Horoscope Today: ದಿನ ಭವಿಷ್ಯ ಮಾರ್ಚ್ 24- ಈ ರಾಶಿಯ ಪರಶಿವನ ಕೃಪೆಯಿಂದ ಕಷ್ಟಗಳಿಗೆ ಫುಲ್ ಸ್ಟಾಪ್
ಮಾರ್ಚ್ 24 ಚೈತ್ರ ಕೃಷ್ಣ ಪಕ್ಷದ ಹತ್ತನೇ ದಿನ ಸೋಮವಾರ. ಈ ದಿನ ರಾಹುಕಾಲ ಬೆಳಗ್ಗೆ 7:52 ರಿಂದ ಬೆಳಗ್ಗೆ 9:23ರವರೆಗೆ ಇರುತ್ತದೆ. ಈ ದಿನ ಶುಭ ಯೋಗಗಳು ರೂಪಗೊಳ್ಳಲಿದ್ದು ಕೆಲ ರಾಶಿಯವರಿಗೆ ಮಂಗಳಕರವಾಗಿದೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಇಂದು ಖರ್ಚು ಮಾಡುವ ಅಭ್ಯಾಸಗಳ ಬಗ್ಗೆ ಎಚ್ಚರವಿರಲಿ. ಯಾಕೆಂದರೆ ಅನಗತ್ಯ ವೆಚ್ಚಗಳು ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು. ನಿಮ್ಮ ವ್ಯವಹಾರದ ಖ್ಯಾತಿ ಬೆಳೆಯುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ. ಮನೆಯ ಕೆಲಸದಲ್ಲಿ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ. ಇದು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಶೈಕ್ಷಣಿಕವಾಗಿ ಪ್ರತಿಯೊಂದು ಪಾಠ ಆಳವಾದ ತಿಳುವಳಿಕೆಯನ್ನು ನೀಡುತ್ತದೆ. ಕಲಿಕೆಯನ್ನು ತೃಪ್ತಿಕರ ಅನುಭವವನ್ನಾಗಿ ಮಾಡುತ್ತದೆ.

ವೃಷಭ ರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಹಾರ ಸ್ವೀಕರಿಸುವಾಗ ರುಚಿಗೆ ಪ್ರಾಮುಖ್ಯ ಕೊಡದೇ ಶುಚಿಗೆ ಹಾಗೂ ಗುಣಮಟ್ಟಕ್ಕೆ ಪ್ರಾಮುಖ್ಯ ಕೊಡಿ. ಎಲ್ಲ ವಿಧದ ವ್ಯಾಪಾರಿಗಳಿಗೂ ಅಲ್ಪ ಲಾಭ ಮಾತ್ರ ಸಿಗಲಿದೆ. ಆದುದರಿಂದ ದೊಡ್ಡ ಮಟ್ಟದ ಹೂಡಿಕೆ ಮಾಡುವುದು ಬೇಡ. ಸರಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ತೊಂದರೆ ಹಾಗೂ ಒತ್ತಡ ಹೆಚ್ಚಾಗಲಿದೆ.
ಮಿಥುನ ರಾಶಿ
ಈ ದಿನ ನಿಮಗೆ ಹಣ ಸಿಗದೆ ಕಷ್ಟವಾಗುತ್ತದೆ. ಆದರೆ ನಿಮ್ಮ ಬುದ್ಧಿವಂತಿಕೆಗೆ ಬೇರೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಅರಿಯದೇ ಕೆಲಸದ ಒತ್ತಡ ಹಾಕುತ್ತಾರೆ. ಆದರೆ ಅದನ್ನು ಸಮರ್ಥವಾಗಿ ನಿರ್ವಹಿಸಿ. ಸಾಲಗಳು ಹೆಚ್ಚಾಗಬಹುದು. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದರಿಂದ ಇಂಥ ಸಮಸ್ಯೆಗಳು ಬಹುಪಾಲು ಕಡಿಮೆ ಆಗಲಿವೆ. ಮನೆ ಕಟ್ಟುವ ಆಲೋಚನೆಗಳಿದ್ದರೆ ಭೂಮಿ ಪೂಜೆ ಮಾಡಿ, ಪ್ರಾರಂಭ ಮಾಡಿಬಿಡಿ.
ಕರ್ಕಾಟಕ ರಾಶಿ
ನೀವು ದ್ವಿಚಕ್ರ ವಾಹನ ಸವಾರರಾಗಿದ್ದಲ್ಲಿ ಸ್ವಲ್ಪವೂ ಅಸಡ್ಡೆ ಮಾಡದೇ ಹೆಲ್ಮೆಟ್ ಧರಿಸಿಯೇ ಪ್ರಯಾಣ ಮಾಡುವುದು ಒಳ್ಳೆಯದು. ಯಾವುದೇ ಚಿಕ್ಕ ವಿಚಾರಗಳನ್ನು ಎಳೆದು ದೊಡ್ಡದು ಮಾಡುವುದು ಬೇಡ. ಕನಿಷ್ಠ ಪಕ್ಷ ನೀವು ಮೌನವಾಗಿ ತಾಳ್ಮೆಯಿಂದ ಇರುವುದು ಸೂಕ್ತ. ದೂರ ಪ್ರಯಾಣಗಳಿಂದ ಉತ್ತಮ ಲಾಭಗಳಿವೆ.
ಸಿಂಹ ರಾಶಿ
ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ ಇದಾಗಿದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಬೇಕಿದ್ದಲ್ಲಿ ತಿಂಗಳ ಮೊದಲ ಎರಡು ವಾರಗಳ ಒಳಗೆ ಮುಗಿಸಿಕೊಳ್ಳುವುದು ಉತ್ತಮ. ವರ್ಗಾವಣೆಯ ಸಾಧ್ಯತೆಗಳು ಇವೆ. ಆರ್ಥಿಕವಾಗಿ ಸಮಾಧಾನಕರವಾಗಿ ಇರುತ್ತೀರಿ.
ಕನ್ಯಾ ರಾಶಿ
ಉದ್ಯೋಗದಲ್ಲಿ ನಿಮಗೆ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಬಹಳ ಜಾಗರೂಕರಾಗಿ ಇರುವುದು ಒಳ್ಳೆಯದು. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಾಣಬಹುದು. ಒತ್ತಡಗಳು ಕಡಿಮೆ ಆಗುತ್ತವೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಶುಭ ಫಲ ಸಿಗಲಿವೆ. ಇನ್ನು ಕೆಲವರಿಗೆ ಅವರು ಬಯಸದೇ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಿರುತ್ತವೆ.
ತುಲಾ ರಾಶಿ
ಸಂಬಂಧದಲ್ಲಿ ಆತ್ಮೀಯತೆ ಇರುತ್ತದೆ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮ ಗುರುವಿನಿಂದ ನಿಮಗೆ ಬೆಂಬಲ ಸಿಗುವುದು. ನಿಮಗೆ ಸರ್ಕಾರದಿಂದ ಹಣದ ಬೆಂಬಲ ಸಿಗುತ್ತದೆ. ಬೆಳಿಗ್ಗೆ ಅಗತ್ಯ ಇರುವವರಿಗೆ ಊಟ ಹಾಕಿ. ಬಿಳಿ ಬಟ್ಟೆಗಳನ್ನು ದಾನ ಮಾಡಿ ಮತ್ತು ಶಿವ ಮಂತ್ರವನ್ನು ಜಪಿಸಿ.
ವೃಶ್ಚಿಕ ರಾಶಿ
ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಭೌತಿಕ ಕ್ಷೇತ್ರದಲ್ಲಿ ಪ್ರಗತಿ ಇರುವುದು. ಆರ್ಥಿಕ ವಿಷಯಗಳಲ್ಲಿ ಏಳಿಗೆ ಕಂಡುಬರಲಿದೆ. ಮಕ್ಕಳ ವಿದ್ಯಾಭ್ಯಾಸವು ನೆಮ್ಮದಿ ಕೆಡಿಸಬಹುದು. ಆದರೂ ಚಿಂತಿಸುತ್ತಾ ಕೂರದೆ ಆ ಸಮಸ್ಯೆಗೆ ಪರ್ಯಾಯ ಮಾರ್ಗ ಹುಡುಕುವುದು ಶ್ರೇಷ್ಠ. ಕೆಲವರು ಮೋಸ ಮಾಡಿ, ನಿಮ್ಮಿಂದ ಕೆಲ ಪ್ರಮುಖವಾದ ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಎಚ್ಚರ.
ಧನು ರಾಶಿ
ನೀವು ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಶುಭ ಉತ್ಸವಗಳಲ್ಲಿ ಭಾಗವಹಿಸುವಿಕೆ ಇರುತ್ತದೆ. ಬಹುನಿರೀಕ್ಷಿತ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಗಾಯಗೊಂಡ ಯಾವುದೇ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಮತ್ತು ಹಸುವಿಗೆ ಆಹಾರ ನೀಡಿ.
ಮಕರ ರಾಶಿ
ಸಂತಸದ ವಿಚಾರ ಎಂದರೆ ನಿಧಾನ ಆದರೂ ನಿಮ್ಮ ಪರವಾಗಿ ಕೆಲಸಗಳು ಆಗುತ್ತದೆ. ಹೆಂಡತಿಯೊಂದಿಗೆ ವಿರಸ ಕಡಿಮೆ ಆಗಿ, ಅನ್ಯೋನ್ಯತೆ ಹೆಚ್ಚಾಗುವುದು. ದಾಂಪತ್ಯ ಸುಖವಾಗಿ ಇರುವುದು. ಕೆಲ ಕಾರ್ಯಕ್ರಮಗಳಿಗೆ ನೀವೇ ಪ್ರಧಾನ ಆಗುತ್ತೀರಿ. ನಿಮ್ಮ ಆಪ್ತರಿಗೆ ಆರೋಗ್ಯ ಬಾಧೆ ಇರುವುದು ಅರಿವಿಗೆ ಬರಬಹುದು. ಅದೇ ಅಥವಾ ಇಂಥ ವಿಭಿನ್ನ ಕಾರಣಗಳಿಂದಾಗಿ ನಿಮ್ಮ ಎಷ್ಟೋ ಕೆಲಸ- ಕಾರ್ಯಗಳು ಮುಂದೂಡುತ್ತೀರಿ.
ಕುಂಭ ರಾಶಿ
ಈ ದಿನ ಮಿಶ್ರ ಫಲ ನೀಡಲಿದೆ. ನ್ಯಾಯಾಲಯಗಳಲ್ಲಿ ಮಾತ್ರ ಸ್ವಲ್ಪ ನೆಮ್ಮದಿಯ ಫಲ ಸಿಗುವ ಸೂಚನೆಗಳು ಇವೆ. ಆದರೆ ನೀವು ಮಾತು ಕಡಿಮೆ ಮಾಡಿ, ಅವರ ಸಂಧಾನ ಸೂತ್ರಗಳಿಗೆ ತಲೆ ಆಡಿಸಬೇಕಾಗಬಹುದು. ನಿಮ್ಮ ಶರೀರದಲ್ಲಿ ಶಕ್ತಿ ಇದ್ದರೂ ಆಲಸ್ಯ ಮಾತ್ರ ಹೆಚ್ಚು ಆಳುತ್ತದೆ. ಅದರ ಪರಿಣಾಮವಾಗಿ ಕಾಲು ನೋವು ಹೆಚ್ಚು ಅನುಭವಿಸ ಬೇಕಾಗುತ್ತದೆ.
ಮೀನ ರಾಶಿ
ಫಲಿತಾಂಶದ ಚಿಂತೆ ಮಾಡದೆ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಚಿಕ್ಕ- ಪುಟ್ಟ ಸಾಧ್ಯತೆಗಳು ಕಾಣುತ್ತಿವೆ. ಇದೇ ಸಂದರ್ಭದಲ್ಲಿ ಕುಟುಂಬದವರಿಗೆ ಅಥವಾ ಬಾಳಸಂಗಾತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೀರಿ. ನಿಮಗೆ ಅರಿವು ಇಲ್ಲದಂತೆ ಖರ್ಚುಗಳು ಸಹ ಹೆಚ್ಚುತ್ತಾ ಹೋಗುತ್ತವೆ. ಅದಕ್ಕೆ ಕಾರಣ ಆಗುವುದು ನೀವು ಮಾಡುವ ಖರೀದಿಗಳು, ಬೆಲೆ ಬಾಳುವ ವಸ್ತುಗಳು ಎನ್ನಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications