ಪುರುಷರೇ ಮೃಷ್ಟಾನ್ನಕ್ಕೂ ರೆಡಿಯಾಗಿ, ಚಿತ್ರಾನ್ನಕ್ಕೂ!

* ಧವಳ
ಮಿಥುನ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಸಿಂಹ ರಾಶಿ ಸ್ತ್ರೀಯರಿಗೆ ಬದಲಾವಣೆ ಅಂದೆ ತುಂಬಾ ಇಷ್ಟ. ಚಿಕ್ಕದೋ -ದೊಡ್ಡದೋ ಅಂತೂ ಬದಲಾವಣೆ ಬೇಕೇಬೇಕು. ಆದರೆ ಕೆಲಸದ ವಿಷಯಕ್ಕೆ ಬಂದಾಗ ಸಣ್ಣ ಕೆಲಸ ಮಾಡಿದರೂ ಸುಸ್ತೋ ಸುಸ್ತು. ಕೆಲಸ ಎಷ್ಟೇ ಸಾಧಾರಣ ಆಗಿರಲಿ ತಕ್ಷಣ ಹೊಗಳಿಕೆ ಬೇಕೇಬೇಕು. ಈ ವಿಷಯದಲ್ಲಿ ಸಹನೆ ಅನ್ನುವುದು ಇವರ ಹತ್ತಿರ ಸುಳಿಯದು. ಮತ್ತೊಂದು ಅಂಶ ಸಿಂಹ ರಾಶಿ ಸ್ತ್ರೀಯರಲ್ಲಿ ಇರುತ್ತದೆ. ಅದೆಂದರೆ, ಅವರು ಯಾವುದೇ ಕೆಲಸವನ್ನಾಗಲಿ, ಸಂಗತಿ ಆಗಲಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಹೆಚ್ಚಿನ ಗಮನ ಕೊಡ್ತಾರೆ. ಜೊತೆಗೆ ಇವರಿಗೆ ಶಾಪಿಂಗ್, ಡ್ರೆಸ್ ಮಾಡಿಕೊಳ್ಳುವುದು, ಹಾಯಾಗಿ ತಿಂದು ಉಂಡುಕೊಂಡು ಇರುವುದಕ್ಕೆ ಸಖತ್ ಇಷ್ಟ.
ಆದರೆ ಮಿಥುನ ರಾಶಿ ಪುರುಷ ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಡಲ್ಲು ಹಾಗೂ ಪೂರು. ಎಲ್ಲಾ ಹೆಂಗಸರು ಒಂದೇ ಬಗೆಯ ಗುಣ ಸ್ವಭಾವ ಹೊಂದಿರುತ್ತಾರೆ ಎಂದು ತಿಳಿದಿರುತ್ತಾರೆ. ಅದು ಎಂದಿಗೂ ಸಾಧ್ಯ ಅಲ್ಲದ ವಿಷ್ಯ ಅಲ್ಲವೇ ಇದು ದಂಪತಿಗಳಲ್ಲಿ ಗಲಾಟೆ ಮಾಡಲು ಕಾರಣ ಆಗುತ್ತದೆ. ತಮ್ಮ ದಾಂಪತ್ಯ ತುಂಬಾ ವಿಶಿಷ್ಟವಾದುದು, ಎಲ್ಲರಿಗೂ ಮಾದರಿ ಆಗಬೇಕು ಎಂದು ಬಯಸುತ್ತಾರೆ ಆಕೆ, ಇದು ತುಂಬಾ ಸುಲಭ ಕೆಲಸ ಅಲ್ವ ಮಿಥುನ ರಾಶಿಯವರೇ!
ಮಿಥುನ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಕನ್ಯಾ ರಾಶಿ ಪುರುಷರು ಏಕಾಂತ ಪ್ರಿಯರು. ಆದಷ್ಟು ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡ್ತಾರೆ. ತಮಾಷೆ ಅಂದ್ರೆ ತಮ್ಮ ಹೆಂಡತಿಯಿಂದಲೂ ದೂರ ಇರಬೇಕು ಎಂದು ಬಯಸ್ತಾರೆ. ಹೆಂಡತಿ ಎಲ್ಲಿಗಾದರೂ ಹೋಗಿ ಬರ್ತಾಳಂದ್ರೆ ಉಲ್ಲಾಸದಿಂದ ಪುಲಕಿತಗೊಳ್ಳುತ್ತದೆ ಈ ಪುರುಷ ಸಿಂಹ. ಅಮ್ಮ ಸದ್ಯ ನನ್ ಪಾಡಿಗೆ ನಾನು ಇರಬಹುದು ನನ್ನ ಕೆಲಸ, ಭವಿಷ್ಯದ ಬಗ್ಗೆ ಆರಾಮವಾಗಿ ಚಿಂತಿಸಬಹುದು ಎಂದುಕೊಳ್ತಾರೆ, ಆದರೆ ಅವರ ಭವಿಷ್ಯದ ಬಹುಮುಖ್ಯ ವ್ಯಕ್ತಿ ಸಂಗಾತಿಯೇ ಅಲ್ವೆ?
ಮತ್ತೊಂದು ಅತಿ ಮುಖ್ಯ ಸಂಗತಿಯೆಂದರೆ ಇವರಿಬ್ಬರು ಸ್ವಲ್ಪ ಸ್ವಾರ್ಥಿಗಳು. ತಮ್ಮ ಕೆಲಸ ತಾವು ನೋಡಿಕೊಂಡು ತಮ್ಮ ಮಿತಿಯಲ್ಲಿ ತಾವಿರ್ತಾರೆ. ಇದು ಇವರ ಬದುಕಲ್ಲಿ ಒಂದು ಅಡ್ವಾ೦ಟೇಜ್ ಆಗಿಬಿಡುತ್ತೆ ಇವರಿಬ್ಬರ ಬದುಕಲ್ಲಿ. ಯಾವಾಗ ಅವರ ಪಾಡಿಗೆ ಅವರು ಜೀವಿಸ್ತಾರೋ ಆಗ ಜಗಳಕ್ಕೆಲ್ಲಿ ಜಾಗ? ಆದರೆ ಮಿಥುನ ರಾಶಿ ಸ್ತ್ರೀಯರು ಒಂದು ಸರ್ತಿ ಒಂದು ರೀತಿ ಇದ್ರೆ ಮತ್ತೊಂದು ಸರ್ತಿ ಮತ್ತೊಂದು ಸ್ವಭಾವ ಹೊಂದಿರ್ತಾರೆ. ಮಿ. ಕನ್ಯಾ ರಾಶಿ ಅವರು ಚಿತ್ರಾನ್ನ ಖುಷಿಯಾಗಿ ಮಾಡಿಕೊಟ್ಟಾಗ ಅದನ್ನು ನೀವು ಹ್ಯಾಪಿಯಾಗಿ ತಿನ್ನಿ, ಅದೇ ಖುಷಿಯಿಂದ ಅದೇ ತಿಂಡಿ ಮಾಡಿಕೊಡ್ತಾರೆ ಎಂದು ಇನ್ನೊಂದಿನ ನೀವು ಬಯಸುವುದು ತಪ್ಪು. ನಿಮ್ಮ ತಟ್ಟೆಯಲ್ಲಿ ರಪ್ ಎಂದು ಉಪ್ಪಿಟ್ಟು ಬೀಳುವ ಸಂಭವ ಅಧಿಕ! ಅದನ್ನೇ ಕಾರಣವಾಗಿಟ್ಟುಕೊಂಡು ಕಲಹಕ್ಕೆ ದಾರಿ ಮಾಡಿಕೊಳ್ಳದೆ ಕೊಟ್ಟದ್ದನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications