Rama Ekadashi Yoga 2024: ರಾಮ ಏಕಾದಶಿಯಂದು ಅಪರೂಪದ ಯೋಗ: ಈ ರಾಶಿಯವರು ಶ್ರೀರಾಮನಂತೆ ಬಲಶಾಲಿ
ಈ ವರ್ಷ ರಾಮ ಏಕಾದಶಿ ಉಪವಾಸದ ದಿನದಂದು ಅನೇಕ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳು ಬಹಳ ಅಪರೂಪದ ಯೋಗಗಳಾಗಿವೆ. ಹಾಗಾದರೆ ಈ ದಿನ ಯಾವ ಯೋಗಗಳು ರೂಪುಗೊಳ್ಳುತ್ತಿವೆ. ಅದರಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯೋಣ.
ರಾಮ ಏಕಾದಶಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಮಂಗಳಕರ ದಿನದಂದು ಜಗತ್ತಿಗೆ ಅಧಿಪತಿಯಾದ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ದಿನ ಏಕಾದಶಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ರಾಮ ಏಕಾದಶಿಯಂದು ಉಪವಾಸ ಮಾಡುವುದರಿಂದ ಭಕ್ತರು ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ಧಾರ್ಮಿಕ ನಂಬಿಕೆ ಇದೆ.

ಇದಲ್ಲದೆ ಈ ದಿನ ಮಾಡುವ ಉತ್ತಮ ಕಾರ್ಯಗಳು, ದಾನ ವಿಷ್ಣುವಿನ ಆಶೀರ್ವಾದವನ್ನು ಬಹುಬೇಗ ಲಭಿಸುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ವಿಷ್ಣುವಿನ ಅನುಗ್ರಹ ಪಡೆಯುವ ಭಕ್ತರು ಮರಣಾನಂತರ ವೈಕುಂಠ ಲೋಕವನ್ನು ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತದೆ.
ಈ ಶುಭ ಸಂದರ್ಭದಲ್ಲಿ ಭಕ್ತರು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಜ್ಯೋತಿಷಿಗಳ ಪ್ರಕಾರ ರಾಮ ಏಕಾದಶಿಯಂದು ಇಂದ್ರ ಯೋಗ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳಲ್ಲಿ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ, ಭಕ್ತರು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾರೆ.
ರಾಮ ಏಕಾದಶಿ 2024 ಯಾವಾಗ?
ವೈದಿಕ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕ ಅಕ್ಟೋಬರ್ 27 ರಂದು ಬೆಳಿಗ್ಗೆ 5:23 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 28 ರಂದು ಬೆಳಿಗ್ಗೆ 7:50 ಕ್ಕೆ ಕೊನೆಗೊಳ್ಳುತ್ತದೆ. ವೈಷ್ಣವ ಸಮುದಾಯದ ಅನುಯಾಯಿಗಳು ಅಕ್ಟೋಬರ್ 28 ರಂದು ರಾಮ ಏಕಾದಶಿಯನ್ನು ಆಚರಿಸುತ್ತಾರೆ. ಸ್ಥಳೀಯ ಕ್ಯಾಲೆಂಡರ್ ಪ್ರಕಾರ ದಿನಾಂಕ ಬದಲಾಗಬಹುದು.
ರಾಮ ಏಕಾದಶಿ ಶುಭ ಮುಹೂರ್ತ
ಜ್ಯೋತಿಷಿಗಳ ಪ್ರಕಾರ, ರಾಮ ಏಕಾದಶಿಯಂದು ಮೊದಲು ಬ್ರಹ್ಮಯೋಗ ರೂಪುಗೊಳ್ಳುತ್ತದೆ. ಬೆಳಗ್ಗೆ 6.48ಕ್ಕೆ ಬ್ರಹ್ಮಯೋಗ ಮುಗಿಯಲಿದೆ. ಇದಾದ ನಂತರ ಇಂದ್ರ ಯೋಗ ರೂಪುಗೊಳ್ಳುತ್ತದೆ. ಅಕ್ಟೋಬರ್ 29 ರಂದು ಬೆಳಿಗ್ಗೆ 7.49 ಕ್ಕೆ ಇಂದ್ರ ಯೋಗ ಮುಕ್ತಾಯವಾಗಲಿದೆ.
ಜ್ಯೋತಿಷಿಗಳು ಬ್ರಹ್ಮ ಮತ್ತು ಇಂದ್ರ ಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸುತ್ತಾರೆ. ಈ ಯೋಗಗಳಲ್ಲಿ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ, ಭಕ್ತರು ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಈ ದಿನ ಭಗವಾನ್ ಶಿವನು ಬೆಳಿಗ್ಗೆ 7:50 ರವರೆಗೆ ಕೈಲಾಸದಲ್ಲಿ ಕುಳಿತಿರುತ್ತಾನೆ. ಇದಾದ ಬಳಿಕ ನಂದಿಯ ಮೇಲೆ ಸವಾರಿ ಮಾಡಲಿದ್ದಾರೆ. ಕೈಲಾಸದಲ್ಲಿ ಕುಳಿತಿರುವ ಶಿವನಿಗೆ ಅಭಿಷೇಕ ಮಾಡುವುದರಿಂದ ಅಥವಾ ನಂದಿಯ ಮೇಲೆ ಸವಾರಿ ಮಾಡುವ ದೇವರಿಗೆ ಪೂಜೆ ಮಾಡುವುದರಿಂದ ಭಕ್ತರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ ಎಂದು ಜ್ಯೋತಿಷಿಗಳು ನಂಬುತ್ತಾರೆ.
ಪೂಜಾ ವಿಧಿ
ರಾಮ ಏಕಾದಶಿಯ ದಿನದಂದು ವಿಷ್ಣು ದೇವರಿಗೆ ತೆಂಗಿನಕಾಯಿ ನೀರಿನಿಂದ ಜಲಾಭಿಷೇಕ ಮಾಡಬೇಕು. ವಿಷ್ಣುವಿಗೆ ತೆಂಗಿನಕಾಯಿ ಎಂದರೆ ತುಂಬಾ ಇಷ್ಟ. ಏಕಾದಶಿಯ ದಿನದಂದು ವಿಷ್ಣು ದೇವರಿಗೆ ತೆಂಗಿನಕಾಯಿಯಿಂದ ಜಲಾಭಿಷೇಕ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಲಕ್ಷ್ಮೀ ನಾರಾಯಣ ಪೂಜೆ
ಏಕಾದಶಿಯ ದಿನದಂದು ಲಕ್ಷ್ಮೀ-ನಾರಾಯಣರನ್ನು ಪೂಜಿಸಬೇಕು. ನೈವೇದ್ಯವಾಗಿ ದೇವರಿಗೆ ಹಳದಿ ಹಣ್ಣುಗಳು ಮತ್ತು ಹಳದಿ ಸಿಹಿತಿಂಡಿಗಳನ್ನು ಅರ್ಪಿಸಿ. ಈ ದಿನ ಹಳದಿ ಬಣ್ಣದ ಬಟ್ಟೆಯನ್ನು ಮಾತ್ರ ಧರಿಸಿ ಪೂಜಿಸಬೇಕು. ಇದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.
ಯಾವ ರಾಶಿಗೆ ಉತ್ತಮ..?

ಮೇಷ ರಾಶಿ
ನಿಮ್ಮ ವೈಯಕ್ತಿಕ ಸಂಬಂಧಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಜೀವನ ಉತ್ತಮವಾಗಿರುತ್ತದೆ. ನೀವು ರಾಮನಷ್ಟೇ ಬಲಶಾಲಿಯಾಗಿರುತ್ತೀರಿ. ಸಮಸ್ಯೆಗಳನ್ನು ಬಗೆಹರಿಸುವ ಜ್ಞಾನ ನಿಮಗೆ ಇರುತ್ತದೆ. ತುಂಬಾ ಸಂತೋಷವಾದ ಜೀವನವನ್ನು ನೀವು ನಡೆಸುವಿರಿ.

ಮಿಥುನ ರಾಶಿ
ಪ್ರೀತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಿಥುನ ರಾಶಿಯವರು ತಾಳ್ಮೆ ಇರುವ ಜನರು. ಚಂದ್ರನು ನಿಮ್ಮ ಸಂಬಂಧವನ್ನು ವಿಸ್ತರಿಸುತ್ತಾನೆ. ನಿಮ್ಮ ಜೀವನದಲ್ಲಿ ಹೊಸ ಉದ್ಯೋಗ ಆರಂಭಿಸುವಿರಿ. ಅದು ನಿಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ.

ಸಿಂಹ ರಾಶಿ
ಚಂದ್ರನ ಪ್ರಭಾವವು ನಿಮ್ಮ ಸಂಬಂಧವನ್ನು ಬದಲಾಯಿಸಬಹುದು. ಇಂದು ನೀವು ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯಕ್ಕಾಗಿ ಯೋಜಿಸಬಹುದು. ಅಡೆತಡೆಗಳನ್ನು ನಿವಾರಿಸಲು ಇದು ಉತ್ತಮ ಸಮಯವಾಗಿದೆ. ವಿಷ್ಣುವಿನ ಆಶೀರ್ವಾದ ಸದಾ ಇರುತ್ತದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications