ಏಳರಾಟ ನಮಗ್ಯಾವಾಗ : ಇಮೇಲ್ ಮಾಡಿ ತಿಳಿದುಕೊಳ್ಳಿ
ಶನಿದೇವನ ಏಳರಾಟದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಾಕಷ್ಟು ಕಡೆ ಚರ್ಚೆಗಳಾಗುತ್ತಿವೆ. ಈ ಮೊದಲು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಏಕೋ ಏನೋ ಮಾಹಿತಿ ಕೊರತೆಯೋ ಅಥವಾ ಗೊತ್ತಿದ್ದವರು ಶನಿದೇವನ ಬಗ್ಗೆ ತುಟಿಬಿಚ್ಚಲು ಒಳಮನಸ್ಸಿನ ಅಪ್ಪಣೆಯಿಲ್ಲದೇ ಸುಮ್ಮನಿರುತ್ತಿದ್ದರು ಎನ್ನಬೇಕಾಗುತ್ತದೆ. ಏಕೆಂದರೆ ಶನಿದೇವನ ಬಗ್ಗೆ ಮಾತನಾಡಲೂ ಕೂಡ ಪ್ರಾಮಾಣಿಕರಿರಬೇಕು.
ಅದೂ ಅಲ್ಲದೇ ಶನಿದೇವನು ತನ್ನ ಪ್ರಭಾವದ ಬಗ್ಗೆ ಜಗತ್ತಿಗೆ ತಿಳಿಸಿಕೊಡಲು ಸೂಕ್ತವಾದ ವ್ಯಕ್ತಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಎಲ್ಲರಿಗೂ ಮಹಾನ್ ಶಕ್ತಿಶಾಲಿ ಶನಿಮಹಾತ್ಮನ ಬಗ್ಗೆ ಮಾತನಾಡಲು ಗುಂಡಿಗೆಯಿರಲ್ಲ. ತಪ್ಪೇ ಮಾಡದವರು ಈ ಜಗದಲ್ಲಿ ಯಾರೂ ಇಲ್ಲ. ಆದರೆ ಆಕಳ ಸ್ವಭಾವದಂತೆ ಜಗಕೆ ಕಾಣುತ್ತಾ, ಒಳಗೆ ಮಾತ್ರ ಕ್ರೂರ ಬುದ್ಧಿ ತುಂಬಿಕೊಂಡಂಥವರು ಮಾತನಾಡ್ಲಿ ನೋಡೋಣ ಶನಿದೇವರ ಪ್ರಭಾವದ ಬಗ್ಗೆ? [ಸಾಡೇಸಾತಿ ಎಂದರೇನು, ಏನಿದರ ಮರ್ಮ?]
ಮಹಾತ್ಮನ ಸುದ್ದಿಗೇನೆ ಬರುವುದಿಲ್ಲ ಎಷ್ಟೋ ಜನ. ಅದು ಅವರ ಆತ್ಮಕ್ಕೆ ಗೊತ್ತಿರುತ್ತದೆ ನಾನೆಂಥವನು, ನಾನೆಷ್ಟು ಒಳ್ಳೆಯವನು ಎಂದು. ಏಕೆಂದರೆ ಯಾವುದೇ ದೇವಸ್ಥಾನದಲ್ಲಿ "ಒಳ್ಳೆಯವರಿಗೆ ಮಾತ್ರ ಪ್ರವೇಶ" ಎಂದು ಎಲ್ಲಿಯೂ ಬೋರ್ಡ್ ಹಾಕಿಲ್ಲ. ಶನಿದೇವನ ದೇವಸ್ಥಾನಕ್ಕೆ ಹೋಗಬೇಡಿ ಎಂದು ಹೇಳುವವರು ಶನಿದೇವನ ದೇವಸ್ಥಾನಕ್ಕೆ ಹೋಗಿ ಬರಲಿ. ಗೊತ್ತಾಗತ್ತೆ "ಹೇಳೋದು ಆಚಾರ, ತಿನ್ನೋದು ಬದ್ನೆಕಾಯಿ" ಇವರದು ಎಂದು ಎಲ್ಲರಿಗೂ.

ಇರಲಿ, ಏಳರಾಟ ಯಾವಾಗ ಬರುತ್ತದೆ ಎಂಬುದು ದಿನಾಂಕ ಸಮೇತ ಮೊದಲೇ ಗೊತ್ತಾದರೆ ಇನ್ನೂ ಒಳ್ಳೆಯದಲ್ಲವೇ. ಇಂಥದೊಂದು ಅವಕಾಶ www.indianhoroscope.org ವೆಬ್ತಾಣ ನೀಡುತ್ತಿದೆ. ಏಳರಾಟ ತಿಳಿದುಕೊಳ್ಳಲು ಈ ಕೆಳಕಂಡ ಮಾಹಿತಿಗಳನ್ನು ವೆಬತಾಣದ [email protected] ಈ ವಿಳಾಸಕ್ಕೆ ಈಮೇಲ್ ಮಾಡಬಹುದು.
1) ಜನ್ಮದಿನಾಂಕ, ಜನ್ಮಸಮಯ, ಜನ್ಮಸ್ಥಳ.
2) ಸಂಪೂರ್ಣ ಹೆಸರು, ವಿಳಾಸ, ಉದ್ಯೋಗ,
3) ಸಾಡೇಸಾತಿಯೊಂದಿಗೆ ಬೇಕಾದಂಥ ಇತರ ಮಾಹಿತಿ.
ಈ ವಿವರಗಳನ್ನು ಈಮೇಲ್ ಕಳಿಸಿದರೆ ಜನ್ಮಜಾತಕ ರೂಪಿಸಿ ಅದರ ಮೂಲಕ ಏಳರಾಟದ ಮಾಹಿತಿ, ಕುಜದೋಷ ಹಾಗೂ ಕಾಳಸರ್ಪದೋಷದ ಕುರಿತು ಮಾಹಿತಿ ನೀಡಲಾಗುವುದು. ಒಂದು ಈಮೇಲ್ನಲ್ಲಿ ಕೇವಲ ಒಬ್ಬರ ಬಗ್ಗೆ ಮಾಹಿತಿ ನೀಡಬೇಕು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications