ಅಧಿಕ ಮಾಸದಲ್ಲಿ ಐದು ಹನುಮನ ದರ್ಶನ ಏಕೆ?
ಈಗ ಅಧಿಕ ಆಷಾಢ ಮಾಸ ಬಂದಿರುವುದರಿಂದ ದೇವಾನುದೇವತೆಗಳು ಭೂಲೋಕದಲ್ಲಿ ವಿಹರಿಸುತ್ತಿರುತ್ತಾರೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಈ ತರಹದ ಅಧಿಕ ಮಾಸವು ಕೇವಲ ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ.
ಈ ಸಮಯದಲ್ಲಿ ಕೆಲವೊಂದು ಆಚರಣೆಗಳನ್ನು ಮಾಡಬೇಕಾಗುತ್ತದೆ. ಮಾಡಿದರೆ ತುಂಬಾ ಒಳ್ಳೆಯದು. ಆಗೋಲ್ಲ ಮತ್ತೊಮ್ಮೆ ನೋಡೋಣ ಎನ್ನುವವರು ಮತ್ತೆ ಮುಂದಿನ ನಾಲ್ಕು ವರ್ಷದವರೆಗೆ ಕಾಯಬೇಕಾಗುತ್ತದೆ.
ಅಧಿಕ ಮಾಸದಲ್ಲಿ ಮಾಡಬೇಕಾದ ಕೆಲ ಆಚರಣೆಗಳು. ತಪ್ಪಿಸದೇ ಮಾಡಿದರೆ ಒಳ್ಳೆಯದು.
* ಅದಷ್ಟು ಮನೆಯಲ್ಲಿದ್ದ ದೇವರನ್ನು ಹೆಚ್ಚಾಗಿ ತಪ್ಪಿಸದೇ ಪೂಜಿಸಬೇಕು.
* ಮನೆಗೆ ಹತ್ತಿರದ ದೇವಸ್ಥಾನಕ್ಕೆ ಪ್ರತಿನಿತ್ಯ ಭೇಟಿ ನೀಡಬೇಕು.
* ಮಂಗಳವಾರ ಅಥವಾ ಶನಿವಾರದಂದು ಕನಿಷ್ಠ ಐದು ಹನುಮನ ದೇವಸ್ಥಾನಗಳಿಗೆ ಭೇಟಿ ನೀಡಬೇಕು. ಸೂರ್ಯೋದಯದಿಂದ ಸೂರ್ಯಾಸ್ಥದೊಳಗಾಗಿ ಹನುಮನ ದರ್ಶನ ಪಡೆದುಕೊಳ್ಳಬೇಕು. ಸಾಧ್ಯವಾದರೆ ಬರಿಗಾಲಿನಿಂದಲೇ ಹೋಗಬೇಕು. ಬರೀ ಹೊಟ್ಟೆಯಲ್ಲಿ ಹೋದರೆ ತುಂಬಾ ಒಳ್ಳೆಯದು. ಮೌನ ಆಚರಣೆ ಮಾಡಿಕೊಂಡು ದರ್ಶನ ಪಡೆದುಕೊಂಡು ಬರಬಹುದು. [ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ]

* ಐದು ಹನುಮನ ದೇವಸ್ಥಾನಗಳಿಗೆ ಹೋಗುವವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆ ಹೋಗಬಹುದು.
* ಹನುಮನ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು. ಗದ್ದಲ ಮಾಡಬಾರದು. ಪ್ರತಿಯೊಂದು ದೇವಸ್ಥಾನದಲ್ಲಿ ಹನುಮಾನ ಚಾಲೀಸಾ ಪಠಿಸಬೇಕು. ನಂತರ ಮುಂದಿನ ದೇವಸ್ಥಾನಕ್ಕೆ ತೆರಳಬೇಕು.
* ದೇವಸ್ಥಾನದಿಂದ ಮರಳಿದ ನಂತರ ಕೈಕಾಲು ತೊಳೆಯುವುದು ಸ್ನಾನ ಮಾಡುವುದು ಮಾಡಬಾರದು.
* ಐದು ಹನುಮನ ದೇವಸ್ಥಾನಗಳಿಗೆ ಹೋಗುವಾಗ ಕೈಲಾದಷ್ಟು ಉಪಹಾರ ತೆಗೆದುಕೊಂಡು ಹೋಗಬಹುದು. ಅಲ್ಲಿ ಬಂದ ಕೆಲವರಿಗೆ ನಿಮ್ಮ ಕೈಲಾದಷ್ಟು ಪ್ರಸಾದ ನೀಡಬೇಕು.
* ಪ್ರತಿ ದೇವಸ್ಥಾನದಲ್ಲಿಯೂ ತೆಂಗಿನಕಾಯಿ ಒಡೆಯಬೇಕೆಂಬ ನಿಯಮವಿಲ್ಲ. ಆದರೆ ಸಂಕಲ್ಪ ಮಾಡಿಕೊಂಡಿದ್ದರೆ ಆ ತರಹ ಮಾಡಬಹುದು.
* ಐದು ಹನುಮನ ದೇವಾಲಯಗಳಲ್ಲಿ ಮುಂದಿನ ಅಧಿಕ ಆಷಾಢದಲ್ಲಿ ಇದೇ ತರಹ ದರ್ಶನಕ್ಕೆ ಬರುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು.
* ಸಾಡೇಸಾತಿ, ಅಷ್ಟಮಶನಿ, ಪಂಚಮಶನಿ, ಅರ್ಧಾಷ್ಟಮ ಶನಿಕಾಟದಲ್ಲಿರುವವರು ತಪ್ಪಿಸದೇ ಐದು ಹನುಮನ ದೇವಾಲಯಗಳಿಗೆ ಹೋಗಲೇಬೇಕು. [ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ ಸಲ್ಲಿಕೆ?]

* ಐದು ಹನುಮನ ದೇವಾಲಯಗಳನ್ನು ಮೊದಲೇ ನೋಟ್ ಮಾಡಿಟ್ಟುಕೊಂಡು, ಒಂದು ರೂಟ್ ಮಾಡಿ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚಾಗದಂತೆ ದೇವರ ದರ್ಶನ ಮಾಡಿಕೊಳ್ಳಬೇಕು.
* ಸಾಧ್ಯವಾದರೆ ದೂರದಲ್ಲಿರುವ ಆತ್ಮೀಯರಿಗೆ ಐದು ಹನುಮನ ದೇವಾಲಯಗಳನ್ನು ದರ್ಶನ ಮಾಡುವುದನ್ನು ತಿಳಿಸಬೇಕು.
* ದೇವಸ್ಥಾನದಲ್ಲಿ ದೇವರ ಹುಂಡಿಗೇನೆ ಕಾಣಿಕೆ ಹಾಕಬೇಕು.
* ಅರ್ಹ ನಿರ್ಗತಿಕರಿಗೆ ಮಾತ್ರ ಭಿಕ್ಷೆ ನೀಡಬೇಕು. ಸಬಲರಿಗೆ ಭಿಕ್ಷೆ ನೀಡಿದರೆ ಅವರ ಶನಿಕಾಟ ನೀವು ಹಂಚಿಕೊಂಡಂತೆ ಎಂಬುದನ್ನು ಮರೆಯಬಾರದು.
* ಕಪ್ಪು ಬಟ್ಟೆ ಧರಿಸಿಕೊಂಡು ದರ್ಶನಕ್ಕೆ ಹೋಗಬಾರದು.
* ಸಾಧ್ಯವಿದ್ದರೆ ಕೆಂಪು ಮತ್ತು ಅದಕ್ಕೆ ಹತ್ತಿರದ ಬಣ್ಣಗಳ ಬಟ್ಟೆಗಳನ್ನು ಧರಿಸಿಕೊಂಡು ಹೋಗಬಹುದು.
* ತಿಂಗಳಿನಲ್ಲಿ ಕೇವಲ ನಾಲ್ಕು ಶನಿವಾರಗಳು ಬಂದಿರುವುದರಿಂದ ಪ್ರತಿ ಶನಿವಾರವೂ ಹೋಗಬಹುದು ಅನುಕೂಲವಿದ್ದರೆ. ಆದರೆ ಮೊದಲ ಸಲ ಹೋದ ಹನುಮನ ದೇವಾಲಯಗಳನ್ನು ಬಿಟ್ಟು ಮತ್ತೆ ಬೇರೆ ಹನುಮನ ದೇವಾಲಯಗಳಿಗೆ ಹೋಗಿ ಬರಬೇಕು.
* ಇಂದಿನಿಂದಲೇ ಅಂದರೆ ಇಂದೇ ಶನಿವಾರದಂದು ಈ ಪದ್ಧತಿಯನ್ನು ಸಾಧ್ಯವಿದ್ದವರು ಮಾಡಬೇಕು.
* ಹನುಮನು ಚಿರಂಜೀವಿ ಎಂಬ ಪ್ರತೀತಿ ಇದೆ. ಅವನು ಧ್ಯಾನಾಸಕ್ತನಾಗಿದ್ದಾನೆ ಎಂಬುದೂ ಪ್ರತೀತಿ ಇದೆ. ಆದ್ದರಿಂದ ಹನುಮನ ದೇವಾಲಯದಲ್ಲಿ ಅತಿಯಾಗಿ ಗದ್ದಲ ಮಾಡಬಾರದು. ಅಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತು ಹನುಮನ ಸ್ಮರಣೆ ಮಾಡಬೇಕು.
* ಗಂಡ-ಹೆಂಡತಿ ಜಗಳ, ಅನಾರೋಗ್ಯದ ತೊಂದರೆ, ಅಧೈರ್ಯವಂತರು, ಪ್ರೀತಿಗಾಗಿ ಹಾತೊರೆಯುವವರು ಐದು ಹನುಮನ ದರ್ಶನ ಪಡೆದುಕೊಳ್ಳಬೇಕು. ಯಾಕೆಂದರೆ ರಾಮ-ಸೀತೆಯರನ್ನು ಕೂಡಿಸಿದವನು, ಅತೀವ ಧೈರ್ಯ ಮತ್ತು ಬಲ ಹೊಂದಿದವನು ಹನುಮನೊಬ್ಬನೇ ಎಂಬುದು ಎಲ್ಲರಿಗೂ ಗೊತ್ತಿದ್ದೇ.
* ಹನುಮನ ದೇವಾಲಯದಲ್ಲಿ ಅನುಕೂಲವಿದ್ದರೆ ಅಥವಾ ಸಾಧ್ಯವಿದ್ದರೆ ಹನುಮನ ಪಾದಗಳಿಗೆ ಹಣೆ ಹಚ್ಚುವುದನ್ನು ಮರೆಯಬಾರದು.
* ಕನಿಷ್ಠ ಐದು ಪ್ರದಕ್ಷಿಣೆಗಳನ್ನು ಹನುಮನಿಗೆ ಅವಶ್ಯ.
* ಹನುಮನ ದೇವಾಲಯದಲ್ಲಿ ಬೇರೆ ದೇವರುಗಳು ಇದ್ದರೆ, ಅವುಗಳಿಗೂ ನಮಸ್ಕರಿಸಬೇಕು.
* ಹನುಮನ ದರ್ಶನ ಮಾಡಿ ಬಂದ ನಂತರ ಚಿಟಿಕೆಯಷ್ಟು ಸಿಹಿಯನ್ನು ಹಾಕಿಕೊಳ್ಳಬೇಕು.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications