾರವಾಡ.

ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ದ.ರಾ.ಬೇಂದ್ರೆ ಅವರ ನೆಲವಾದ ಧಾರವಾಡ ಕನ್ನಡ ನಾಡಿನ ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ.ಗಂಗೂಬಾಯಿ ಹಾನಗಲ್, ಬೆಟಗೇರಿ ಕೃಷ್ಣಶರ್ಮ, ಎಂ.ಎಂ.ಕಲಬುರ್ಗಿ, ಕೀರ್ತಿನಾಥ ಕುರ್ತಕೋಟಿ, ವಿ.ಕೃ.ಗೋಕಾಕ, ಗಿರೀಶ ಕಾರ್ನಾಡ ಸೇರಿದಂತೆ ಹಲವು ಮಹನೀಯರ ನೆಲೆ ಧಾರವಾಡ.

ಹಲವು ಉದ್ಯಮಗಳನ್ನು ಕಂಡ ಧಾರವಾಡ ನಗರದಲ್ಲಿ ಕನ್ನಡವೇ ಬಹುಮುಖ್ಯಭಾಷೆ. ಉತ್ತರ ಕರ್ನಾಟಕ ಶೈಲಿಯ ಇಲ್ಲಿನ ಕನ್ನಡ, ಕರ್ನಾಟಕದ ಜಾನಪದ ಸೊಗಡಿಗೆ ಕಳೆ ನೀಡಿದೆ.

Karnataka Assembly Election 2018: Dharwad Constituency Profile

ಇಲ್ಲಿನ ರಾಜಕೀಯದ ಬಗ್ಗೆ ಹೇಳುವುದಾದರೆ ಈ ಕ್ಷೇತ್ರವನ್ನು ಸದ್ಯಕ್ಕೆ ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಪ್ರತಿನಿಧಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರೂ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನ ಅಮೃತ ದೇಸಾಯಿ ಅವರನ್ನು ಸೋಲಿಸಿದ್ದರು. ‌ ಆಗ ಕೆಜೆಪಿ ಅಸ್ತಿತ್ವದಲ್ಲಿದ್ದಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಲಾಭ ಪಡೆದಿತ್ತು. ಆದರೆ ಈ ಬಾರಿ ಆ ಪರಿಸ್ಥಿತಿ ಇಲ್ಲ.

ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಪಡೆದಿದ್ದಲ್ಲದೆ, ಮಂತ್ರಿಯೂ ಆಗಿರುವ ಕಾರಣಕ್ಕೆ ಮತದಾರ ಪ್ರಭು ಅವರ ಮೇಲೆ ಕೃಪೆ ತೋರಬಹುದು. 2013 ರ ಚುನಾವಣೆಯಲ್ಲಿ ವಿನಯ ಕುಲಕರ್ಣಿ 53453 ಮತ ಗಳಿಸಿದ್ದರೆ, ಜೆಡಿಎಸ್ ನ ಅಮೃತ ದೇಸಾಯಿ 35133 ಮತ ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+