ನಾವಿಲ್ಲಿ, ಅವನಲ್ಲಿ, ಶನಿ ನಮಗೇನು ಮಾಡಬಲ್ಲ?
ನೆನಪಿರಲಿ ಸಾಡೇಸಾತಿಯಲ್ಲಿ ಮಾತ್ರ ಶನಿ ತನ್ನ ಪ್ರಭಾವ ತೋರುತ್ತಾನೆ. ಕರ್ಮಕಾರಕನಾದ ಶನಿ ಮಹಾರಾಜನ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಬಹಳ ಒಳ್ಳೆಯದು. ಅವನ ಬಗ್ಗೆ ಕಿಂಚಿತ್ತೂ ತೆಗಳುವುದು ಲೇಸಲ್ಲ. ಇಲ್ಲವಾದಲ್ಲಿ ಅವನು ಸಾಡೇಸಾತಿಯಲ್ಲಿ ಬಂದಾಗ ತಿಳಿದುಕೊಳ್ಳುವಂತೆ ಮಾಡಿ ಅವನ ಬಗ್ಗೆ ಹೀಯಾಳಿಸಿದವರಿಗೆ ಭಾರಿ ಪಾಠ ಕಲಿಸುತ್ತಾನೆ.
ಅವನಿದ್ದಾನೆಯೇ? ಎಂದು ಓದುಗರೊಬ್ಬರು ಪಶ್ನಿಸಿದ್ದಾರೆ. ಆ ಓದುಗರ ಮೊಬೈಲ್ ಗೆ ಬರುವ ಕರೆಗಳ ತರಂಗಾಂತರ ಸ್ಯಾಟ್ ಲೈಟ್ ಗಳಿಂದ ಬರುತ್ತವೆ. ಅದೇಗೆ ಸಾಧ್ಯ ಸ್ಯಾಟ್ ಲೈಟ್ ಅಷ್ಟೊಂದು ದೂರದಲ್ಲಿರುತ್ತದೆ? ಸೂರ್ಯನ ಕಿರಣಗಳಿಂದ ಗಿಡಗಳು ಜೀವಿಸುವುದು ಹೇಗೆ? ಅದೇ ರೀತಿ ಶನಿಯ ಪ್ರಭಾವ ಕಾಣುವುದಿಲ್ಲ ಅನುಭವಿಸಿದಾಗ ಅವರವರಿಗೇನೆ ಗೊತ್ತಾಗುತ್ತದೆ ಬಿಡಿ!
ಅದೇ ರೀತಿ ಶನಿ ಮಹಾರಾಜ ಎಷ್ಟೇ ದೂರದಲ್ಲಿರಲಿ, ಅವನ ಸಾಡೇಸಾತಿ ಕಾಲದಲ್ಲಿ ಯಾರೆಲ್ಲೇ ಅಡಗಲಿ ಬಿಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲದೇ, ಆ ಪ್ರೀತಿಯ ಓದುಗ ಮಹಾಶಯರು ಶನಿಯ ಅಂತರ ತಪ್ಪಾಗಿ ಬರೆದಿದ್ದಾರೆ. ಅವನು ಭೂಮಿಯಿಂದ 886,000,000 ಮೈಲು (1,425,878,784 ಕಿ.ಮೀ) ದೂರದಲ್ಲಿದ್ದಾನೆ. ಅವರ ಪ್ರತಿಕ್ರಿಯೆಗೆ ತುಂಬು ಹೃದಯದ ಸ್ವಾಗತ.

ಸಾಡೇಸಾತಿ ಪ್ರಭಾವ ಇರುವ ಸಮಯದಲ್ಲಿ ಆ ರಾಶಿಯವರು ಯಾವುದೇ ಪರಿಸ್ಥಿತಿಯಲ್ಲೂ ಕಪ್ಪು, ನೀಲಿ ಬಣ್ಣದ ಬಟ್ಟೆ ಹಾಕಲೇಬಾರದು. ಹಾಕಿದರೆ ಶನಿಯನ್ನು ಆಕರ್ಷಿಸಿದಂತಾಗುತ್ತದೆ. ಮನುಷ್ಯ ಕಷ್ಟ ಸುಖ ಅನುಭವಿಸುವುದು ಮನಸ್ಸಿನ ಭಾವನೆಗಳಿಂದ. ಮನಸ್ಸಿನಲ್ಲಿ ದುಃಖ ಮತ್ತು ಸುಖ ಅನುಭವಕ್ಕೆ ಬರುತ್ತದೆ. ಅದೇ ರೀತಿ ಶನಿಯು ಮನಸ್ಸನ್ನು ಸಂಪೂರ್ಣ ತನ್ನ ಹತೋಟಿಗೆ ತೆಗೆದುಕೊಂಡು ತನಗೆ ಹೇಗೆ ಬೇಕೋ ಹಾಗೆ ಆಟ ಆಡಿಸಲು ಆರಂಭಿಸುತ್ತಾನೆ.
ಮತ್ತೊಬ್ಬರಿಗೆ ಒಳ್ಳೆಯತನ ಮಾಡಿದವರಿಗೆ ನೂರು ಪಟ್ಟು ಒಳ್ಳೆಯದನ್ನು ಮಾಡುತ್ತ ಹೋಗುತ್ತಾನೆ. ಕೆಟ್ಟತನವನ್ನು ಮಾಡಿದವರಿಗೆ ದುಪ್ಪಟ್ಟು ಬುದ್ಧಿ ಕಲಿಸುತ್ತ, ಅವರು ಮಾಡಿದ ಕರ್ಮಕ್ಕೆ ಪಶ್ಚಾತ್ತಾಪ ಮೂಡಿಸಿ ಮಮ್ಮಲ ಮರುಗುವಂತೆ ಮಾಡಿ ಸಾವಿನಂಚಿನವರೆಗೂ ತಂದು ನಿಲ್ಲಿಸುತ್ತಾನೆ. ಆದರೆ ಸಾವನ್ನು ಬರಲೂ ಬಿಡುವುದಿಲ್ಲ. ಏಕೆಂದರೆ ಸಾವಿನೊಂದಿಗೆ ಜೀವ ಕೊಂಡೊಯ್ಯುವವ ಯಮ ಅವನ ಸಹೋದರ!
ಈಗ ಮೀನ ರಾಶಿಯವರಿಗೆ ಶನಿ ಮಹಾರಾಜನು ಅಷ್ಟಮ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಈ ರಾಶಿಯವರಿಗೆ ಅಷ್ಟಮಶನಿಯ ಕಾಡಾಟ ಅನುಭವಕ್ಕೆ ಬಂದಿರುತ್ತದೆ. ಶನಿ ಮಹಾರಾಜನು ಯಾವ ಯಾವ ರಾಶಿಯವರಿಗೆ ಈಗ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂಬುದನ್ನು ಮುಂದಿನ ಲೇಖನದಲ್ಲಿ ಓದುವಿರಿ.
ವಾಸ್ತು ಟಿಪ್ಸ್: ಮಲಗುವಾಗ ದಕ್ಷಿಣ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಆರೋಗ್ಯ, ಐಶ್ಚರ್ಯ, ಸುಖ ನಿದ್ರೆ ಬೇಕಾದರೆ ಈ ರೀತಿ ಮಲಗಲೇಬೇಕು. [ಲೇಖಕರ ಮೊಬೈಲ್ : 9481522011]
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications