ಇಂಡೋನೇಷ್ಯಾದ ಬಾರೋಂಗ್ ಎಂಬ ಅದ್ಭುತ!
ಬಾಲಿಯಲ್ಲಿ ಎಲ್ಲವೂ ಭಾರತದಲ್ಲಿ ಇದ್ದಂತೆ ಹೆಸರುಗಳು. ಅಲ್ಲಿನ ಜನರ ನಡವಳಿಕೆ, ಮಾತು, ಓಂ ಸ್ವಸ್ತಿ ಅಸ್ತು ಎಂದು ಮಾತಾಡುವ ಜನರ ಹಾಡು ಹಾಗೂ ನೃತ್ಯ ನೋಡುವ ಮನಸ್ಸಾಯಿತು.
ನಾ ಬಾರ್ಸಿಲೋನಾದಲ್ಲಿದ್ದಾಗ ಗಮೆಲಾನ್ ಎಂಬ ಇಂಡೋನೇಷ್ಯಾ ಸಂಗೀತ ಕೇಳಿದ್ದೆ. ಸುಮಾರು ಸಲ ಅವರ ಸಂಗೀತ ತುಂಬಾ ಮುದ ಕೊಡುತ್ತಿತ್ತು. ಈ ಸಂಗೀತಕ್ಕೆ ಪಾಶ್ಚಾತ್ಯ ಸಂಗೀತದವರು ನೋಟ್ಸ್ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದರು. ಅದ್ರೂ ಬಹಳ ಕಷ್ಟವಾದ ಕೆಲಸ ಎಂದು ಪಾಪ ಅಲವತ್ತುಕೊಳ್ಳುತ್ತಿದ್ದರು.
ಆದ್ರೂ ಈ ಸಂಗೀತಕ್ಕೆ ಅವರ ನೃತ್ಯ ಹೇಗಿರುತ್ತದೆ ಎಂದು ನೋಡಲು ನಾ ಕಾತುರಳಾಗಿದ್ದೆ. ಬಾರೋಂಗ್ ನಮ್ಮ ಬಹು ರಂಗ್ ಶಬ್ದದಿಂದ ಬಂದಂತಹದ್ದು. ಬಾಲಿಯನ್ನು 1 ಅಥ್ವಾ 2ನೇ ಶತಮಾನದಲ್ಲಿ ಹಿಂದೂ ರಾಜರು ಆಳುತ್ತಿದ್ದರು. ನಂತರ ಬಂದ್ದದ್ದೆ ಬೌದ್ಧರು ಇಬ್ಬರ ಸಂಸ್ಕೃತಿಗಳೆಲ್ಲ ಬೆರಕೆಯಾಗಿ ಅವರ ಆಚರಣೆಗಳಾಗಿವೆ. ನಮ್ಮ ವಿಷ್ಣುವಿಗೆ ಥೇಟ್ ಬೌದ್ಧರ ಕಿರೀಟ ಹಾಕಿ ಖುಷಿಪಡುತ್ತಾರೆ. ಹೀಗೆ ಇದರ ಮಿಶ್ರಣ ಕಥೆಯೇ ಬಾರೋಂಗ್.

ಬಾರೋಂಗ್ ಎಂದರೆ ಇಂಡೋನೇಷ್ಯಾ ಭಾಷೆಯಲ್ಲಿ ಕರಡಿ ಎಂದರ್ಥ. ಈ ಪ್ರಕಾರ ಸುಮಾರು ನಮ್ಮ ಭೂತ ಕೋಲದ ಆಚರಣೆಯ ಹಾಗಿದೆ. ದೈವ ಹಾಗೂ ದೆವ್ವದ ವಿಂಗಡಣೆ, ಪ್ರತಿ ಮನೆಗೂ ಅಥ್ವಾ ಊರಿಗೂ ಇರುವ ದೈವದ ನೇಮ ನಿಯಮಗಳು ಇಲ್ಲಿ ಪ್ರಮುಖವಾಗಿದೆ.
ಇಲ್ಲಿ ಬಾರೋಂಗ್ ಎಂಬುದು ಒಂದು ದೈವದ ಹೆಸರು. ಇದು ಸಿಂಹ ಮುಖದ ಒಳ್ಳೆಯ ದೈವ. ಈ ಬಯಲಾಟದಲ್ಲಿ ಕುಂತಿ, ಸಹದೇವ, ಕಾಳಿ ಮಾತೆ ಹಾಗೂ ಕೋತಿ ಮುಖದ ದೈವ (ಹನುಮಂತ) ಎನ್ನಬಹುದು. ಇಲ್ಲಿನ ಕೆಟ್ಟ ದೆವ್ವ rangDa. ಈಕೆ ಒಂದು ಮಾಟಗಾತಿ, ಅವಳು ರೈತರಿಗೆ ತೊಂದರೆ ಕೊಡುತ್ತಿದ್ದಳು. ಅವಳ ಮಗಳಿಗೆ ಇವಳ ಭಯದಿಂದ ಮದುವೆಯ ಭಾಗ್ಯ ಸಹ ಬಂದಿರಲ್ಲಿಲ್ಲ. ಹೀಗೆ ಕೋಪದಿಂದ ಹೆಣ್ಣುಮಕ್ಕಳನ್ನು ಅಪಹರಿಸಿ ಕಾಳಿಗೆ ಬಲಿ ಕೊಡುತ್ತಿದ್ದಳು.

ಇದು ಒಂದು ಭಾಗದ ಕಥೆಯಾದರೆ ಮತ್ತೊಂದು ಭಾಗದಲ್ಲಿ ಕುಂತಿಯ ಪುತ್ರ ಸಹದೇವನ್ನನ್ನ ಅಪಹರಿಸಿದ್ದಾಗ, ಅವನ್ನನ್ನು ಕೊಲ್ಲಲ್ಲು ಯತ್ನಿಸುವಾಗ, ಹನುಮಂತ ಬರುವುದು, ಕಾಳಿ ಅವತಾರವೆತ್ತಿ ಬಾರೋಂಗ್ ಸಹಾಯದಿಂದ ಈ ಕೆಟ್ಟದ್ದನ್ನು ಸಂಹರಿಸುವುದು ಇಂತೆಲ್ಲಾ ಕಥೆ ನಡೆಯುತ್ತಿತ್ತು.
ಭಾರತೀಯರಿಗೆ ತ್ರೇತಾಯುಗ, ದ್ವಾಪರಯುಗದ ಮಿಶ್ರಣ ಒಮ್ಮೆ ಸಹಿಸಿಕೊಳ್ಳುವುದು ಸಹ್ಯವಾಗಿರಲ್ಲಿಲ್ಲ. ವಿಚಿತ್ರವೆನ್ನಿಸುತ್ತಿತ್ತು. ಒಮ್ಮೊಮ್ಮೆ ನಮ್ಮ ಇತಿಹಾಸವನ್ನ ಇಷ್ಟು ತಮಾಷೆಯಾಗಿ ತೋರಿಸುತ್ತಿದ್ದಾರಲ್ಲ ಎಂದು ಅಸಹ್ಯವೂ ಆಯಿತು. ಅಲ್ಲಲ್ಲಿ ಹಾಸ್ಯ ಸನ್ನಿವೇಷವನ್ನ ಸೇರಿಸೋದಕ್ಕೆ ಏನೇನ್ನನ್ನೋ ತರುತ್ತಿದ್ದರು. ಇತಿಹಾಸಕ್ಕೂ ಅದಕ್ಕೂ ಸಂಬಂಧವೇ ಇರುತ್ತಿರಲ್ಲಿಲ್ಲ. ತೀರ ಹೊರಗಿರುವವರಿಗೆ ಮೆಚ್ಚಿಸಲು ತಮ್ಮದನ್ನೇ ಮರೆತ್ತಿದ್ದಾರಲ್ಲ ಎಂದು ಖೇದವೂ ಆಯಿತು. ತೀರ ತಮ್ಮನ್ನ ತಾವೆ ಮಾರಿಕೊಂಡ ಸ್ಥಿತಿ ಅಂತಲೂ ಅನ್ನಿಸಿತು. ಬಾಲಿ ಮತ್ತೊಂದು ಗೋವಾ ಆಗ್ತಿದ್ಯಾ ಅಂತಲೂ ಭಯ ಆಯ್ತು.

ಇದಕ್ಕೆ ಪೂರಕವಾಗಿ ಇದ್ದ ಸಂಗೀತ ಇನ್ನೂ ಹಾಳಾಗಿಲ್ಲ ಅನ್ನೋದೊಂದೇ ಖುಷಿ. ಗೆಮಾಲಾನ್ ಸಂಗೀತದಲ್ಲಿ ಸುಮಾರು 8 ಥರಹದ ವಾದ್ಯಗಳಿರುತ್ತದೆ. ಎಲ್ಲವೂ ಬೊಂಬು, ಕೊಳಲು, ವಿಧವಿಧವಾದ ಘಂಟೆಗಳಿಂದ ತುಂಬಿರುತ್ತದೆ. ಇದು ಜನಪದ ಸಂಗೀತವೆಂದರೆ ಸರಿ. ಬೊನಾಂಗ್ ಜಲತರಂಗದ ಹಾಗೆ ಇರುವ ಒಂದು ವಾದ್ಯ, ಗೆಂಡರ್ ನಾಲ್ಕೈದು ಕೊಳಲುಗಳನ್ನ ಸೇರಿಸಿ ಮಾಡಿದ ವಾದ್ಯ, ಗೊಂಗ್ ಘಂಟೆಗಳಿಂದ ಮಾಡಿರುವ ವಾದ್ಯ, kendang ಹೆಚ್ಚು ಕಡಿಮೆ ಮ್ರುದಂಗವೇ.

ಸುಮಾರು ಹಾಡುಗಾರರು ಸಹ ಇಲ್ಲಿರುತ್ತಾರೆ. ಗಂಡು ಮಕ್ಕಳು ವಾದ್ಯ, ಹೆಣ್ಣು ಮಕ್ಕಳು ಹಾಡುಗಳನ್ನ ಹಾಡುತ್ತಾರೆ. ಬಾಯಿಂದ ಬಾಯಿಗೆ ಸಂಗೀತವನ್ನ ಕಲಿಸುವ ಪದ್ಧತಿ ಇಲ್ಲಿದೆ. ನಮ್ಮ ಸಂಗೀತವೂ ಹಾಗೆಯೇ ಇದ್ದದ್ದು ನಿಮಗೆ ನೆನಪಿರಬಹುದು. 19ನೇ ಶತಮಾನದಿಂದ ಜನ ಸಂಗೀತವನ್ನ ಪುಸ್ತಕದ ರೂಪದಲ್ಲಿ ಬರೆಯೋದಕ್ಕೆ ಶುರು ಮಾಡಿದ್ದರು. ಯೋಗಕರ್ತ ಮತ್ತು ಸುರಕರ್ತ ಎಂಬುವರ ಕೊಡುಗೆ ಇದರಲ್ಲಿ ಅಪಾರ. ಪಾಶ್ಚಾತ್ಯರ ದಾಳಿಯಲ್ಲಿ ತಮ್ಮ ಸಂಗೀತ ಎಲ್ಲಿ ನಲುಗುವುದೋ ಎಂಬ ಭಯದಲ್ಲಿ ಇದೆಲ್ಲವನ್ನೂ ಬರೆಯಲು ಶುರು ಮಾಡಿದರು. ಹಿಂದೂಗಳ ಮನೆಮಾತಾಗಿದ್ದ ಈ ಸಂಗೀತ ನಂತರ ಕ್ರಿಶ್ಚಿಯನ್ನರ ಮನೆಯಲ್ಲಿಯೂ ಇದು ಮೊಳಗಲು ಶುರು ಮಾಡಿತು. ಕಡೆಗೆ ಇಂಡೋನೇಷಿಯನ್ನದ ಸಂಗೀತದ ಪ್ರತೀಕವಾಯಿತು. ಇದರಲ್ಲಿನ ಪಾವಿತ್ರ್ಯತೆ ಇನ್ನೂ ಹಾಳಾಗಿಲ್ಲ ಅನ್ನೋದೊಂದೆ ಖುಷಿಯ ವಿಚಾರ.

ಮುಂಚಿನ ಕಾಲದಲ್ಲಿ ಒಂದು ಪಂಗಡಕ್ಕೇ ಸೀಮಿತವಾಗಿದ್ದ ಇವೆಲ್ಲವೂ ಪ್ರವಾಸೋದ್ಯಮದಿಂದ ಎಲ್ಲರಿಗೂ ತೆರೆದು ಕೊಂಡಿದೆ ಎಂಬುವುದು ಒಂದು ಒಳ್ಳೆಯ ವಿಷಯ. ನಮ್ಮಷ್ಟೆ ಅಸಮಾನತೆ, ಅಸಹಾಯಕತೆಯನ್ನ ಈ ದೇಶವೂ ಹೊದ್ದುಕೊಂಡಿದೆ. ಆದರೂ ದೇಶ ಪ್ರೇಮ ಹಾಗೂ ನಾಯಕ ಪ್ರೇಮವನ್ನ ವಿಂಗಡಿಸಿ ಮಾತಾಡುವಷ್ಟು ತಲೆ ಇದೆ. ಅಲ್ಲಿ 300ಕ್ಕೂ ಹೆಚ್ಚು ಭಾಷೆಗಳನ್ನ ಮಾತಾಡುತ್ತಾರೆ, ನಮ್ಮಂತೆಯೇ ಇಂಡೋನೇಷಿಯನ್ ಭಾಷೆಯನ್ನ ಹೇರಲಿಕ್ಕೆ ಪ್ರಯತ್ನ ಪಡುತ್ತಿದ್ದಾರೆ. ರಸ್ತೆಗಳು ಸ್ವಚ್ಛವಾಗಿದೆ, ಮನಸ್ಸು ಇನ್ನೂ ಶುಭ್ರವಾಗಿದೆ. ನಮ್ಮಂತೆಯೇ ಇನ್ನೂ ದೇಶದಲ್ಲಿ ಲಂಚಗುಳಿತನ ಇದೆ. ಅದನ್ನ ಉದ್ಧರಿಸುವ ದೇವರು ಬರುತ್ತಾನೆಂದು ಕಾಯುತ್ತಲೂ ಇದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದ ಅಕ್ಕನೋ, ತಂಗಿಯೋ ಹಾಗೆ ಇಂಡೋನೇಷ್ಯಾ ಕಾಣಿಸುತ್ತದೆ. ಈ ವಾರಕ್ಕೆ ಬಾಲಿ ಕಥನ ಸಂಪೂರ್ಣ. ಮುಂದಿನ ಕಂತಲ್ಲಿ ಯಂತ್ರದ ಕಥೆಗಳು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications