Budhaditya Yoga 2024: ಅಕ್ಟೋಬರ್ 3 ಬುಧಾದಿತ್ಯ ಯೋಗ: ಈ ರಾಶಿಗೆ ಶೈಲಪುತ್ರಿಯ ಆಶೀರ್ವಾದ
ಅಕ್ಟೋಬರ್ 3ರಿಂದ ಶಾರದೀಯ ನವರಾತ್ರಿ ಆರಂಭವಾಗುತ್ತದೆ. ಇಂದು ದುರ್ಗಾದೇವಿಯ ರೂಪವಾದ ಶೈಲಪುತ್ರಿಯನ್ನು ಪೂಜಿಸಿ ಉಪವಾಸವನ್ನು ಮಾಡಲಾಗುತ್ತದೆ. ಈ ದಿನ ಕನ್ಯಾರಾಶಿಯ ನಂತರ ಚಂದ್ರನು ತುಲಾ ರಾಶಿಗೆ ಸಾಗಲಿದ್ದಾನೆ. ಇಂದು ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿ ಇದೆ. ನವರಾತ್ರಿಯ ಮೊದಲ ದಿನ ಐಂದ್ರ ಯೋಗ, ಬುಧಾದಿತ್ಯ ಯೋಗ ಮತ್ತು ಹಸ್ತಾ ನಕ್ಷತ್ರದ ಶುಭ ಸಂಯೋಗ ಸಂಭವಿಸಲಿದೆ.
ನವರಾತ್ರಿಯ ಮೊದಲ ದಿನದಂದು ರೂಪುಗೊಳ್ಳುವ ಮಂಗಳಕರ ಯೋಗದಿಂದ ಕೆಲ ರಾಶಿಯವರಿಗೆ ಅನುಕೂಲವಾಗಲಿದೆ. ಶೈಲಪುತ್ರಿಯನ್ನು ಪೂಜಿಸುವುದರಿಂದ ಧನಲಾಭ, ಸಂಪತ್ತು ಹೆಚ್ಚಾಗಲಿದೆ. ನವರಾತ್ರಿಯ ಕಾರಣ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಹಾಗಾದರೆ ದೇವಿ ಶೈಲಪುತ್ರಿಯ ಆಶೀರ್ವಾದ ಯಾವ ರಾಶಿಯವರ ಮೇಲಿದೆ ಎಂದು ತಿಳಿಯೋಣ.

ವೃಷಭ ರಾಶಿ
ಶಾರದೀಯ ನವರಾತ್ರಿಯ ಮೊದಲ ದಿನ ವೃಷಭ ರಾಶಿಯವರಿಗೆ ಶುಭವಾಗಲಿದೆ. ನವರಾತ್ರಿಯ ನಿಮಿತ್ತ ವೃಷಭ ರಾಶಿಯವರ ಕುಟುಂಬದಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಕುಟುಂಬದವರೆಲ್ಲರೂ ಸೇರಿ ದುರ್ಗಾದೇವಿಯನ್ನು ಪೂಜಿಸುತ್ತಾರೆ. ಹತ್ತಿರದ ದುರ್ಗಾ ದೇವಸ್ಥಾನಕ್ಕೆ ಹೋಗಬಹುದು. ಅಲ್ಲಿ ದಾನ ಕಾರ್ಯಗಳನ್ನು ಮಾಡಬಹುದು. ಸ್ವಲ್ಪ ಪ್ರಯತ್ನಿಸಿದರೆ ನಿಮ್ಮ ಹಣ ನಿಮಗೆ ಸಿಗಬಹುದು.
ಹೂಡಿಕೆ ಮಾಡಲು ಪ್ರಯೋಜನಕಾರಿ ದಿನವಾಗಿದೆ. ಕೆಲಸ ಮಾಡುವವರಿಗೆ ಕಛೇರಿಯ ವಾತಾವರಣ ಅವರವರ ಇಷ್ಟದಂತೆ ಇರುತ್ತದೆ. ಕೆಲಸದ ಒತ್ತಡವೂ ಹೆಚ್ಚಿರುವುದಿಲ್ಲ. ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಮನೆಯಲ್ಲಿ ಮನಸ್ತಾಪವಿದ್ದರೆ ದುರ್ಗೆಯ ಕೃಪೆಯಿಂದ ಎಲ್ಲಾ ರೀತಿಯ ಬಿರುಕುಗಳು ನಿವಾರಣೆಯಾಗಿ ಸಂಬಂಧಗಳು ಗಟ್ಟಿಯಾಗುತ್ತವೆ.

ಕರ್ಕ ರಾಶಿ
ನವರಾತ್ರಿಯ ಮೊದಲ ದಿನ ಕರ್ಕ ರಾಶಿಯವರಿಗೆ ಮಂಗಳಕರವಾಗಿದೆ. ಕರ್ಕಾಟಕ ರಾಶಿಯ ಜನರು ಮಾತೆ ದುರ್ಗೆಯ ಕೃಪೆಯಿಂದ ಎಲ್ಲಾ ರೀತಿಯ ಉದ್ವೇಗದಿಂದ ದೂರವಾಗುತ್ತಾರೆ. ನವರಾತ್ರಿಯ ಕಾರಣ, ಮನೆಯಲ್ಲಿ ಪೂಜೆಯ ವಾತಾವರಣವಿರುತ್ತದೆ. ನವರಾತ್ರಿಯ ಮೊದಲ ದಿನದಂದು ಉಪವಾಸ ಮಾಡುವಿರಿ. ಇದರಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಕಾರಾತ್ಮಕ ಭಾವನೆ ಅನುಭವಿಸುವಿರಿ.
ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಅದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ದುರ್ಗೆಯ ಆಶೀರ್ವಾದ ನಿಮ್ಮ ಮೇಲಿರಲಿದೆ. ಉದ್ಯೋಗಿಗಳು ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಯಾವುದೇ ಸಮಸ್ಯೆ ನಡೆಯುತ್ತಿದ್ದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯಿಂದ ಅದು ಕೊನೆಗೊಳ್ಳುತ್ತದೆ. ಪರಸ್ಪರ ಸಂಬಂಧಗಳಲ್ಲಿ ಪ್ರೀತಿ ಉಳಿಯುತ್ತದೆ.

ತುಲಾ ರಾಶಿ
ಶಾರದೀಯ ನವರಾತ್ರಿಯ ಮೊದಲ ದಿನ ತುಲಾ ರಾಶಿಯವರಿಗೆ ಹಿತಕರವಾಗಿರಲಿದೆ. ಅದೃಷ್ಟ ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಎಲ್ಲಾ ಆಸೆಗಳು ಒಂದೊಂದಾಗಿ ಈಡೇರುತ್ತವೆ. ಇದರಿಂದಾಗಿ ನಿಮ್ಮ ಅದೃಷ್ಟವನ್ನು ನಂಬಲು ಸಾಧ್ಯವಾಗುವುದಿಲ್ಲ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯೂ ಹೆಚ್ಚಾಗುತ್ತದೆ.
ನವರಾತ್ರಿಯ ಮೊದಲ ದಿನದಂದು ನೀವು ಇಡೀ ಕುಟುಂಬದೊಂದಿಗೆ ಪೂಜಿಸುತ್ತೀರಿ. ನಿಮ್ಮ ಮಾತಿನ ಮೂಲಕ ಎಲ್ಲರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಮ್ಮ ಅಪೂರ್ಣ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ಮತ್ತು ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.

ಧನು ರಾಶಿ
ನವರಾತ್ರಿಯ ಮೊದಲ ದಿನ ಧನು ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ಧನು ರಾಶಿಯವರಿಗೆ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕೆಲವು ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅದರೊಂದಿಗೆ ನಿಮ್ಮ ಪ್ರಭಾವ ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತೀರಿ.
ನವರಾತ್ರಿಯ ಕಾರಣ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಕೆಲಸ ಮಾಡುವವರು ಮತ್ತೊಂದು ಕಂಪನಿಯಿಂದ ಉದ್ಯೋಗವಕಾಶವನ್ನು ಪಡೆಯಬಹುದು. ಇದು ಅವರ ವೃತ್ತಿಜೀವನದಲ್ಲಿ ಪ್ರಗತಿಗೆ ಕಾರಣವಾಗುತ್ತದೆ. ಹೂಡಿಕೆ ಮಾಡುವುದರಿಂದ ಲಾಭವನ್ನೂ ಪಡೆಯುತ್ತೀರಿ. ಶೀಘ್ರದಲ್ಲೇ ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು.

ಮೀನ ರಾಶಿ
ಶಾರದೀಯ ನವರಾತ್ರಿಯ ಮೊದಲ ದಿನ ಮೀನ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಮೀನ ರಾಶಿಯವರು ಮಾತೆ ದೇವಿಯ ಅನುಗ್ರಹದಿಂದ ಹೊಸ ಆದಾಯದ ಮೂಲಗಳನ್ನು ಪಡೆಯುತ್ತಾರೆ.ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಬಹಳ ಸಮಯದ ನಂತರ ಬದಲಾವಣೆ ಕಂಡುಬರಲಿದೆ. ಇದರಲ್ಲಿ ನೀವು ನಿಮಗಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸುತ್ತೀರಿ. ನಿಮಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ.
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಬರುವ ಅಡೆತಡೆಗಳು ದೂರವಾಗಲಿವೆ. ಉದ್ಯೋಗಿಗಳಿಗೆ ಲವು ಹೊಸ ಕೆಲಸವನ್ನು ನಿಯೋಜಿಸಬಹುದು, ಅದನ್ನು ನೀವು ಸಂಪೂರ್ಣ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೀರಿ.
-
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications