ವೃಷಭ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಗುರುಬಲವಿಲ್ಲದೇ ವಿಲಿವಿಲಿ ಒದ್ದಾಡುವಂತಾಗಿರುವ ಪರಿಸ್ಥಿತಿಯಲ್ಲಿರುವ ವೃಷಭ ರಾಶಿಯವರು ಮೊದಲು ಸಹನೆ, ತಾಳ್ಮೆ ಹೆಚ್ಚಿಸಿಕೊಳ್ಳಲು ಈ ವರ್ಷ ಪ್ರಯತ್ನಪಡಬೇಕು. ಆಗಸ್ಟ್ ನಂತರ ಗುರುಬಲ ಬರುವುದರಿಂದ ಸೂಪರ್ ಎನ್ನಿಸುವಂತೆ ಜೀವನಶೈಲಿ ಬದಲಾಗುತ್ತದೆ. ಆಗ ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಅಲ್ಲಿಯವರೆಗೂ ಕಾಯ್ದರೊಳ್ಳೆಯದು.
ಮುಂದೆ ಅಂದರೆ 2017ರಲ್ಲಿ ಅಷ್ಟಮ ಶನಿಕಾಟ ಆರಂಭವಾಗುವುದರಿಂದ ಈಗಿನಿಂದಲೇ ವ್ಯಾಯಾಮ ನಿತ್ಯ ರೂಢಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಿಲ್ಲವೆಂದರೆ ಅಷ್ಟಮ ಶನಿಕಾಟ ಬಂದಾಗ ಆಗುವ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇರುವುದಿಲ್ಲ. ನೆನಪಿರಲಿ.
ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಉಳಿಕೆಯ ವರ್ಷವಿದಲ್ಲವೆನ್ನಬಹುದು. ಆದರೆ ಕೃತ್ತಿಕಾ ನಕ್ಷತ್ರದ ಕೊನೆಯ ಮೂರು ಚರಣದವರಿಗೆ ಮಾತ್ರ ಹಣದನುಕೂಲವಾಗುತ್ತದೆ. ಇನ್ನು ವರ್ಷದ ಮೊದಲ ನಾಲ್ಕು ತಿಂಗಳು ಲಾಭಗಳನ್ನೇ ಕಾಣುವುದರಿಂದ ಸಂತಸವಿರುತ್ತದೆ. ಆದರೆ ಕೊನೆ ಕೊನೆಗೆ ಜೇಬು ಖಾಲಿಯಾಗುವ ಸಂಭವವಿರುವುದರಿಂದ ಈಗಿನಿಂದಲೇ ಜಾಗೃತೆ ವಹಿಸಿಕೊಳ್ಳಬೇಕು. ರೋಹಿಣಿ ನಕ್ಷತ್ರದವರು ಆರಕ್ಕೇರಲ್ಲ ಮೂರಕ್ಕಿಳಿಯಂಗಿಲ್ಲ ಎನ್ನುವ ಸ್ಥಿತಿಯಿಂದ ಗಲಿಬಿಲಿಗೊಳ್ಳುವಂಥಹ ಸಮಯವಿದು. ಆದರೆ ಹೆಚ್ಚೇನೂ ಚಿಂತಿಸುವ ಅಗತ್ಯವಿಲ್ಲ. ಮುಂದಿನ ವರ್ಷ ಇದ್ದೇ ಇದೆ. [ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಮೃಗಶಿರಾ ನಕ್ಷತ್ರದವರಿಗೆ ಲಾಭದಲ್ಲೇನೂ ಕಮ್ಮಿಯಿರಲ್ಲ. ಬಂದ ಲಾಭವನ್ನು ಉಳಿಸಿಕೊಂಡು ಹೆಚ್ಚಿಸಿಕೊಳ್ಳಬೇಕು ತಪ್ಪಿಸದೇ. ಏಕೆಂದರೆ ಮುಂದೆ ಅಷ್ಟಮ ಶನಿಕಾಟದಲ್ಲಿ ಬೇಕಾಗಬಹುದು ಕೂಡಿಟ್ಟ ಗಂಟು. ವರ್ಷದ ಮೊದಲು ಮತ್ತು ಕೊನೆಯ ನಾಲ್ಕು ತಿಂಗಳು ಲಾಭದ ಮುಖ ನೋಡಿಕೊಂಡರೆ ಮಧ್ಯದ ನಾಲ್ಕು ತಿಂಗಳು ಪಿಳಿಪಿಳಿ ಕಣ್ಣು ಬಿಡುತ್ತ ಹೇಗಿದ್ದೇ ಹೇಗಾದೇ ಎನ್ನುವ ಮನೋಭಾವ ಮೂಡಬಹುದು ಮನದಲ್ಲಿ. ಆದ್ದರಿಂದ ಈಗಲೇ ಕಷ್ಟಕ್ಕಾಗುವಷ್ಟು ಹಣವನ್ನು ಬಚ್ಚಿಡಿ. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]
ಗುರುಬಲವಿಲ್ಲದೇ ಈಗಾಗಲೇ ಜೀವನವೇ ಬೇಸರವೆಂದುಕೊಂಡಿರುವ ಈ ರಾಶಿಯವರು ಆಗಸ್ಟ್ ವರೆಗೂ ದಿನದೂಡಿಕೊಳ್ಳಿ. ಆ ನಂತರ ಬರುವ ಗುರುಬಲ ಚೆನ್ನಾಗಿಯೇ ಫಲಗಳನ್ನು ನೀಡಲಾರಂಭಿಸುತ್ತಾನೆ. 2017ರ ಜನವರಿಯಿಂದ ಶನಿಕಾಟದ ಅಬ್ಬರ ಶುರುವಾಗುವುದರಿಂದ ಈಗಿನಿಂದಲೇ ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು. ಯಾವುದಕ್ಕೂ ಇನ್ನಷ್ಟು ದಿನಗಳನ್ನು ಈಗಿರುವಂತೇಯೂ ದೂಡಿಕೊಂಡು ಹೋಗುತ್ತ ಮುಂಬರುವ ಗುರುಬಲ ಕಾಯುವುದೊಂದೇ ಈ ರಾಶಿಯವರಿಗೆ ಉಳಿದಿರುವ ಏಕೈಕ ಮಾರ್ಗ. [ಸಾಡೇಸಾತಿ ಎಂದರೇನು? ಏನಿದರ ಮರ್ಮ?]
ಆದರೆ, ದೈವಾರಾಧನೆ ಮಾತ್ರ ಬಿಡಂಗಿಲ್ಲ ಎನ್ನುತ್ತಾರೆ ಸಾಮೇರು. ಯಾಕೆಂದರೆ ದೈವಾರಾಧನೆ ಮಾಡದವರಿಗೆ ಗುರು ಕೂಡ ಏನೂ ಮಾಡಂಗಿಲ್ಲ ನೆನಪಿಟ್ಟುಕೊಳ್ಳಿ. ಒಟ್ಟಿನಲ್ಲಿ ಈ ವರ್ಷ ಶೇ. 60ರಷ್ಟು ಅಶುಭ ಫಲವಿದೆ ಈ ರಾಶಿಯವರಿಗೆ. ಈ ಎಲ್ಲ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಜಾಣರ ಲಕ್ಷಣ. [ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ]
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications