ಎಚ್ಡಿಕೆ ಸಿಎಂ ಆಗ್ತಾರೆ ಎಂದಿದ್ದ ಪ್ರಕಾಶ್ ದಳವಿಯಿಂದ ಚುನಾವಣೆ ಭವಿಷ್ಯ
Recommended Video
ಪಂಚ ರಾಜ್ಯಗಳ ಚುನಾವಣೆ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಬಹುದು ಎಂದು ಮುಂಬೈ ಮೂಲದ ಹೆಸರಾಂತ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಭವಿಷ್ಯ ನುಡಿದಿದ್ದಾರೆ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ್ ಹಾಗೂ ತೆಲಂಗಾಣದಲ್ಲಿ ಯಾರಿಗೆ ಗೆಲುವುದ ದಕ್ಕಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಹಳ ಮುಂಚಿತವಾಗಿಯೇ ಹೇಳಿದ್ದ ಟಾರೋ ಕಾರ್ಡ್ ರೀಡರ್ ಇವರು. ಪ್ರಕಾಶ್ ದಳವಿ ನುಡಿದಿರುವ ನಾಲ್ಕು ರಾಜ್ಯಗಳ ಚುನಾವಣಾ ಭವಿಷ್ಯ ಇಂತಿದೆ.
ಪಂಚ ರಾಜ್ಯಗಳ ಫಲಿತಾಂಶದ ಬಗ್ಗೆ ಶ್ವೇತಾ ಆನಂದ್ ಟಾರೋ ಕಾರ್ಡ್ ರೀಡಿಂಗ್
ರಾಜಸ್ತಾನ: ರಾಜಸ್ತಾನದಲ್ಲಿ ಬಿಜೆಪಿಯು ತೊಂಬತ್ತೈದರಿಂದ ತೊಂಬತ್ತೇಳು ಸ್ಥಾನಗಳನ್ನು ಜಯಿಸುತ್ತದೆ. ಇತರರ ಬೆಂಬಲದ ಜತೆಗೆ ಬಿಜೆಪಿ ಅಧಿಕಾರಕ್ಕೆ ಏರಲಿದೆ. ವಸುಂಧರಾ ರಾಜೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ.
ಛತ್ತೀಸ್ ಗಢ: ಈ ರಾಜ್ಯದಲ್ಲಿ ಕರ್ನಾಟಕದಲ್ಲಿ ಉದ್ಭವಿಸಿದಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಅಜಿತ್ ಜೋಗಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲ ನೀಡಬಹುದು. ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಹೆಚ್ಚಿದೆ. ರಮಣ್ ಸಿಂಗ್ ಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶಗಳಿಲ್ಲ.
ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ಶಿವರಾಜ್ ಸಿಂಗ್ ಚೌಹಾಣ್ ಸೋಲುತ್ತಾರೆ. ಕಾಂಗ್ರೆಸ್ ನಿಂದ ಜ್ಯೋತಿರಾದಿತ್ಯ ಸಿಂದಿಯಾ ಮುಖ್ಯಮಂತ್ರಿ ಆಗುವ ಅವಕಾಶ ನಿಚ್ಚಳ ಆಗಿದೆ.
ಪ್ರಕಾಶ್ ಅಮ್ಮಣ್ಣಾಯರಿಂದ ಪಂಚ ರಾಜ್ಯ ವಿಧಾನಸಭಾ ಚುನಾವಣೆ ವಿಶ್ಲೇಷಣೆ
ತೆಲಂಗಾಣ: ಇಲ್ಲಿನ ವಿಧಾನಸಭೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆ.ಚಂದ್ರಶೇಖರ್ ರಾವ್ ಗೆಲುವು ಸಾಧಿಸಲಿದ್ದಾರೆ. ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದ್ದಾರೆ.