ದಟ್ಸ್ ಕನ್ನಡದ ಟ್ವೀಟ್ಕನ್ನಡಕ್ಕೆ ಸುಸ್ವಾಗತ

ಇದನ್ನು ಸಾಧ್ಯವಾಗಿಸಿದ್ದು, ದಟ್ಸ್ ಕನ್ನಡದ ಟ್ವೀಟ್ಕನ್ನಡದಲ್ಲಿ. ಟ್ವಿಟ್ಟರ್ ಎಂಬ ಸೋಷಿಯಲ್ ನೋಟ್ವರ್ಕಿಂಗ್ ತಾಣ ಬ್ಲಾಗ್ ಲೋಕದಲ್ಲಿ ಹೊಸ ವ್ಯಾಖ್ಯಾನವನ್ನೇ ಬರೆದಿದೆ. ಆ ಬಳಗಕ್ಕೆ ದಟ್ಸ್ ಕನ್ನಡ ಕೂಡ ಸೇರಿರುವುದು ಹೆಮ್ಮೆಯ ಸಂಗತಿ. ದಟ್ಸ್ ಕನ್ನಡ ಟ್ವೀಟ್ ಬಳಗವನ್ನು ಸೇರುವುದು ಕೂಡ ಅಷ್ಟೇ ಸುಲಭವಾದ ಸಂಗತಿ. ಬಳಗಕ್ಕೆ ಸೇರಿದ ನಂತರ ಟ್ವಿಟ್ಟರ್ ಲೋಕದಲ್ಲಿರುವ ನಿಮಗಿಷ್ಟದವರ ಟ್ವಿಟ್ಟರ್ ತಾಣವನ್ನು ನಿಮ್ಮ ಪಟ್ಟಿಗೆ ಸೇರಿಸಿ, ಹರಟೆ ಹೊಡೆಯಲು ಪ್ರಾರಂಭಿಸಿ.
ಸುಲಭ, ಸುಲಭ, ಸುಲಭ : ಟ್ವೀಟ್ಕನ್ನಡ ಬಳಗ ಸೇರುವುದು ಅತಿ ಸರಳ ಮತ್ತು ಸುಲಭ. ಇಲ್ಲಿ ಯೂಸರ್ ನೇಮ್, ಪಾರ್ವರ್ಡ್ ಮುಂದಾದವುಗಳ ಕಂತ್ರಾಟವೇ ಇಲ್ಲ. Sign in with Twitter ಕ್ಲಿಕ್ಕಿಸಿ Allow ಎಂಬ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಸಾಕು ನೀವು ಟ್ವೀಟ್ಕನ್ನಡ ಬಳಗದ ಸದಸ್ಯರಾಗುತ್ತೀರಿ.
ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಟ್ವಿಟ್ಟರ್ ಹೆಚ್ಚು ಸದ್ದನ್ನು ಮಾಡದೇ ಜನಪ್ರಿಯತೆಯ ಮಜಲನ್ನು ಏರಿದೆ ಮತ್ತು ಏರುತ್ತಿದೆ. 2008ರ ಮೇ ತಿಂಗಳಲ್ಲಿ ಟ್ವಿಟ್ಟರ್ ನಲ್ಲಿ 13 ಲಕ್ಷ ಬಳಕೆದಾರರಿದ್ದರು. ಆದರೆ, ಈಗ ಬಳಕೆದಾರರ ಸಂಖ್ಯೆ 320 ಲಕ್ಷ ದಾಟಿದೆ. ಟ್ವಿಟ್ಟರ್ ಜನಪ್ರಿಯತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.
ತನ್ನ ಬಗ್ಗೆ ಟಾಂಟಾಂ ಮಾಡಿಕೊಳ್ಳದೇ ಬ್ಲಾಗಿಗರಿಗೆ ಅತ್ಯಂತ ಪ್ರಿಯವಾಗಿರುವ ಟ್ವಿಟ್ಟರ್ ನಲ್ಲಿ ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಮಾಹಿತಿಯನ್ನು ರವಾನಿಸುವುದು ಸಾಧ್ಯವಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ನಡೆಸುವ ಬಳಕೆದಾರರೇ ಹೆಚ್ಚಾಗುತ್ತಿರುವುದು ಅಂಕಿಸಂಖ್ಯೆ ಸಾಬೀತುಪಡಿಸಿದೆ. ಭಾರತದಲ್ಲಿ ಇಂಗ್ಲಿಷ್ ಬಳಸುವ ಟ್ವಿಟ್ಟಿಗರ ಸಂಖ್ಯೆ ಶೇ.12ರಷ್ಟು ಮಾತ್ರ ಎಂಬುದನ್ನು ಗಮನಿಸಿದರೆ, ಪ್ರಾದೇಶಿಕ ಭಾಷಾ ಬಳಕೆದಾರರ ವಿಸ್ತಾರದ ಅರಿವಾಗುತ್ತದೆ.
ಟ್ವಿಟ್ಟರ್ ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವನ್ನು ಪ್ರಥಮ ಬಾರಿಗೆ ಅಳವಡಿಸಿದ ಹೆಮ್ಮೆ ಒನ್ ಇಂಡಿಯಾದ್ದು. ಹಾಗೆಯೇ, ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಕೂಡ ಟ್ವಿಟ್ಟರನ್ನು ಅಳವಡಿಸಿದ ಸಾಧನೆ ಒನ್ ಇಂಡಿಯಾದ್ದಾಗಲಿದೆ. ನೀವು ಇಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯಬಹುದು. ಟ್ವಿಟ್ಟರ್ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಲೇಖನಗಳು ಬಂದಿವೆ. ಆದರೆ, ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ನೀಡುವ ಪ್ರಥಮ ಟ್ವಿಟ್ಟರ್ ಅಪ್ಲಿಕೇಷನ್ ಇದಾಗಲಿದೆ ಎಂಬುದು ಕೂಡ ಹೆಮ್ಮೆಯ ಸಂಗತಿ.
ಟ್ವಿಟ್ಟರ್ ನಲ್ಲಿ ಕನ್ನಡ ಬಳಸುವ ಸುಖ, ಸಂತಸ ನಿಮ್ಮದಾಗಲಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications