Solar Eclipse: ಕಂಕಣ ಸೂರ್ಯಗ್ರಹಣಕ್ಕೆ ಕ್ಷಣಗಣನೆ, ಇಲ್ಲಿದೆ ಸಮಯ ಹಾಗೂ ಪರಿಹಾರ
ಸೂರ್ಯಗ್ರಹಣ ಸಂಭವಿಸಲು ಕ್ಷಣಗಣನೆ ಶುರುವಾಗಿದ್ದು, ಖಗೋಳ ಲೋಕದ ಮತ್ತೊಂದು ಅದ್ಭುತ ಘಟನೆಗೆ ಮನುಕುಲವು ಇಂದು ಸಾಕ್ಷಿಯಾಗಲಿದೆ. ಫೆಬ್ರವರಿ ತಿಂಗಳಲ್ಲೇ ಈ ಬಾರಿ ವರ್ಷದ ಮೊದಲ ಸೂರ್ಯಗ್ರಹಣ ಬಂದಿದ್ದು, ಇಡೀ ಜಗತ್ತು ಬಾಹ್ಯಾಕಾಶ ಲೋಕದ ವಿಸ್ಮಯ ಕಣ್ತುಂಬಿಕೊಳ್ಳಲು ಈಗ ಕಾಯುತ್ತಿದೆ. ಈ ವಾತಾವರಣದಲ್ಲಿ ಕಂಕಣ ಸೂರ್ಯಗ್ರಹಣದ ಬಗ್ಗೆ ನೀವು ತಿಳಿಯಬೇಕಾದ ಹಲವು ಸಂಗತಿಗಳು ಇಲ್ಲಿವೆ ಹಾಗೂ ಕಂಕಣ ಸೂರ್ಯಗ್ರಹಣದ ಸಮಯ ಮತ್ತು ಪರಿಹಾರದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಭೂಮಿ ಎಂಬ ನಮ್ಮ ಗ್ರಹವು, ಸೂರ್ಯ ಎಂಬ ನಮ್ಮದೇ ಸೌರವ್ಯೂಹದ ನಕ್ಷತ್ರದ ಸುತ್ತಲೂ ಸುತ್ತುತ್ತದೆ. ಹೀಗಿದ್ದಾಗ ಚಂದ್ರ ಎಂಬ ಭೂಮಿಯ ಉಪಗ್ರಹ ಭೂಮಿಯ ಸುತ್ತಲೂ ಸುತ್ತುತ್ತದೆ. ಈ ನಡುವೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿ ಸುತ್ತಲೂ ಸುತ್ತು ಹಾಕುತ್ತಾ ಹಾಕುತ್ತಾ ಸೂರ್ಯ ಮತ್ತು ಭೂಮಿಯ ನಡುವೆ ಬಂದ ಸಮಯದಲ್ಲೇ ಈ ಖಗೋಳ ವಿಸ್ಮಯ ಸೂರ್ಯಗ್ರಹಣ ಸಂಭವಿಸುತ್ತದೆ.

ಭೂಮಿ & ಸೂರ್ಯನ ನಡುವೆ ಬರುವ ಚಂದ್ರ ತನ್ನ ನೆರಳನ್ನು ಭೂಮಿ ಮೇಲೆ ಬೀಳುವಂತೆ ಮಾಡಿ, ಸೂರ್ಯನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಈ ಸಮಯದಲ್ಲೇ ಸೂರ್ಯ ನಾಪತ್ತೆ ಆಗುವುದು & ಆಕಾಶದಲ್ಲಿ ಕತ್ತಲು & ಬೆಳಕಿನ ಆಟ ನಡೆಯುವುದು ಗಮನ ಸೆಳೆಯುತ್ತದೆ. ಆದರೆ ಗ್ರಹಣದಿಂದ ಮನುಷ್ಯರ ಮೇಲೆ ಕೂಡ ಹಲವು ರೀತಿಯ ಪ್ರಭಾವ ಉಂಟಾಗುತ್ತದೆ ಎಂದು ಜೋತಿಷ್ಯ ಹೇಳುತ್ತದೆ, ಹಾಗೇ ಇದಕ್ಕೆ ಪರಿಹಾರ ಕೂಡ ಸೂಚಿಸಲಾಗಿದೆ.
ಕಂಕಣ ಸೂರ್ಯಗ್ರಹಣಕ್ಕೆ ಕ್ಷಣಗಣನೆ ಆರಂಭ
ಭಾರತೀಯ ಭಾಷೆಯಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುವ ಇಂದಿನ ವಿದ್ಯಾಮಾನವು, 2026 ಫೆಬ್ರವರಿ 17 ಮಂಗಳವಾರ ಅಂದರೆ ಇಂದು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸರಿಯಾಗಿ ಆರಂಭ ಆಗಲಿದೆ. ಸೂರ್ಯಗ್ರಹಣ ಪರಿಣಾಮ ಸಂಜೆ 7 ಗಂಟೆ 58 ನಿಮಿಷದ ತನಕವೂ ಮುಂದುವರಿಯಲಿದ್ದು, ಆ ನಂತರ ಗ್ರಹಣ ಮುಕ್ತವಾಗಲಿದೆ ಭೂಮಿ. ಈ ಮೂಲಕ 2026ರ ಮೊದಲ ಸೂರ್ಯಗ್ರಹಣ ಒಟ್ಟು 4 ಗಂಟೆ 32 ನಿಮಿಷಗಳ ಕಾಲ ಸಂಭವಿಸಲಿದ್ದು, ಇಡೀ ಜಗತ್ತಿನ ಗಮನ ಇದೀಗ ಸೂರ್ಯನತ್ತ ನೆಟ್ಟಿದೆ. ಹಾಗೇ, ಇಂದು ಸಂಭವಿಸುವ ಕಂಕಣ ಸೂರ್ಯಗ್ರಹಣಕ್ಕೆ ಹಲವು ಪರಿಹಾರ ಕ್ರಮಗಳು ಕೂಡ ಇವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ ಆಗಿದೆ.
ಸೂರ್ಯಗ್ರಹಣದ ಪರಿಹಾರ ಕ್ರಮಗಳು
ಕಂಕಣ ಸೂರ್ಯಗ್ರಹಣ ಇಂದು ಫಾಲ್ಗುಣ ಮಾಸದ ಅಮಾವಾಸ್ಯೆ ತಿಥಿಯಲ್ಲಿ ಸಂಭವಿಸುತ್ತಿದ್ದು, ಈ ಹಿನ್ನೆಲೆ ನೀವು ಈ ಮಂತ್ರಗಳನ್ನ ಜಪಿಸಬಹುದು. ಓಂ ಸೂರ್ಯಾಯ ನಮಃ & ಓಂ ಘ್ರಾಣಿ ಸೂರ್ಯಾಯ ನಮಃ ಮಂತ್ರ ಜಪಿಸಬಹುದು. ಹಾಗೂ ಇದರ ಜೊತೆಗೆ ಇಂದಿನ ಕಂಕಣ ಸೂರ್ಯಗ್ರಹಣ ಭಾರತದ ನೆಲದಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಕೆಲವರು ಶಾಂತಿ & ಶುಭಕ್ಕಾಗಿ ಹಲವು ಪರಿಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಪ್ರಮುಖವಾಗಿ, ಸೂರ್ಯ ದೇವರಿಗೆ ನೀರು ಅರ್ಪಿಸಬೇಕು. ಇದರ ಜೊತೆ ಸೂರ್ಯ ಮಂತ್ರ ಜಪಿಸುವುದು, ಸೂರ್ಯನ ಪ್ರಭಾವದಲ್ಲಿರುವವರು ನೀರಿಗೆ ಬೆಲ್ಲವನ್ನ ಸೇರಿಸಿ ಅರ್ಪಿಸಬಹುದು. ಇಷ್ಟು ಕ್ರಮಗಳನ್ನು ಕಂಕಣ ಸೂರ್ಯಗ್ರಹಣ ಹಿನ್ನೆಲೆ ಅನುಸರಿಸಬಹುದು. ಹಾಗೇ ಸೂರ್ಯಗ್ರಹಣ ವೀಕ್ಷಣೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಏಕೆಂದರೆ ನೇರವಾಗಿ ಬರಿಗಣ್ಣಲ್ಲಿ ಸೂರ್ಯಗ್ರಹಣ ವೀಕ್ಷಣೆ ಅಪಾಯಕಾರಿ ಆಗಿದ್ದು, ಸೂಕ್ತ ರಕ್ಷಣಾ ಉಪಕರಣ ಬಳಸಿ ಮಾತ್ರ ವೀಕ್ಷಿಸಬೇಕು.
ಯಾವ ಯಾವ ದೇಶದಲ್ಲಿ ಗ್ರಹಣ?
2026 ಫೆಬ್ರವರಿ 17 ಮಂಗಳವಾರ ಸಂಭವಿಸುತ್ತಿರುವ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್ವಾನಾ, ನಮೀಬಿಯಾ, ಮಾರಿಷಸ್, ತಾಂಜೇನಿಯಾ ಭಾಗದಲ್ಲಿ ಕಾಣಸಿಗಲಿದೆ. ಆಫ್ರಿಕಾದ ದೇಶಗಳ ಜೊತೆಗೆ ದಕ್ಷಿಣ ಅಮೆರಿಕದ ಹಲವು ಭಾಗದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸಲಿದ್ದು, ಅರ್ಜೆಂಟಿನಾ, ಅಂಟಾರ್ಟಿಕಾ ಭಾಗವೂ ಸೇರಿದಂತೆ ಸುತ್ತಮುತ್ತ ಇರುವ ಹಲವು ಪ್ರದೇಶದಲ್ಲಿ ಕಾಣಲಿದೆ. ಆದರೆ ಭಾರತದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಹೀಗಾಗಿ ಜೋತಿಷ್ಯದ ಪ್ರಕಾರ ಯಾವುದೇ ಪ್ರಭಾವ ಇರುವುದಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ವಿಜ್ಞಾನಿಗಳು ಹಾಗೂ ಖಗೋಳ ವಿಜ್ಞಾನ ಪ್ರಿಯರು ದೂರದರ್ಶಕ ಹಿಡಿದು ಆಕಾಶದತ್ತ ಮುಖಮಾಡಿ ಕೂತಿದ್ದಾರೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications