ಆ ಪೋರ ತೋರಿದ ಕಾಳಜಿ ಪ್ರಧಾನಿ ತೋರಿದ್ದರೆ?

ಇದನ್ನು ನಾಚಿಕೆಗೇಡು ಅನ್ನೋಣವಾ, ನಮ್ಮ ಕರ್ಮ ಅನ್ನೋಣವಾ, ಈಗಲಾದರೂ ತೀರ್ಪು ಬಂದಿದ್ದು ನಮ್ಮ ಪುಣ್ಯ ಅನ್ನೋಣವಾ, ಗೊತ್ತಾಗುತ್ತಿಲ್ಲ. ನೋಡಿ, ಇದೆಂಥ ವಿಚಿತ್ರ ಅಂದ್ರೆ, ಸುಮಾರು ಇಪ್ಪತ್ತು ಸಾವಿರ ಮಂದಿ ಮಾರಣಹೋಮಕ್ಕೆ ಕಾರಣನಾದ ಪಾಪಿ ವಾರೆನ್ ಆಂಡರ್ಸನ್ಗೆ ಶಿಕ್ಷೆಯೇ ಆಗಿಲ್ಲ. ಆತ ಅಮೆರಿಕದಲ್ಲೆಲ್ಲೋ ಆರಾಮಾಗಿದ್ದಾನೆ. ಇಪ್ಪತ್ತೈದು ವರ್ಷಗಳ ವಿಚಾರಣೆ ನಡೆಸಿ ಸುಮಾರು 175 ಸಾಕ್ಷ್ಯಗಳನ್ನು ಪರಿಶೀಲಿಸಿ, ಮೂರೂವರೆ ಸಾವಿರ ದಾಖಲೆಗಳನ್ನು ಕೂಲಂಕಷವಾಗಿ ಪರಾಮರ್ಶಿಸಿದ ಬಳಿಕ ನ್ಯಾಯಾಲಯ ನೀಡಿದ ತೀರ್ಪಿನಂತೆ ಎರಡು ವರ್ಷ ಸಾದಾ ಜೈಲುವಾಸ ಹಾಗೂ ಲಕ್ಷ ರೂ. ದಂಡದ ಶಿಕ್ಷೆ ಪಡೆದ ಎಂಟು ಮಂದಿ ಈಗ ಜಾಮೀನು ಪಡೆದು ಆರಾಮಾಗಿದ್ದಾರೆ. ಈ ಅನಿಲ ದುರಂತದಲ್ಲಿ ಸಂತ್ರಸ್ತರಾದ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ತಲಾ ಹದಿನೈದು ಸಾವಿರದಷ್ಟು ಪರಿಹಾರ ಪಡೆದು ಇಂದಿಗೂ ಅತ್ಯಂತ ದುರ್ಬರ ಹಾಗೂ ದಯನೀಯ ಬದುಕನ್ನು ಸಾಗಿಸುತ್ತಿದ್ದಾರೆ. ಇದೆಂಥ ಘೋರ ಅನ್ಯಾಯ? ಇದೆಂಥ ನಾಚಿಕೆಗೇಡಿನ ಸಂಗತಿ?
ಭಾರತದಂಥ ದೇಶದಲ್ಲಿ ಮಾತ್ರ ಹೀಗಾಗಲು ಸಾಧ್ಯ! ಭೋಪಾಲ್ ಅನಿಲ ದುರಂತ ಇಡೀ ದೇಶದ ಬಂಡವಾಳವನ್ನೇ ಬೊಕ್ಕಬರಿದು ಮಾಡಿದೆ. ಇದು ಆ ದುರ್ಘಟನೆಯಲ್ಲಿ ಮಡಿದವರ ಹಾಗೂ ಸಂತ್ರಸ್ತರಾದವರಿಗಷ್ಟೇ ಅನ್ವಯವಾಗುವ ವಿಷಯವಲ್ಲ. ಇಡೀ ದೇಶದ ನೈತಿಕತೆಯ ಪ್ರಶ್ನೆ. ಭಾರತದಲ್ಲಿ ಏನೇ ಅವ್ಯವಹಾರ ಮಾಡಿ ಸುಲಭವಾಗಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡು ಬಚಾವ್ ಆಗಬಹುದೆಂಬುದನ್ನು ನಾವೇ ಇಡೀ ಜಗತ್ತಿಗೆ ಹೇಳಿದಂತಾಗಿದೆ. ಹಾಗೆ ನೋಡಿದರೆ ಇದು ಪ್ರತಿ ಪ್ರಜೆಯೂ ನೈತಿಕವಾಗಿ ದಿವಾಳಿಯಾದ ಕ್ಷಣವಿದು.
ದುರಂತಕ್ಕೆ ಕಾರಣನಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ಯಾವಾಗ ಅಮೆರಿಕಕ್ಕೆ ಪರಾರಿಯಾದನೋ ಅಲ್ಲಿಗೇ ಈ ಪ್ರಕರಣ ಸತ್ತುಹೋಗಿತ್ತು. ಆಗಲೇ ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗಿತ್ತು. ಆದರೂ ನಮ್ಮ ನ್ಯಾಯ ವ್ಯವಸ್ಥೆ ಏನೋ ಕಡಿದುಕಟ್ಟೆ ಹಾಕಿಬಿಡಬಹುದು ಎಂಬ ಭ್ರಮೆ ಕೆಲವರಿಗೆ ಇತ್ತು. ಈಗ ಅದೂ ಮಣ್ಣು ಪಾಲಾದಂತಾಗಿದೆ. ಅಷ್ಟರಮಟ್ಟಿಗೆ ಈಗಾಗಲೇ ಸತ್ತವರನ್ನು ಪುನಃ ಎಬ್ಬಿಸಿದಂತಾಗಿದೆ. ಪ್ರಾಯಶಃ ಈ ಪ್ರಕರಣದ ತೀರ್ಪು ಬರುವುದಕ್ಕೆ ಇನ್ನೂ ಇಪ್ಪತ್ತೈದೋ, ಐವತ್ತೋ ವರ್ಷ ಸಂದಿದ್ದರೆ, ಯಾರಿಗೂ ಬೇಸರವಾಗುತ್ತಿರಲಿಲ್ಲ. ಇಂದಲ್ಲ, ನಾಳೆ ಉತ್ತಮ ತೀರ್ಪು ಬರಬಹುದೆಂದು ಅಂದುಕೊಳ್ಳುತ್ತಲೇ ಇರಬಹುದಾಗಿತ್ತು. ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಕರಕರ ಮಾಡುತ್ತಿರಬಹುದಾಗಿತ್ತು. ಆದರೆ ಈಗ ಹೊರಬಿದ್ದಿರುವ ತೀರ್ಪು ಅನಿಲ ದುರಂತಕ್ಕಿಂತಲೂ ಭಯಂಕರವಾಗಿದೆ. ಲಂಕೆಗೆ ಬೆಂಕಿ ಬಿದ್ದಾಗ ಹನುಮಪ್ಪ ಹೊರಗೆ' ಎಂಬಂತೆ ಆಂಡರ್ಸನ್ ಈಗ ತನಗೇನೂ ಸಂಬಂಧವೇ ಇಲ್ಲ ಎಂಬಂತೆ ಆರಾಮಾಗಿದ್ದಾನೆ. ಇಪ್ಪತ್ತು ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡರೂ ಆತನ ಕೂದಲು ಕೊಂಕಿಲ್ಲ. ಅವನ ರಟ್ಟೆ ಹಿಡಿದು ಭಾರತಕ್ಕೆ ಎಳೆದುಕೊಂಡು ಬರುವಂತೆ ಮಾಡಲು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಾರೂ ಪ್ರಯತ್ನಿಸಲಿಲ್ಲ.
ಅದಕ್ಕೇ ಹೇಳಿದ್ದು ನಮಗೆ ನಾಚಿಕೆಯಾಗಬೇಕು ಎಂದು. ಈಗ ತೀರ್ಪು ಹೊರಬಿದ್ದಿದೆ. ಆಂಡರ್ಸನ್ನನ್ನು ಭಾರತಕ್ಕೆ ಕರೆತರುತ್ತೇವೆ, ನಮ್ಮ ಕಾನೂನಿನ ಕೈ ಅಮೆರಿಕದಲ್ಲಿರುವ ಅವನನ್ನು ಹಿಡಿದು ಎಳೆದು ತರುವಷ್ಟು ಉದ್ದ ಹಾಗೂ ಗಟ್ಟಿಯಾಗಿದೆಯೆಂದು ಕಾಂಗ್ರೆಸ್ ನಾಯಕರು, ಮಂತ್ರಿಗಳೆಲ್ಲ ಬೊಗಳೆ ಬಿಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಆಗದ ಕೆಲಸವನ್ನು ಈಗ ಮಾಡಬಹುದೆಂದು ನಂಬಲು ಯಾರಿಗೂ ತಲೆ ಕೆಟ್ಟಿಲ್ಲ. ಈಗ ಒಬ್ಬೊಬ್ಬರೂ ಹೇಳುತ್ತಿರುವುದನ್ನು ಕೇಳಿಸಿಕೊಂಡರೆ ಹೇಸಿಗೆಯಾಗುತ್ತದೆ, ಸಾವಿರ ಚೇಳು ಕಡಿದಂತಾಗುತ್ತದೆ.
ಆ ದಿನ ಏನಾಯಿತೆಂಬುದು ಗೊತ್ತಿದೆಯಲ್ಲ? »
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications