ಕನ್ನಡ ಪತ್ರಿಕೆಗಳು ಒಂದೇ ಬಳ್ಳಿಯ ಹೂವುಗಳು

ಹಾಗಂತ ಕೈಕಟ್ಟಿ ಕೂಡದೆ ಏನಾದರೂ ಮಾಡುತಿರು ಮಂಕುತಿಮ್ಮ ಎಂಬ ಮಂತ್ರ ಜಪಿಸುವುದು ಮತ್ತು ಮಂತ್ರಕ್ಕೊಂದು ತಂತ್ರ ಜೋಡಿಸುವುದರಲ್ಲಿ ನಿಮ್ಮ ಮೆಚ್ಚಿನ ದಟ್ಸ್ ಕನ್ನಡ ನಿಸ್ಸೀಮ. ನಮ್ಮ ಈ ಪರಿಯ ಪ್ರೀತಿಯ ಕನ್ನಡ ಸಸ್ಯ ಶ್ಯಾಮಲೆ ಈ ದೀಪಾವಳಿಗೆ ಇನ್ನೊಂದು ಫಲ ಕೊಟ್ಟಿದೆ. ಬನ್ನಿ, ಅಂತರ್ ಜಾಲದಲ್ಲಿ ಕನ್ನಡದ ಹೊಸ ದೀಪವೊಂದು ಹತ್ತಿದೆ. ನೋಡಿ.
ಕನ್ನಡದಲ್ಲಿ ಉಸಿರಾಡುವ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಸಂಜೆವಾಣಿ, ಈ ಸಂಜೆ, ಹೊಸದಿಗಂತ, ಗಲ್ಫ್ ಕನ್ನಡಿಗ, ಸಂಯುಕ್ತ ಕರ್ನಾಟಕ, ಕೆಂಡಸಂಪಿಗೆ ಮುಂತಾದ ತಾಣಗಳ ಜತೆಗೆ ನೂರಾರು ಬ್ಲಾಗುಗಳು ತಮ್ಮತಮ್ಮ ಒಲವು ನಿಲುವಿನ ಕನ್ನಡ ಸರಕುಗಳನ್ನು ನಿತ್ಯ ಅಂತರ್ ಜಾಲದಲ್ಲಿ ತೇಲಿ ಬಿಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದೋ ಅಥವಾ ಎರಡನ್ನೋ ನೀವು ನೋಡುತ್ತಿರುತ್ತೀರಿ, ಓದಿರುತ್ತೀರಿ. ತುಂಬ ಸಂತೋಷ.
ಆದರೆ, ಕನ್ನಡದಲ್ಲಿ ಬೆಳಕಾಗುವ ಎಲ್ಲ ತಾಣಗಳನ್ನು ನಿತ್ಯ ಗಮನಿಸಿ ಅವುಗಳಿಂದ ಆರಿಸಿದ ಒದೊಂದು ಸುದ್ದಿ/ ಟಿಪ್ಪಣಿ/ ಅಂಕಣ/ ಲೇಖನಗಳನ್ನು ಒಂದೇ ಪುಟದಲ್ಲಿ ಲೇಪಿಸುವ ಪುಟವೊಂದರ ಕೊರತೆ ಇತ್ತು. ಈ ಕೊರತೆ ತುಂಬುವ ತಾಣದ ಹೆಸರು ಈ ತಾಣ ಸ್ವಂತವಾಗಿ ಏನನ್ನೂ ಬರೆಯುವುದಿಲ್ಲ, ಪ್ರಕಟಿಸುವುದಿಲ್ಲ. ಕೆಲವೊಮ್ಮೆ ಮೂಲ ಪುಟದಲ್ಲಿರುವ ಶೀರ್ಷಿಕೆಯನ್ನು ಬಿಟ್ಟು ತನ್ನದೆ ಆದ ಹೆಡ್ಡಿಂಗ್ ಅನ್ನು ನಮೂದಿಸಬಹುದಷ್ಟೆ.
India in one Page ಕಲ್ಪನೆಯಲ್ಲಿ ಇತ್ತೀಚೆಗೆ ಆರಂಭವಾದ one.in ತಾಣ ಭಾರತದ ಮುಖ್ಯವಾಹಿನಿಯಿಂದ ಆಯ್ದ ಸುದ್ದಿ ಸೂರುಗಳನ್ನು ಜಾಗರೂಕತೆಯಿಂದ ಆಯ್ದು ಪ್ರಕಟಿಸುತ್ತದೆ. ಈ ತಾಣಕ್ಕೆ ಕನ್ನಡವೂ ಸೇರಿಕೊಂಡಿದ್ದು ಕನ್ನಡದಲ್ಲಿ ಸಾಗುವ ವೆಬ್ ಚಟುವಟಿಕೆಗಳನ್ನು ಒಂದೆಡೆ ಕಲೆ ಹಾಕುವಲ್ಲಿ ನೆರವಾಗುತ್ತದೆ.
ಅಲ್ಲಿಂದ ಇಲ್ಲಿಂದ ಆಯ್ದ ಕೊಂಡಿಗಳಿಗೊಂದು window ತೆರೆಯುವ ತಾಣಗಳು ಇಂಗ್ಲಿಷಿನಲ್ಲಿ ಬೇಕಾದಷ್ಟಿವೆ. ಹಾಗೆಂದು ಇವುಗಳೆಲ್ಲ ಅಗ್ರಿಗೇಟರ್ ಎನಿಸಿಕೊಳ್ಳುವುದಿಲ್ಲ. ಅವುಗಳನ್ನು ವಿಷಯ/ದೇಶ ಆಧರಿಸಿ World/Topic/City-in-One-Page-ಎಂದು-ಬಣ್ಣಿಸಬಹುದು.-ಇವತ್ತು-ಜಾಗತಿಕ-ಮಟ್ಟದಲ್ಲಿ-ಸುದ್ದಿ-ಕೊಂಡಿಗಳಿಗೆ-ಅತ್ಯಂತ-ಹೆಸರುವಾಸಿಯಾದ-ತಾಣ-http://drudgereport.com/
ಡ್ರಡ್ಜರ್ ಅನ್ನು ಮಾದರಿಯಾಗಿ ಇಟ್ಟುಕೊಂಡು ಸಾಗುವ ಒನ್. ಇನ್ ಕನ್ನಡಕ್ಕೆ ನಿಮ್ಮ ನೆರವು, ಪ್ರೋತ್ಸಾಹ ಮತ್ತು ಸಹಭಾಗಿತ್ವ ಬೇಕು. ಪ್ರಕಾಶಕರಾಗಲೀ, ಸಂಪಾದಕರಾಗಲೀ ಅಥವಾ ಓದುಗರೇ ಆಗಲಿ ತಾವು ಕಂಡ ಹಾಟ್ ಅಥವಾ ಕೂಲ್ ಕನ್ನಡದ ಕೊಂಡಿಯನ್ನು http://one.in/kannada/ದಲ್ಲಿರುವ ಫೀಡ್ ಬ್ಯಾಕ್ ಕೊಳವೆ ಮುಖಾಂತರ ಸಲ್ಲಿಸಬೇಕು.
ವಿಷಯ, ವೇದಿಕೆ ಅನಗತ್ಯ ಪುನರಾವರ್ತನೆ ಆಗದಂತೆ ಕನ್ನಡದ ಪುಟಗಳಿಗೆ ಸೂಕ್ತವಾಗಿ ಲಿಂಕುಗಳನ್ನು ಕೊಡುವ ಜವಾಬ್ದಾರಿ ಮತ್ತು ಸಂತೋಷ ನಮ್ಮದು. ವಿಸೂ : ವಿಜಯ ಕರ್ನಾಟಕ ಮುಂತಾದ ಸ್ಟಾರ್ ವ್ಯೂಗಳಲ್ಲಿ ಲಭ್ಯವಾಗುವ, ಟ್ರಾಕ್ ಬ್ಯಾಕ್ ಯುಆರ್ ಎಲ್ ಇಲ್ಲದ ತಾಣಗಳಿಂದ ಸುದ್ದಿ ಹೆಕ್ಕುವುದಿಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications