ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ; ಉಳಿತಾಯದ ಕಡೆಗೆ ಇರಲಿ ನಿಗಾ
ವೃಶ್ಚಿಕ ರಾಶಿಯವರು ಸಮಾಜಕ್ಕೆ ತುಡಿಯುವ ಛಲಗಾರರು. ಹಟ ಹೆಚ್ಚು ಆದರೆ ಅದರಲ್ಲಿ ಒಳಿತಿನ ಉದ್ದೇಶವೇ ಬಹುಪಾಲು. ವಿಶಾಖ (4ನೇ ಪಾದ), ಅನೂರಾಧ (4 ಪಾದ) ಮತ್ತು ಜ್ಯೇಷ್ಠ (4 ಪಾದ) ನಕ್ಷತ್ರಗಳಲ್ಲಿ ಜನಿಸಿದವರು ವೃಶ್ಚಿಕ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 9, ಇವರಿಗೆ ಕೆಂಪು ಶುಭ ಬಣ್ಣ, ದಕ್ಷಿಣ ಶುಭ ದಿಕ್ಕು. ಸುಬ್ರಹ್ಮಣ್ಯನ ಆರಾಧನೆ ವೃಶ್ಚಿಕ ರಾಶಿಯವರಿಗೆ ಶ್ರೇಯಸ್ಕರ.
ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ: ವೃಶ್ಚಿಕ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.
ವೃಶ್ಚಿಕ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)
ಆದಾಯ: 11
ವ್ಯಯ: 13
ರಾಜಮರ್ಯಾದೆ: 5
ಅವಮಾನ: 4
ಪರಾಭವ ನಾಮ ಸಂವತ್ಸರವು ವೃಶ್ಚಿಕ ರಾಶಿಯವರಿಗೆ ಮಿಶ್ರಫಲಗಳನ್ನು ನೀಡುವ ವರ್ಷವಾಗಿರುತ್ತದೆ. ಆದಾಯದ ಮಾರ್ಗಗಳು ಇದ್ದರೂ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಮನೆ, ಆರೋಗ್ಯ ಅಥವಾ ಕುಟುಂಬದ ಅಗತ್ಯಗಳಿಗೆ ಹೆಚ್ಚಿನ ವೆಚ್ಚವಾಗಬಹುದು. ಆದ್ದರಿಂದ ಹಣಕಾಸು ಯೋಜನೆ ಮತ್ತು ಉಳಿತಾಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಒಳಿತು.

ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ ಇದೆ. ವರ್ಗಾವಣೆ, ಹುದ್ದೆ ಬದಲಾವಣೆ ಅಥವಾ ಹೊಸ ಅವಕಾಶಗಳು ಎದುರಾಗಬಹುದು. ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸುವಾಗ ಸಹನೆ ಮತ್ತು ನೈಜತೆ ಅಗತ್ಯ. ವ್ಯಾಪಾರಸ್ಥರಿಗೆ ಹಳೆಯ ಯೋಜನೆಗಳ ಪರಿಶೀಲನೆ ಮಾಡಿ ಮುಂದುವರಿಯುವುದು ಲಾಭಕರ. ದೊಡ್ಡ ಹೂಡಿಕೆಗಳಿಗೆ ಈ ವರ್ಷ ಹೆಚ್ಚು ಜಾಗ್ರತೆ ಬೇಕು.
ಕುಟುಂಬದಲ್ಲಿ ಸಹಕಾರ ಮತ್ತು ಸಂಭಾಷಣೆ ಮುಖ್ಯ. ಸಣ್ಣ ಮನಸ್ತಾಪಗಳು ಉಂಟಾದರೂ ಸಮಾಧಾನದಿಂದ ಪರಿಹರಿಸಬಹುದು. ದಾಂಪತ್ಯ ಜೀವನದಲ್ಲಿ ಪರಸ್ಪರ ವಿಶ್ವಾಸ ಬೆಳೆಸುವುದು ಅಗತ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನ ಕೊಡಬೇಕು. ಸ್ನೇಹಿತರ ಅಥವಾ ಬಂಧುಗಳ ಸಹಾಯದಿಂದ ಒಂದು ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಬಹುದು.
ಆರೋಗ್ಯದ ದೃಷ್ಟಿಯಿಂದ ರಕ್ತದೊತ್ತಡ, ಚರ್ಮ ಅಥವಾ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಗೆ ಎಚ್ಚರಿಕೆ ಅಗತ್ಯ. ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಯೋಗ-ಧ್ಯಾನ ಸಹಕಾರಿ.
ಧಾರ್ಮಿಕ ಕಾರ್ಯಗಳು, ಉಪವಾಸ ಅಥವಾ ಮಂಗಳವಾರ/ಶನಿವಾರ ದೇವರ ಆರಾಧನೆ ಮನಶಾಂತಿ ನೀಡುತ್ತದೆ. ಸಹನೆ ಮತ್ತು ಆತ್ಮಸ್ಥೈರ್ಯದಿಂದ ಮುಂದುವರಿದರೆ ವರ್ಷಾಂತ್ಯದಲ್ಲಿ ಉತ್ತಮ ಫಲ ಕಾಣಬಹುದು. ಒಟ್ಟಾರೆ ಸವಾಲುಗಳ ಮಧ್ಯೆಯೂ ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಬಹುದಾದ ಸಂವತ್ಸರ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications