ಕನ್ನಡ ಪತ್ರಿಕೆಗಳು ಒಂದೇ ಬಳ್ಳಿಯ ಹೂವುಗಳು

ಹಾಗಂತ ಕೈಕಟ್ಟಿ ಕೂಡದೆ ಏನಾದರೂ ಮಾಡುತಿರು ಮಂಕುತಿಮ್ಮ ಎಂಬ ಮಂತ್ರ ಜಪಿಸುವುದು ಮತ್ತು ಮಂತ್ರಕ್ಕೊಂದು ತಂತ್ರ ಜೋಡಿಸುವುದರಲ್ಲಿ ನಿಮ್ಮ ಮೆಚ್ಚಿನ ದಟ್ಸ್ ಕನ್ನಡ ನಿಸ್ಸೀಮ. ನಮ್ಮ ಈ ಪರಿಯ ಪ್ರೀತಿಯ ಕನ್ನಡ ಸಸ್ಯ ಶ್ಯಾಮಲೆ ಈ ದೀಪಾವಳಿಗೆ ಇನ್ನೊಂದು ಫಲ ಕೊಟ್ಟಿದೆ. ಬನ್ನಿ, ಅಂತರ್ ಜಾಲದಲ್ಲಿ ಕನ್ನಡದ ಹೊಸ ದೀಪವೊಂದು ಹತ್ತಿದೆ. ನೋಡಿ.
ಕನ್ನಡದಲ್ಲಿ ಉಸಿರಾಡುವ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಸಂಜೆವಾಣಿ, ಈ ಸಂಜೆ, ಹೊಸದಿಗಂತ, ಗಲ್ಫ್ ಕನ್ನಡಿಗ, ಸಂಯುಕ್ತ ಕರ್ನಾಟಕ, ಕೆಂಡಸಂಪಿಗೆ ಮುಂತಾದ ತಾಣಗಳ ಜತೆಗೆ ನೂರಾರು ಬ್ಲಾಗುಗಳು ತಮ್ಮತಮ್ಮ ಒಲವು ನಿಲುವಿನ ಕನ್ನಡ ಸರಕುಗಳನ್ನು ನಿತ್ಯ ಅಂತರ್ ಜಾಲದಲ್ಲಿ ತೇಲಿ ಬಿಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದೋ ಅಥವಾ ಎರಡನ್ನೋ ನೀವು ನೋಡುತ್ತಿರುತ್ತೀರಿ, ಓದಿರುತ್ತೀರಿ. ತುಂಬ ಸಂತೋಷ.
ಆದರೆ, ಕನ್ನಡದಲ್ಲಿ ಬೆಳಕಾಗುವ ಎಲ್ಲ ತಾಣಗಳನ್ನು ನಿತ್ಯ ಗಮನಿಸಿ ಅವುಗಳಿಂದ ಆರಿಸಿದ ಒದೊಂದು ಸುದ್ದಿ/ ಟಿಪ್ಪಣಿ/ ಅಂಕಣ/ ಲೇಖನಗಳನ್ನು ಒಂದೇ ಪುಟದಲ್ಲಿ ಲೇಪಿಸುವ ಪುಟವೊಂದರ ಕೊರತೆ ಇತ್ತು. ಈ ಕೊರತೆ ತುಂಬುವ ತಾಣದ ಹೆಸರು ಈ ತಾಣ ಸ್ವಂತವಾಗಿ ಏನನ್ನೂ ಬರೆಯುವುದಿಲ್ಲ, ಪ್ರಕಟಿಸುವುದಿಲ್ಲ. ಕೆಲವೊಮ್ಮೆ ಮೂಲ ಪುಟದಲ್ಲಿರುವ ಶೀರ್ಷಿಕೆಯನ್ನು ಬಿಟ್ಟು ತನ್ನದೆ ಆದ ಹೆಡ್ಡಿಂಗ್ ಅನ್ನು ನಮೂದಿಸಬಹುದಷ್ಟೆ.
India in one Page ಕಲ್ಪನೆಯಲ್ಲಿ ಇತ್ತೀಚೆಗೆ ಆರಂಭವಾದ one.in ತಾಣ ಭಾರತದ ಮುಖ್ಯವಾಹಿನಿಯಿಂದ ಆಯ್ದ ಸುದ್ದಿ ಸೂರುಗಳನ್ನು ಜಾಗರೂಕತೆಯಿಂದ ಆಯ್ದು ಪ್ರಕಟಿಸುತ್ತದೆ. ಈ ತಾಣಕ್ಕೆ ಕನ್ನಡವೂ ಸೇರಿಕೊಂಡಿದ್ದು ಕನ್ನಡದಲ್ಲಿ ಸಾಗುವ ವೆಬ್ ಚಟುವಟಿಕೆಗಳನ್ನು ಒಂದೆಡೆ ಕಲೆ ಹಾಕುವಲ್ಲಿ ನೆರವಾಗುತ್ತದೆ.
ಅಲ್ಲಿಂದ ಇಲ್ಲಿಂದ ಆಯ್ದ ಕೊಂಡಿಗಳಿಗೊಂದು window ತೆರೆಯುವ ತಾಣಗಳು ಇಂಗ್ಲಿಷಿನಲ್ಲಿ ಬೇಕಾದಷ್ಟಿವೆ. ಹಾಗೆಂದು ಇವುಗಳೆಲ್ಲ ಅಗ್ರಿಗೇಟರ್ ಎನಿಸಿಕೊಳ್ಳುವುದಿಲ್ಲ. ಅವುಗಳನ್ನು ವಿಷಯ/ದೇಶ ಆಧರಿಸಿ World/Topic/City-in-One-Page-ಎಂದು-ಬಣ್ಣಿಸಬಹುದು.-ಇವತ್ತು-ಜಾಗತಿಕ-ಮಟ್ಟದಲ್ಲಿ-ಸುದ್ದಿ-ಕೊಂಡಿಗಳಿಗೆ-ಅತ್ಯಂತ-ಹೆಸರುವಾಸಿಯಾದ-ತಾಣ-http://drudgereport.com/
ಡ್ರಡ್ಜರ್ ಅನ್ನು ಮಾದರಿಯಾಗಿ ಇಟ್ಟುಕೊಂಡು ಸಾಗುವ ಒನ್. ಇನ್ ಕನ್ನಡಕ್ಕೆ ನಿಮ್ಮ ನೆರವು, ಪ್ರೋತ್ಸಾಹ ಮತ್ತು ಸಹಭಾಗಿತ್ವ ಬೇಕು. ಪ್ರಕಾಶಕರಾಗಲೀ, ಸಂಪಾದಕರಾಗಲೀ ಅಥವಾ ಓದುಗರೇ ಆಗಲಿ ತಾವು ಕಂಡ ಹಾಟ್ ಅಥವಾ ಕೂಲ್ ಕನ್ನಡದ ಕೊಂಡಿಯನ್ನು http://one.in/kannada/ದಲ್ಲಿರುವ ಫೀಡ್ ಬ್ಯಾಕ್ ಕೊಳವೆ ಮುಖಾಂತರ ಸಲ್ಲಿಸಬೇಕು.
ವಿಷಯ, ವೇದಿಕೆ ಅನಗತ್ಯ ಪುನರಾವರ್ತನೆ ಆಗದಂತೆ ಕನ್ನಡದ ಪುಟಗಳಿಗೆ ಸೂಕ್ತವಾಗಿ ಲಿಂಕುಗಳನ್ನು ಕೊಡುವ ಜವಾಬ್ದಾರಿ ಮತ್ತು ಸಂತೋಷ ನಮ್ಮದು. ವಿಸೂ : ವಿಜಯ ಕರ್ನಾಟಕ ಮುಂತಾದ ಸ್ಟಾರ್ ವ್ಯೂಗಳಲ್ಲಿ ಲಭ್ಯವಾಗುವ, ಟ್ರಾಕ್ ಬ್ಯಾಕ್ ಯುಆರ್ ಎಲ್ ಇಲ್ಲದ ತಾಣಗಳಿಂದ ಸುದ್ದಿ ಹೆಕ್ಕುವುದಿಲ್ಲ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications