Vastu Shastra: ವಾಸ್ತು ಶಾಸ್ತ್ರವನ್ನು ಸಂಪೂರ್ಣ ಪಾಲಿಸಿದ್ರೆ ಶ್ರೀಮಂತ ಆಗ್ತರಾ? ನಿಜಾಂಶ ಇಲ್ಲಿದೆ
ವಾಸ್ತು ಶಾಸ್ತ್ರವನ್ನು ನಾವು ಸಂಪೂರ್ಣವಾಗಿ ಪಾಲಿಸಿದರೆ ಜೀವನದಲ್ಲಿ ನಮ್ಮ ಆರ್ಥಿಕ ಸುಧಾರಣೆ ಆಗುತ್ತದೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ. ಆದರೆ ಇದು ನಿಜವಾಗಿಯೂ 'ಮ್ಯಾಜಿಕ್' ತರ ಕೆಲಸ ಮಾಡುತ್ತದೆಯೇ? ಅಥವಾ ಇದಕ್ಕೆ ಹಿನ್ನಲೆಯ ಬೇರೆ ಕಾರಣಗಳು ಇದೆ? ಇದನ್ನು ಮೂರು ವಿಭಿನ್ನ ಕೋನಗಳಿಂದ ನೋಡಿದರೆ ಸ್ಪಷ್ಟ ಉತ್ತರ ಸಿಗುತ್ತದೆ.
ಮಾನಸಿಕ ಪರಿಣಾಮ
ವಾಸ್ತು ಮತ್ತು ಮನಸ್ಥಿತಿ: ವಾಸ್ತು ಮತ್ತು ಮನಸ್ಥಿತಿ ವಾಸ್ತು ಶಾಸ್ತ್ರವನ್ನು 'ಆರ್ಕಿಟೆಕ್ಚರ್ ಸೈನ್ಸ್' ಎಂದೂ ಕರೆಯಬಹುದು. ಮನೆ ಅಥವಾ ಕಚೇರಿಯಲ್ಲಿ ಬೆಳಕು, ಗಾಳಿ ಮತ್ತು ಸ್ಥಳದ ಸರಿಯಾದ ವಿನ್ಯಾಸ ಇದ್ದರೆ ಮನಸ್ಸು ಶಾಂತವಾಗಿರುತ್ತದೆ.

ಶಾಂತ ಮತ್ತು ಸಕಾರಾತ್ಮಕ ವಾತಾವರಣವು ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡ ಕಡಿಮೆಯಾದಾಗ ವ್ಯಕ್ತಿ ತನ್ನ ಕೆಲಸ ಅಥವಾ ವ್ಯವಹಾರದಲ್ಲಿ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಇದು ಸಹಜವಾಗಿಯೇ ಆದಾಯವನ್ನು ಹೆಚ್ಚಿಸುವತ್ತ ದಾರಿ ಮಾಡುತ್ತದೆ.
ವಾಸ್ತು ನಿಯಮಗಳು ಮನೆ ಮತ್ತು ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸುತ್ತವೆ. ಸ್ವಚ್ಛ ಮತ್ತು ವ್ಯವಸ್ಥಿತ ಸ್ಥಳವು ನಮ್ಮ ಚಿಂತನೆಗೂ ಸ್ಪಷ್ಟತೆ ನೀಡುತ್ತದೆ. ಈ ಸ್ಪಷ್ಟತೆ ಉತ್ತಮ ನಿರ್ಧಾರಗಳಿಗೆ ಕಾರಣವಾಗುತ್ತದೆ.
ಹಣಕಾಸು ಸ್ಥಿರತೆ: ದಿಕ್ಕುಗಳ ಮಹತ್ವ
ವಾಸ್ತು ಪ್ರಕಾರ ಕೆಲವು ದಿಕ್ಕುಗಳು ನಿರ್ದಿಷ್ಟ ಶಕ್ತಿಗಳನ್ನು ಪ್ರತಿನಿಧಿಸುತ್ತವೆ:
ದಕ್ಷಿಣ-ಪಶ್ಚಿಮ: ಸ್ಥಿರತೆಯ ಸಂಕೇತ. ಇಲ್ಲಿ ಭಾರವಾದ ವಸ್ತುಗಳನ್ನು ಇಡುವುದರಿಂದ ಅನಗತ್ಯ ಖರ್ಚು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಉಳಿತಾಯದ ಮನೋಭಾವ ಬೆಳೆಸುತ್ತದೆ.
ಉತ್ತರ ದಿಕ್ಕು: ಹೊಸ ಅವಕಾಶಗಳ ಸಂಕೇತ ಎಂದು ಹೇಳಲಾಗುತ್ತದೆ. ಈ ಭಾಗವನ್ನು ತೆರವಾಗಿಟ್ಟರೆ ಅವಕಾಶಗಳು ಹೆಚ್ಚುತ್ತವೆ ಎನ್ನಲಾಗುತ್ತದೆ. ಅಂದರೆ, ಮನಸ್ಸು ಹೊಸ ಅವಕಾಶಗಳನ್ನು ಸ್ವೀಕರಿಸಲು ಸದಾ ಸಿದ್ಧವಾಗಿರುತ್ತದೆ.
ಉತ್ತರ-ಪೂರ್ವ: ಸ್ಪಷ್ಟತೆಯ ಸಂಕೇತ ಇದಾಗಿದೆ. ಇಲ್ಲಿ ಭಾರವಿಲ್ಲದೆ ವಸ್ತುಗಳನ್ನು ಇಟ್ಟರೆ ನಿರ್ಧಾರಗಳು ಸರಿಯಾಗಿ ತೆಗೆದುಕೊಳ್ಳುತ್ತೇವೆ. ಸರಿಯಾದ ವ್ಯವಹಾರ ನಿರ್ಧಾರಗಳು ನಮ್ಮ ಲಾಭಕ್ಕೆ ದಾರಿ ಮಾಡುತ್ತವೆ.
100% ಫಲಿತಾಂಶ ಸಿಗುತ್ತದೆಯೇ?
ವಾಸ್ತು ಶಾಸ್ತ್ರವು ಸಪೋರ್ಟ್ ಸಿಸ್ಟಮ್ ಮಾತ್ರ ಎಂದು ತಜ್ಞರು ಅಭಿಪ್ರಾಯವಾಗಿದೆ, ಇದು ಪರ್ಯಾಯ ಮಾರ್ಗ ಅಲ್ಲ. ಕೇವಲ ವಾಸ್ತು ಬದಲಾವಣೆ ಮಾಡಿದರೆ ಹಣ ಬರುತ್ತದೆ ಎಂಬುದು ತಪ್ಪು ಕಲ್ಪನೆ.
ಕಠಿಣ ಪರಿಶ್ರಮವಿಲ್ಲದೆ ಯಾರಿಗೂ ಯಶಸ್ಸು ಸಿಗುವುದಿಲ್ಲ. ಆದರೆ ವಾಸ್ತು ಸರಿಯಾಗಿದ್ದರೆ, ಕೆಲಸ ಮಾಡಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಈ ವಾತಾವರಣದಲ್ಲಿ ಕೆಲಸ ಮಾಡಿದ ಪರಿಶ್ರಮಕ್ಕೆ ಫಲಿತಾಂಶ ಬೇಗ ಸಿಗಬಹುದು.
ವಾಸ್ತು ದೋಷ ಮತ್ತು ಖರ್ಚುಗಳು ಕೆಲವೊಮ್ಮೆ ವಾಸ್ತು ದೋಷ ಇರುವ ಮನೆಗಳಲ್ಲಿ ಅಜ್ಞಾತ ಅಶಾಂತಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹಲವರು ನಂಬುತ್ತಾರೆ. ಇದರಿಂದ ಗಳಿಸಿದ ಹಣ ಅನಾವಶ್ಯಕವಾಗಿ ಖರ್ಚು ಆಗುತ್ತದೆ ಎಂಬ ನಂಬಿಕೆ.
ವಾಸ್ತು ಸರಿಯಾದರೆ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನುವುದು ಒಂದು ಅಭಿಪ್ರಾಯ.
ವಾಸ್ತು ಶಾಸ್ತ್ರವನ್ನು 100% ಪಾಲಿಸಿದರೆ ಹಣ ಸ್ವತಃ ಬರುತ್ತದೆ ಎನ್ನುವುದು ಅತಿಶಯೋಕ್ತಿ. ಆದರೆ ವಾಸ್ತು ಸರಿಯಾಗಿ ಇದ್ದರೆ ಒಳ್ಳೆಯ ಮನಸ್ಥಿತಿ ಮತ್ತು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಇದು ಹಣ ಉಳಿಯಲು ಮತ್ತು ಹಣ ಗಳಿಸಲು ಸಹಾಯ ಆಗುತ್ತದೆ.














Click it and Unblock the Notifications