ಕಾಲಯಂತ್ರದಿ ಕುಳಿತು ಶತರುದ್ರೀಯ ಕವಿ ಪರ್ಣಕುಟಿಗೆ ತೆರಳೋಣ
ಶತರುದ್ರೀಯವನ್ನು ಋಷಿ ಮೊದಲಬಾರಿಗೆ ಮನಗಂಡ ಆ ಕಾಲಕ್ಕೆ ಒಮ್ಮೆ ಹಿನ್ನಡೆದು ಹಾರಿ, ಆ ದ್ರಷ್ಟಾರರ ಸಂವೇದನೆಯ ಹಿನ್ನೆಲೆ ಪರಿಸರಗಳನ್ನು ಅನುಭವಿಸಿ ಬರಲು ಕಾಲಯಂತ್ರದಲ್ಲಿ ಕುಳಿತು ಪಯಣಿಸೋಣ:
ಪ್ರಕೃತಿಯ ಅದಮ್ಯ ಚೈತನ್ಯಗಳ ಅಭಿವ್ಯಕ್ತಿಗೆ ಬೆರಗಾಗಿ ಮಾನವ ಅವನ್ನು ಗೌರವಿಸುತ್ತಿದ್ದ ಕಾಲಕ್ಕೆ ತಲುಪಿದ್ದೇವೆ. ಆ ಮೂಲಭೂತ ತತ್ವಗಳ ಆಳ, ಹರವು, ಶಕ್ತಿ, ಪ್ರಭಾವವನ್ನು ಅರಿಯಲು ಚಿಂತಕ ಹವಣಿಸುತ್ತಿದ್ದ ಸಮಯ. ಈಗ ಅಂಥ ಕವಿಯಾಬ್ಬನಿಗೆ ಗಗನವನ್ನೇ ಬೇಧಿಸಿಕೊಂಡು ಕೆಳಗಿಳಿದ ‘ರುದ್ರ’ ಕಾಣಿಸುತ್ತಾನೆ:
ನಿನ್ನ
ನೋಡಿದೆ,
ಹೌದು,
ಇಳಿವುದನದೂ
ಕಂಡೆ,
ಬಾನಿನಿಂದಲೆ
ಬುವಿಗಿಳಿವುದನು
ಕಣ್ಣಾರೆ
ಕಂಡೆ;
ಎರಗಿ
ಬಂದಪ್ಪಳಿಸುವ
‘ರುದ್ರ’
ನಿನ್ನನ್ನು
ಕಂಡೆ-
ಕರಿ
ಕೊರಳ,
ಗುಂಗುರು
ಕುರುಳುಳ್ಳವನೆ,
ನಾ
ಬೆದರಿದೆ!
।।
1
।।
ಇಳೆಯ ಮೇಲಡಿಯಿಟ್ಟ ತಾ ನಡೆದು ಹೊರಟೇ ಹೊರಟ;
ಅಗೊ ನೋಡಿ, ನನ್ನವರೇ, ಆ ತಾಮ್ರ ವರ್ಣದ ಉರಿಯ
ಕಂಡು ಮರೆಯಾಗುತಿಹ ಕರಿ-ಕೊರಳ ಸೋಜಿಗದ ಪರಿಯ! ।। 2 ।।
ಬಾ
ರುದ್ರ,
ನೀ
ಯಾರ
ಹಿಂಸಿಸಲು
ಬೇಡ,
ಬಾ;
ಎಲ್ಲ
ರೋಗಕೆ
ಮದ್ದು
ನೀನಾಗಿ
ಬಾರಾ!
ಕೊಚ್ಚಿ
ಕೊಂಡೊಯ್ಯುವ
ಬಿರುಗಾಳಿ
ನಿದ್ದೆಯನು
ಕದ್ದಿತಲ್ಲ,
ಜಾರಿ
ಕರಗಲಿ
ಅದು
ತೀರ
ಪೂರ!
।।
3
।।
(-ನೀಲರುದ್ರ
ಉಪನಿಷತ್
1-3)
ಈ ದಿವ್ಯ ದೇವನ ಕೈಯಲ್ಲಿ ಇರುವುದೇನು? ವಜ್ರಾಯುಧ! ಹಾಗಾಗಿ, ಇವನು ವಜ್ರಬಾಹು. ಇವನಿಗೆ ಕಾಡು, ಮಲೆ, ಬೆಟ್ಟದ ಕೋಡು, ಮರದ ತುದಿಗಳೆಂದರೆ ಅಕ್ಕರೆ; ಅದಕ್ಕೇ ಇವನಿಗೆ ‘ಪರಮೇ ವೃಕ್ಷೇ ಆಯುಧಂ ನಿಧಾಯ (=ಇರಿಸಿ), ಕೃತ್ತಿಂ ವಸಾನ ಆ ಚರ’ (ವಾ. ಸಂ. 16.51) ಎಂದು ಕೇಳಿಕೊಳ್ಳುವುದು! ಕೋಪ ಬಂದಾಗ ಪ್ರಾಣಿಗಳನ್ನು ಕೊಂದಾನು, ಮನುಷ್ಯರನ್ನೂ ಸಹ ಹಿಂಸಿಸಿಯಾನು! (ವಾ. ಸಂ. 16.16). ಇವನ ಬೆನ್ನು ಕೆಂಪು, ಹೊಟ್ಟೆ ನೀಲಗಪ್ಪು, (‘ನೀಲಂ ಅಸ್ಯ ಉದರಂ, ಲೋಹಿತಂ ಪೃಷ್ಟಂ’- ಅಥರ್ವ ವೇದ 15. 7); ಹೊಟ್ಟೆ ಕೆಳಗಾಗಿ ಮಲಗೆದ್ದ ಮೇಲೆ ಬಿಟ್ಟ ಗುರುತೆಲ್ಲ ಸುಟ್ಟ ಕಪ್ಪು! ಇವನು ಬಂದು ಹೋದನೆಂದರೆ, ದೈವ ವೈದ್ಯನೊಬ್ಬ ಬಂದು ಔಷಧಿಯಾಂದನ್ನೇನೋ ಚಿಮುಕಿಸಿ ಗಿಡ ಮರ ನೆಲ ಹೊಲಗಳಿಗೆಲ್ಲ ಹೊಸತನ ತುಂಬಿ ಹೋದಂತೆ! (‘ದೈವ್ಯೋ ಭಿಷಕ್’ - ವಾ ಸಂ 16.5). ಈಗ ಹೇಳಿ ಈ ಒಗಟಿಗೆ ನಿಮ್ಮ ಉತ್ತರವೇನು! ಈ ‘ರುದ್ರ’ ಬರಸಿಡಿಲಲ್ಲದೆ ಇನ್ನೇನು?
***
ಪರಶಿವನ ಮಹಾ ಮಜ್ಜನಕ್ಕೆ ಮೊದಲು ಒಂದು ಧ್ಯಾನಶ್ಲೋಕದಿಂದ ವೈದಿಕರು ನ್ಯಾಸಮಾಡುತ್ತಾರಲ್ಲ, ಅದು ನಮಗೆ ಸಹಾಯ ಮಾಡುತ್ತದೆ :
ಪಾತಾಳದಿಂದೊಡೆದು
ಆಗಸದ
ತುದಿ
ಮುಟ್ಟಿ
ಈ
ಭುವನವೆಲ್ಲವನೂ
ಬ್ರಹ್ಮಾಂಡವನೇ
ಬೆಳಗುತಿಹ
ಶುದ್ಧ
ತೇಜೋಮಯ
ಸ್ಫಟಿಕ
ಲಿಂಗವ
ನೆನೆದು
ಹೃದಯದಲ್ಲಿ,
ಪೂರ್ಣಚಂದ್ರನ
ಅಮೃತ
ಬಿಂದುಗಳು
ತೋಯಿಸುವಂತೆ
ಎಡೆ
ಬಿಡದೆ
ನಾನಿಂತು
ಈ
ನೀರ
ಧಾರೆಯನ್ನೆರೆಯುವೆನು
ರುದ್ರಾನುವಾಕುಗಳ
ಜಪಿಸಿ,
ಹರಕೆಗಳ
ಬಿನ್ನವಿಸಿ,
ಶಿವನ
ಶಿರದಿ
!
‘ಅವನ’
ಗುಣಗಾನ
ಮಾಡಬೇಕಾದರೂ
ನಮಗೆ
ವಿಷಯದ
ಬಗ್ಗೆ
ಸರಿಯಾದ
ತಿಳುವಳಿಕೆ
ಬೇಕಲ್ಲ
!
ಆ
ಕಾರಣಕ್ಕಾಗಿಯೇ,
ಶತರುದ್ರೀಯದ
ಕವಿ
ಮೊಟ್ಟ
ಮೊದಲೇ
ಅವನನ್ನೇ
ಬೇಡಿಕೊಂಡು
ಬಿಡುತ್ತಾನೆ
:
‘‘
ಹೇ
ರುದ್ರ,
ನಿನ್ನದು
ಅಘರ
ಮಂಗಳಕರ
ಶರೀರ
;
ಪಾಪ
ವಿರೋಧೀ
ಆತ್ಮ
ಜ್ಞಾನವುಂಟು
ಮಾಡುವವ
ನೀನು;
ನಾವಾಡುವ
ಮಾತಿನಲ್ಲಿ
ಇದ್ದುಕೊಂಡೇ
ನಮ್ಮನ್ನು
ಜ್ಞಾನಸಂಪನ್ನರನ್ನಾಗಿ
ಮಾಡು
!
ನಮಗೆ
ಸುಖಕರನಾಗು!
’’(‘‘
ಯಾ
ತೇ
ರುದ್ರ,
ಶಿವಾ
ತನೂರ್
ಅಘೋರಾ,
ಅಪಾಪಕಾಶಿನೀ
।
ತಯಾ
ನಸ್
ತನುವಾ
ಶಂ
ತಮಯಾ
ಗಿರಿಶಂತ,
ಅಭಿಚಾಕಶೀಹಿ।।
’’)